ಶುಕ್ರವಾರದಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ಸಮಯ ಹೊಂದಾಣಿಕೆಗಾಗಿ ಹೆಣಗಾಡಬೇಕಾಗಿದೆ ಎಂದಿದ್ದಾರೆ.
ನವದೆಹಲಿ(ನ.23): ಬಿಸಿಸಿಐನ ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಕಿಡಿಕಾರಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿದೇಶಿ ಸರಣಿ ಕೈಗೊಳ್ಳುವಾಗ ಸರಿಯಾದ ಪ್ಲಾನ್ ಮಾಡಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಾಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಸರಣಿ ಮುಗಿದ ಕೇವಲ 2 ದಿನಗಳ ಬಿಡುವಿನ ಬಳಿಕ ಭಾರತ ತಂಡವು 3 ಟೆಸ್ಟ್, 6 ಒನ್'ಡೇ ಹಾಗೂ 3 ಟಿ20 ಪಂದ್ಯವನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದು ವಿದೇಶಿ ಪ್ರವಾಸ ಕೈಗೊಳ್ಳುವಾಗ ಇದು ಸರಿಯಾದ ಪೂರ್ವಸಿದ್ದತೆಯಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಸುಮಾರು 2 ತಿಂಗಳ ಸರಣಿಯಿರುವುದರಿಂದ ಬಿಡುವಿಲ್ಲದೇ ಕ್ರಿಕೆಟ್ ಆಡುವುದು ಕ್ರಿಕೆಟ್ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರದಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ಸಮಯ ಹೊಂದಾಣಿಕೆಗಾಗಿ ಹೆಣಗಾಡಬೇಕಾಗಿದೆ ಎಂದಿದ್ದಾರೆ.