ಉಚಿತ ಟಿಕೆಟ್ ಜಗಳ-ನಿರ್ಧಾರ ಸಡಿಸಿಲಿದ ಬಿಸಿಸಿಐ!

Published : Oct 07, 2018, 11:56 AM IST
ಉಚಿತ ಟಿಕೆಟ್ ಜಗಳ-ನಿರ್ಧಾರ ಸಡಿಸಿಲಿದ ಬಿಸಿಸಿಐ!

ಸಾರಾಂಶ

ಉಚಿತ ಟಿಕೆಟ್ ವಿಚಾರದ ಜಗಳಕ್ಕೆ ತೆರೆ ಎಳೆಯಲು ಬಿಸಿಸಿಐ ಮುಂದಾಗಿದೆ. ಮಧ್ಯಪ್ರದೇಶ, ತಮಿಳುನಾಡು ಹಾಗೂ ತಮಿಳುನಾಡು ಸೇರಿದಂತೆ ಹಲವು ರಾಜ್ಯ ಸಂಸ್ಥೆಗಳ ಭಾರಿ ವಿರೋಧದಿಂದ ಬಿಸಿಸಿಐ ತನ್ನ ಪಟ್ಟು ಸಡಿಸಿಲಿದೆ.

ನವದೆಹಲಿ(ಅ.07): ಉಚಿತ ಪಾಸ್ ಹಂಚಿಕೆಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ಬಿಸಿಸಿಐ ಆಡಳಿತ ಮಂಡಳಿ(ಸಿಒಎ) ತನ್ನ ನಿರ್ಧಾರ ಸಡಿಲಿಸಿದ್ದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ. ಈ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆಗಳ ವಾದಕ್ಕೆ ಮಣಿದಿದೆ.

ಶನಿವಾರ ನಡೆದ ಸಭೆಯಲ್ಲಿ ವಿನೋದ್ ರೈ ನೇತೃತ್ವದ ಆಡಳಿತ ಮಂಡಳಿ (ಸಿಒಎ), ತನ್ನ ಪಾಲಿನ 1200 ಟಿಕೆಟ್‌ಗಳಲ್ಲಿ 604  ಟಿಕೆಟ್‌ಗಳನ್ನು ಪಂದ್ಯ ಆಯೋಜಿಸುವ ಸಂಸ್ಥೆಗಳಿಗೆ ಬಿಟ್ಟುಕೊಡಲು ನಿರ್ಧರಿಸಿದೆ. 

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಪಂದ್ಯದ ಶೇ.90 ರಷ್ಟು ಟಿಕೆಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಶೇ.10 ರಷ್ಟು ಟಿಕೆಟ್‌ಗಳಲ್ಲಿ 5ರಷ್ಟು ನೀಡಬೇಕಿತ್ತು. ಇದೇ ಕಾರಣಕ್ಕೆ ಇಂದೋರ್‌ನಲ್ಲಿ ಆಯೋಜನೆಯಾಗಿದ್ದ ವೆಸ್ಟ್ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ವಿಶಾಖಪಟ್ಟಣಂಗೆ ಸ್ಥಳಾಂತಗೊಂಡಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ
ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!