
ರೋಹ್ಟಕ್(ಜು.17): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ತಂದೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರ ಅಂಗಡಿಯಿಂದ ಹಣ ದೋಚಿದ್ದಾರೆ.
ಜೋಗಿಂದರ್ ಅವರ ತಂದೆ(68) ಓಂ ಪ್ರಕಾಶ್ ಅವರು ಅಂಗಡಿ ನಡೆಸುತ್ತಿದ್ದು, ಶನಿವಾರ ಸಂಜೆ ಬಾಗಿಲು ಬಂದ್ ಮಾಡಿ ಹೊರಡುವ ವೇಳೆ ಇಬ್ಬರು ಯುವಕರು ಆಗಮಿಸಿ ಸಿಗರೇಟ್ ಮತ್ತು ತಂಪು ಪಾನೀಯ ಖರೀದಿಸಿ ವಾಪಸ್ ಹೋಗಿದ್ದರು. ಸ್ವಲ್ಪ ಸಮಯದ ನಂತರ ಬಂದ ಅದೇ ಯುವಕರು ಓಂ ಪ್ರಕಾಶ'ರ ಮೇಲೆ ಚಾಕುವಿನಿಂದ ಅಂಗಡಿಯಿಂದ 7 ಸಾವಿರಕ್ಕೂ ಹೆಚ್ಚು ನಗದನ್ನು ದೋಚಿದ್ದಾರೆ.
ಹಲ್ಲೆಗೊಳಗಾದ ಓಂ ಪ್ರಕಾಶ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.