
ಮುಂಬೈ(ಅ.17): ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಮತ್ತು ದೆಹಲಿ ನಡುವಿನ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ, ಎರಡು ತಂಡಗಳ ಪರವಾಗಿ ಒಂದೊದು ತ್ರಿಶತಕ ದಾಖಲಾಗಿವೆ.
ಮಹಾರಾಷ್ಟ್ರದ ಪರ ಉತ್ತಮ ಬ್ಯಾಟ್ ಬೀಸಿದ ಸ್ವಪ್ನಿಲ್ ಗುಗಲೆ ಮೊದಲು ತ್ರಿಕಶತಕ ಬಾರಿಸಿ ಮಿಂಚಿದರೆ. ಕೊನೆಯ ದಿನವಾದ ನಿನ್ನೆ ದೆಹಲಿ ಪರ ಭರ್ಜರಿ ಪ್ರದರ್ಶನ ನೀಡಿದ ರಿಶಬ್ ಪಂತ್ ಚೊಚ್ಚಲ ತ್ರಿಶತಕ ಸಿಡಿಸಿದ್ದಾರೆ.
ರಿಶಬ್ ಪಂತ್ ತಮ್ಮ 4ನೇ ಪ್ರಥಮ ದರ್ಜೆ ಪಂದ್ಯದಲ್ಲೇ 326 ಬಾಲ್ನಲ್ಲಿ 308 ರನ್ ಬಾರಿಸಿ ಗಮನ ಸೆಳೆದಿದ್ದು, ಪಂತ್ ಈ ವರ್ಷ ಅಂಡರ್-19 ವರ್ಲ್ಡ್ಕಪ್ನಲ್ಲಿ ಆಡಿದ್ದರು. ಮುಂದೆ ಟೀಮ್ ಇಂಡಿಯಾದ ಕದ ತಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.