
ನವದೆಹಲಿ(ಮಾ.22): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವಮಾನಕಾರಿಯಾಗಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಾಜಸ್ತಾನ ಕೋರ್ಟ್ ಜೋಧ್'ಪುರ ಪೊಲೀಸರಿಗೆ ಎಫ್'ಐಆರ್ ದಾಖಲಿಸುವಂತೆ ಸೂಚಿಸಿತ್ತು. ಆದರೆ ಆ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಆ ಟ್ವಿಟರ್ ಖಾತೆ ನಕಲಿ ಎಂಬ ವಿಚಾರ ಬಯಲಾಗಿದೆ.
ಅಂಬೇಡ್ಕರ್ ಕುರಿತು ಅವಹೇಳನಾಕಾರಿಯಾಗಿ ಟ್ವೀಟ್ ಮಾಡಿದ ಅಕೌಂಟ್ @sirhardik3777 ಆಗಿದ್ದು, ಪಾಂಡ್ಯ ಅಧಿಕೃತ ಟ್ವಿಟರ್ ಅಕೌಂಟ್ @hardikpandya7 ಆಗಿದೆ. ಇದೀಗ ಆ ನಕಲಿ ಅಕೌಂಟ್ ನಿಷ್ಕ್ರಿಯ/ಡಿಲೀಟ್ ಮಾಡಲಾಗಿದೆ.
ಹಾರ್ದಿಕ್ ಪಾಂಡ್ಯ ಹೆಸರಿನ ನಕಲಿ ಅಕೌಂಟ್'ನಲ್ಲಿ 'ಯಾವ ಅಂಬೇಡ್ಕರ್..? ಕಾನೂನು ಹಾಗೂ ಸಂವಿಧಾನವನ್ನು ನಿರ್ಮಿಸಿದವರೋ ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರೋ ಎಂದು ಬರೆಯಲಾಗಿತ್ತು. ಜತೆಗೆ #HegdeInsultsAmbedkar #TuesdayThoughts ಎಂಬ ಹ್ಯಾಷ್'ಟ್ಯಾಗ್ ಕೂಡಾ ಬಳಸಲಾಗಿತ್ತು.
ಈ ಟ್ವೀಟ್ ಕುರಿತಂತೆ ರಾಷ್ಟ್ರೀಯ ಭೀಮ್ ಸೇನಾ ಸಂಘಟನೆಯ ಸದಸ್ಯ ಮೇಘವಾಲ್ ಮಂಗಳವಾರವಷ್ಟೇ ಕೋರ್ಟ್ ಮೆಟ್ಟಿಲೇರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.