
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೌರವ ಡಾಕ್ಟರೇಟ್'ಅನ್ನು ನಿರಾಕರಿಸಿದ್ದಾರೆ. ದ್ರಾವಿಡ್ ಅವರ ಸಾಧನೆಗೆ ಪುರಸ್ಕಾರ ನೀಡುವ ಸಲುವಾಗಿ ಬೆಂಗಳೂರು ವಿಶ್ವವಿದ್ಯಾಲಯವು ಈ ವರ್ಷ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ ಈ ಗೌರವವನ್ನು ಭಾರತದ ಗೋಡೆ ಎಂದು ಖ್ಯಾತರಾಗಿದ್ದ ದ್ರಾವಿಡ್ ನಿರಾಕರಿಸಿದ್ದಾರೆ.
ಅವರು ನಿರಾಕರಿಸಲು ಕಾರಣ ಇಷ್ಟೆ 'ತಾವು ಏನೇ ಸಾಧನೆ ಮಾಡಿದರೂ ಅದಕ್ಕೆ ತಕ್ಕುದಾದ ಶ್ರಮವಿರಬೇಕು. ಸುಖಾಸುಮ್ಮನೆ ಯಾವುದೇ ಪ್ರಶಸ್ತಿ ಗೌರವಗಳು ಬೇಡ. ಡಾಕ್ಟರೇಟ್ ಪಡೆಯಬೇಕಾದರೆ ಓದಿಯೇ ಪಡೆಯುತ್ತೇನೆ' ಎಂದು ಪ್ರಶಸ್ತಿ ಬೇಡ ಎಂದಿದ್ದಾರೆ. ಈ ಮೊದಲು ಕಲಬುರಗಿ ವಿವಿ ಕೂಡ ಡಾಕ್ಟರೇಟ್ ಘೋಷಿಸಿತ್ತು. ಅದನ್ನು ಕೂಡ ದ್ರಾವಿಡ್ ತಿರಸ್ಕರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.