ಚಿನ್ನ ಗೆದ್ದ ಹಿಮಾ ದಾಸ್‌ಗೆ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಹುಮಾನ

Published : Jul 15, 2018, 11:48 AM IST
ಚಿನ್ನ ಗೆದ್ದ ಹಿಮಾ ದಾಸ್‌ಗೆ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಹುಮಾನ

ಸಾರಾಂಶ

ದರ್ಲೆಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಿಮಾ ದಾಸ್‌ಗೆ ಬಹುಮಾನಗಳು ಹರಿದುಬರುತ್ತಿದೆ. ಇದೀಗ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಗುಮಾನ ಘೋಷಿಸಿದ್ದಾರೆ.  

ಬೆಂಗಳೂರು(ಜು.15): ವಿಶ್ವ ಅಂಡರ್-20  ಅಥ್ಲೆಟಿಕ್ಸ್ ಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತದ ಯುವ ಮಹಿಳಾ ಅಥ್ಲೀಟ್ ಹಿಮಾ ದಾಸ್‌ಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ₹10 ಲಕ್ಷ ಬಹುಮಾನ ನೀಡಲಿದ್ದಾರೆ. 

ತಮ್ಮ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ಹಿಮಾಗೆ ನಗದು ಬಹುಮಾನ ನೀಡುವುದಾಗಿ ಶನಿವಾರ ಅವರು ಟ್ವೀಟರ್‌ನಲ್ಲಿ ತಿಳಿಸಿದರು. ಇದೇ ವೇಳೆ ಹಿಮಾ ಸಾಧನೆಯನ್ನು ಪರಮೇಶ್ವರ್ ಕೊಂಡಾಡಿದ್ದಾರೆ. 

ಐಎಎಎಫ್ ವರ್ಲ್ಡ್ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆದ್ದು ವಿಶ್ವಮಟ್ಟದಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದ್ದರು. 400 ಮೀಟರ್ ಓಟದಲ್ಲಿ ಹಿಮಾ ದಾಸ್ ಪ್ರಬಲ ಸ್ಪರ್ಧಿಗಳಾದ ರೊಮೆನಿಯಾದ ಆಂಡ್ರೆ ಮಿಕ್ಲೋಸ್ ಹಾಗೂ ಅಮೇರಿಕಾದ ಟೈಲರ್ ಮ್ಯಾನ್ಸನ್ ಅವರನ್ನ ಹಿಂದಿಕ್ಕಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 

ಹಿಮಾ ದಾಸ್ ಸಾಧನೆಯನ್ನ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. ಟ್ವಿಟರ್ ಮೂಲಕ ವೀಡಿಯೋ ಅಪ್‌ಲೋಡ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಹೈದರಾಬಾದ್ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಎಂದು ಕರೆದ ಟ್ರಾನ್ಸ್‌ಲೇಟರ್! ವಿಡಿಯೋ ವೈರಲ್
IPL 2026 ಅಣಕು ಹರಾಜಿನಲ್ಲಿ ಅತಿಹೆಚ್ಚು ಬಿಡ್ ಆದ ಆಟಗಾರ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್