
ಪುಣೆ(ಮೇ.14): ಕಿಂಗ್ಸ್ ಇಲೆವೆನ್ ಪಂಜಾಬ್'ಗೆ ಪ್ಲೇ-ಆಫ್ ಸ್ಥಾನ ಕೈತಪ್ಪಲು ವಿದೇಶಿ ಆಟಗಾರರೇ ಕಾರಣ ಎಂದು ಪಂಜಾಬ್ ತಂಡದ ಮುಖ್ಯ ಕೋಚ್ ವೀರೇಂದ್ರ ಸೆಹ್ವಾಗ್ ಆರೋಪಿಸಿದ್ದಾರೆ.
ಪುಣೆ ವಿರುದ್ಧ ಹೀನಾಯ ಸೋಲಿನ ಬಳಿಕ ಮಾತನಾಡಿದ ಅವರು, ‘‘ನನಗೆ ತುಂಬಾ ಬೇಸರವಾಗಿದೆ. ಯಾವುದೇ ವಿದೇಶಿ ಆಟಗಾರ ಜವಾಬ್ದಾರಿ ಅರಿತು 12-15 ಓವರ್ ಬ್ಯಾಟಿಂಗ್ ಮಾಡಲು ಪ್ರಯತ್ನಿಸಲಿಲ್ಲ. ಯಾರಾದರೂ ಒಬ್ಬರು ಕ್ರೀಸ್'ನಲ್ಲಿ ನೆಲೆಯೂರಬೇಕು ಎನ್ನುವ ಕನಿಷ್ಠ ಸಮಯಪ್ರಜ್ಞೆ ಅವರಲ್ಲಿ ಇರದೆ ಹೋಗಿದ್ದು ನನಗೆ ಅಚ್ಚರಿ ಮೂಡಿಸಿತು’’ ಎಂದು ಸೆಹ್ವಾಗ್ ಹೇಳಿದ್ದಾರೆ.
‘‘ಪಿಚ್ ತುಸು ನಿಧಾನವಾಗಿತ್ತು ಎಂದು ಅವರೆಲ್ಲಾ ಕಾರಣ ಹೇಳಿದರು. ಆದರೆ ಅಷ್ಟೊಂದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವರು ಇಂತಹ ಕಾರಣ ನೀಡುವುದು ಸರಿಯಲ್ಲ’’ ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.