
ದುಬೈ, (ಸೆ.16): ಶನಿವಾರ ನಡೆದ 14ನೇ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ದಾಖಲಿಸಿತು. 5 ಬಾರಿಯ ಚಾಂಪಿಯನ್ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 137 ರನ್ಗಳ ಬೃಹತ್ ಗೆಲುವು ದಾಖಲಿಸಿತು.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾ, ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಸಿತ್ ಮಾಲಿಂಗ ಮಾರಕ ಬೌಲಿಂಗ್ ದಾಳಿಗೆ ಬಾಂಗ್ಲಾ ಬ್ಯಾಟ್ಸ್ ಮನ್ಗಳು ರನ್ ಗಳಿಸು ಪರದಾಡಿದರು. ಮೊದಲ ಓವರ್ನಲ್ಲಿ ಕೇವಲ 2 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಷ್ಟೇ ಅಲ್ಲದೇ 2ನೇ ಓವರ್ನಲ್ಲಿ ಭರವಸೆಯ ಬ್ಯಾಟ್ಸ್ಮನ್ ತಮಿಮ್ ಇಕ್ಬಾಲ್ ಗಾಯಗೊಂಡಿದ್ದು, ಬಾಂಗ್ಲಾ ಪಾಲಿಗೆ ನುಂಗಲಾರದ ತುತ್ತಾಯಿತು.
ಆದರೆ 3ನೇ ವಿಕೆಟಿಗೆ ಜೊತೆಯಾದ ಮುಶ್ಫೀಕರ್ ರಹೀಮ್ ಅವರ ಆಕರ್ಷಕ ಶತಕ ಹಾಗೂ ಮೊಹಮ್ಮದ್ ಮಿಥುನ್ ಅವರ ಅವರ ಅರ್ಧಶತಕ ಬಾಂಗ್ಲಾಕ್ಕೆ ಬಲತುಂಬಿತು. 3ನೇ ವಿಕೆಟಿಗೆ ಈ ಜೋಡಿ 131 ರನ್ ಸೇರಿಸುವ ಮೂಲಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದ್ರು. ಅಂತಿಮವಾಗಿ 49.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡ 261ರನ್ ಕಲೆಹಾಕಿತು.
262ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಲಂಕಾ, ಆರಂಭದಲ್ಲಿ ಅಘಾತಕ್ಕೊಳಗಾಯಿತು. 40 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಬಾಂಗ್ಲಾ ಬೌಲರ್ಗಳ ಎದುರು ರನ್ ಗಳಿಸುವುದಕ್ಕೆ ಪರದಾಡಿದ ಲಂಕಾ ಬ್ಯಾಟ್ಸ್ಮನ್ಗಳು, ಪೆವಿಲಿಯನ್ ಪೆರೇಡ್ ನಡೆಸಿದರು.
ಅಂತಿಮವಾಗಿ 35.2 ಓವರ್ಗಳಲ್ಲಿ 124 ರನ್ಗಳಿಸಿದ ಸಿಂಹಳೀಯರು ತನ್ನೆಲ್ಲ ವಿಕೆಟ್ ಕಳೆದುಕೊಂಡ 137 ರನ್ಗಳ ಸೋಲೊಪ್ಪಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.