
ಕಾನ್ಪುರ(ಸೆ.14): ಬಾಬಾ ಇಂದ್ರಜಿತ್ ಅಮೋಘ ಶತಕದ ಹೊರತಾಗಿಯೂ, ದುಲೀಪ್ ಟ್ರೋಫಿ 2ನೇ ಹಗಲು-ರಾತ್ರಿ ಪಂದ್ಯದಲ್ಲಿ ಇಂಡಿಯಾ ರೆಡ್ ವಿರುದ್ಧ ಬ್ಲೂ ತಂಡ ಮೇಲುಗೈ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ರೆಡ್ ವೇಗಿಗಳಾದ ಅಂಕಿತ್ ಹಾಗೂ ಜಯ್'ದೇವ್ ದಾಳಿಗೆ ಕುಸಿಯಿತು.
ಒಂದು ಹಂತದಲ್ಲಿ 205 ರನ್'ಗೆ 9 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ತಮಿಳು ನಾಡು ಆಟಗಾರ ಬಾಬಾ ಇಂದ್ರಜಿತ್ ಹಾಗೂ ವಿಜಯ್ ಗೋಯಿಲ್ ಆಸರೆಯಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಭಾರತ ರೆಡ್ ಮೊದಲ ಇನ್ನಿಂಗ್ಸ್: 291/9(ಮೊದಲ ದಿನದಂತ್ಯಕ್ಕೆ) (ಇಂದ್ರಜಿತ್ ಅಜೇಯ: 120, ಅಂಕಿತ್ 44/2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.