
ಬೆಂಗಳೂರು: ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 4ನೇ ಆವೃತ್ತಿಯ ಪ್ರೀಮಿಯರ ಬ್ಯಾಡ್ಮಿಂಟನ್ ಲೀಗ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡ, ಚೆನ್ನೈ ಸ್ಮ್ಯಾಶರ್ಸ್ ವಿರುದ್ಧ 3-2 ರಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆ. ಶ್ರೀಕಾಂತ್ ನೇತೃತ್ವದ ಬೆಂಗಳೂರು ರ್ಯಾಪ್ಟರ್ಸ್ ಸೆಮಿಫೈನಲ್ ಹಂತಕ್ಕೇರಿದೆ.
ಶುಕ್ರವಾರ ನಡೆಯಲಿರುವ ಮೊದಲ ಸೆಮೀಸ್ನಲ್ಲಿ ಬೆಂಗಳೂರು ತಂಡ, ಅವಧ್ ವಾರಿಯರ್ಸ್ ಎದುರು ಸೆಣಸಲಿದೆ. ಶನಿವಾರ ನಡೆಯುವ 2ನೇ ಸೆಮೀಸ್ನಲ್ಲಿ ಮುಂಬೈ ರಾಕೆಟ್ಸ್, ಹೈದ್ರಾಬಾದ್ ಹಂಟರ್ಸ್ನ್ನು ಎದುರಿಸಲಿದೆ.
ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿಯಿತು. ಇದೀಗ ಬೆಂಗಳೂರು ಪ್ರಶಸ್ತಿಯ ಕನಸು ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.