ಶ್ರೀಕಾಂತ್’ಗೆ ಧೋನಿ ಬ್ಯಾಟ್ ಉಡುಗೊರೆ

Published : May 21, 2018, 04:07 PM IST
ಶ್ರೀಕಾಂತ್’ಗೆ ಧೋನಿ ಬ್ಯಾಟ್ ಉಡುಗೊರೆ

ಸಾರಾಂಶ

ಈ ವಿಚಾರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಶ್ರೀಕಾಂತ್, ’ಈ ಅದ್ಭುತವಾದ ಗಿಫ್ಟ್ ನೀಡಿದ್ದಕ್ಕೆ ಧೋನಿಗೆ ಧನ್ಯವಾದಗಳು. ನಾನೆಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಷ್ಟು ಖುಷಿಯಾಗಿದ್ದೇನೆ’ ಎಂದು ಧೋನಿ ಹಸ್ತಾಕ್ಷರವಿರುವ ಬ್ಯಾಟ್’ನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ನವದೆಹಲಿ[ಮೇ.21]: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ಧೋನಿ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ವಿಶ್ವ ನಂ.4 ಬ್ಯಾಡ್ಮಿಂಟನ್ ಆಟಗಾರ ಕಿದಾಂಬಿ ಶ್ರೀಕಾಂತ್'ಗೆ ಕಾಣಿಕೆಯಾಗಿ ನೀಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ. 
‘ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಶ್ರೀಕಾಂತ್, ನನ್ನನ್ನು ವಿಕೆಟ್ ಕೀಪಿಂಗ್‌ಗೆ ಪರಿಚಯಿಸಿದ ನನ್ನ ಗುರು ಕೆ.ವಿ.ಎಸ್. ಕೃಷ್ಣಾ ಅವರ ಮಗ. ಕೆಲ ದಿನಗಳ ಹಿಂದೆ ಧೋನಿ ಹಸ್ತಾಕ್ಷರಕ್ಕಾಗಿ ಶ್ರೀಕಾಂತ್ ನನ್ನ ಬಳಿ ಕೇಳಿದ್ದರು. ಧೋನಿ ಬಳಿ ಈ ವಿಷಯ ತಿಳಿಸಿದಾಗ ಬಹಳ ಸಂತೋಷದಿಂದ ಬ್ಯಾಟ್ ಮೇಲೆ ಸಹಿ ಹಾಕಿ, ವಿಶೇಷ ಸಂದೇಶದೊಂದಿಗೆ ಉಡುಗೊರೆ ನೀಡಿದ್ದಾರೆ’ ಎಂದು ಪ್ರಸಾದ್ ಹೇಳಿದ್ದಾರೆ.

ಈ ವಿಚಾರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಶ್ರೀಕಾಂತ್, ’ಈ ಅದ್ಭುತವಾದ ಗಿಫ್ಟ್ ನೀಡಿದ್ದಕ್ಕೆ ಧೋನಿಗೆ ಧನ್ಯವಾದಗಳು. ನಾನೆಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಷ್ಟು ಖುಷಿಯಾಗಿದ್ದೇನೆ’ ಎಂದು ಧೋನಿ ಹಸ್ತಾಕ್ಷರವಿರುವ ಬ್ಯಾಟ್’ನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!