ಐಸಿಸಿ ಸಭೆಯಿಂದ ಭಾರತವನ್ನು ಬಹಿಷ್ಕರಿಸಿ: ಎಹ್ಸಾನ್‌ ಮಣಿ ಕಿಡಿ

Published : Oct 05, 2016, 03:11 PM ISTUpdated : Apr 11, 2018, 12:55 PM IST
ಐಸಿಸಿ ಸಭೆಯಿಂದ ಭಾರತವನ್ನು ಬಹಿಷ್ಕರಿಸಿ: ಎಹ್ಸಾನ್‌ ಮಣಿ ಕಿಡಿ

ಸಾರಾಂಶ

ಕರಾ​ಚಿ(ಅ.05): ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ (ಐ​ಸಿ​ಸಿ) ಎಲ್ಲಾ ಸಭೆ​ಗ​ಳಿಂದ ಭಾರ​ತೀಯ ಕ್ರಿಕೆಟ್‌ ಮಂಡ​ಳಿ​ಯನ್ನು (ಬಿ​ಸಿ​ಸಿ​ಐ) ಬಹಿ​ಷ್ಕ​ರಿ​ಸು​ವಂತೆ ಐಸಿ​ಸಿಯ ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿಯು (ಪಿ​ಸಿ​ಬಿ) ಒತ್ತಡ ಹೇರ​ಬೇ​ಕೆಂದು ಐಸಿಸಿ ಮಾಜಿ ಅಧ್ಯಕ್ಷ, ಪಾಕಿ​ಸ್ತಾ​ನದ ಎಹ​ಸಾನ್‌ ಮಣಿ ಆಗ್ರ​ಹಿ​ಸಿ​ದ್ದಾರೆ.

ಇತ್ತೀ​ಚೆಗೆ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿಯೆ ನೀಡಿದ್ದ ಬಿಸಿ​ಸಿಐ ಅಧ್ಯಕ್ಷ ಅನು​ರಾಗ್‌ ಠಾಕೂರ್‌, ‘‘ಪಾಕಿ​ಸ್ತಾನ ಕ್ರಿಕೆಟ್‌ ತಂಡ​ದೊಂದಿಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾ​ವ​ಳಿ​ಗ​ಳಲ್ಲಿ ಆಡಲಿಚ್ಛಿ​ಸು​ವು​ದಿಲ್ಲ’’ ಎಂದಿ​ದ್ದ​ರು. ಠಾಕೂರ್‌ ಅವರ ಈ ಹೇಳಿಕೆಗೆ ಕಂಡಾ​ಮಂಡ​ಲ​ವಾ​ಗಿ​ರುವ ಮಣಿ, ‘‘ಠಾಕೂರ್‌ ಆಡ​ಳಿತ ಪಕ್ಷದ ಸಂಸದ. ಆದರೆ, ಬಿಸಿ​ಸಿ​ಐ​ನಂಥ ಕ್ರೀಡಾ ಸಂಸ್ಥೆ​ಯೊಂದರ ಅಧ್ಯ​ಕ್ಷ​ಗಿ​ರಿ​ಯಲ್ಲಿ ಕುಳಿ​ತಿ​ರುವ ಅವರು ಐಸಿಸಿಯ ಇತರ ಸದಸ್ಯ ಕ್ರಿಕೆಟ್‌ ಮಂಡ​ಳಿ​ಗ​ಳನ್ನು ಟೀಕಿ​ಸು​ವುದು ಐಸಿಸಿ ಸಂವಿ​ಧಾ​ನಕ್ಕೆ ಅಪ​ಚಾರ ಎಸ​ಗಿ​ದಂತೆ. ಠಾಕೂರ್‌ ಅಧಿ​ಕಾ​ರದ ಪರಿ​ಮಿ​ತಿ​ಗ​ಳ ಬಗ್ಗೆ ಮುಂದಿನ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಅವ​ರನ್ನು ಆಗ್ರ​ಹಿ​ಸ​ಬೇ​ಕು’’ ಎಂದಿದ್ದಾರೆ.

‘‘ಭಾರ​ತವು ಮುಂದಿನ ವರ್ಷದ ಚಾಂಪಿ​ಯನ್ಸ್‌ ಟ್ರೋಫಿ ಸೇರಿ​ದಂತೆ ಯಾವುದೇ ಅಂತಾ​ರಾ​ಷ್ಟ್ರೀಯ ಟೂರ್ನಿ​ಗ​ಳ ಗ್ರೂಪ್‌ ಹಂತದ ಪಂದ್ಯ​ಗ​ಳಲ್ಲಿ ಪಾಕಿ​ಸ್ತಾನ ವಿರುದ್ಧ ಆಡು​ವು​ದಿ​ಲ್ಲ​ಎಂದು ಹೇಳು​ತ್ತಿದೆ. ಆದರೆ, ನಾನು ಭಾರ​ತ​ದೊಂದಿಗೆ ಪಾಕಿ​ಸ್ತಾ​ನ ಯಾವುದೇ ಟೂರ್ನಿಯ ಗುಂಪು ಹಂತ​ದಲ್ಲಿಯೂ ಆಡ​ಕೂ​ಡದು ಎಂದು ಕಳೆದ ಹತ್ತು ವರ್ಷ​ಗ​ಳಿಂದ ಆಗ್ರ​ಹಿ​ಸು​ತ್ತಿ​ದ್ದೇನೆ’’ ಎಂದಿದ್ದಾರೆ. ಇನ್ನು, ‘‘ಭಾರ​ತ- ಪಾಕಿ​ಸ್ತಾನ ಕ್ರಿಕೆಟ್‌ ಸರ​ಣಿಯಿಂದ ಹೆಚ್ಚಿನ ಲಾಭ​ವಿ​ರು​ವುದು ಭಾರ​ತಕ್ಕೇ. ಆದರೂ ಅದು ನಮ್ಮೊಂದಿಗೆ (ಪಿ​ಸಿ​ಬಿ​) ಕ್ರಿಕೆಟ್‌ ಬೇಡ​ವೆಂದು ಹೇಳು​ತ್ತಿ​ದೆ’’ ಎಂದು ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?