
ನವದೆಹಲಿ[ಸೆ.12] ರಾಜ್ಯದಲ್ಲಿ ಆಪರೇಶನ್ ಕಮಲದ ಮಾತು ಹರಿದಾಡುತ್ತಿದ್ದರೆ ಅತ್ತ ಟೀಂ ಇಂಡಿಯಾ ಇನ್ನೊಂದು ಆಪರೇಶನ್ ಗೆ ಸಿದ್ಧವಾಗಬೇಕಿದೆ. ಹಾಗಾದರೆ ಅದು ಯಾವ ಆಪರೇಶನ್? ಏನಿದು ಹೊಸ ಮಿಶನ್?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ 4-1 ಅಂತರದಿಂದ ಕೈಚೆಲ್ಲಿರುವ ನಂಬರ್ ಸ್ಥಾನದಲ್ಲಿರುವ ಟೀಂ ಇಂಡಿಯಾ ಅನೇಕರಿಂದ ಟೀಕೆಗೆ ಒಳಗಾಗಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ತಂಡಕ್ಕೆ ಪ್ರೇರಣೆ ನೀಡುವ ಮಾತನಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಸರಣಿ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿರುವ ಸೆಹ್ವಾಗ್, ಟೀಂ ಇಂಡಿಯಾ ಕೂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಕೆಲವೊಂದು ವೇಳೆ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.. ಅದಕ್ಕೆ ಹಲವು ಕಾರಣ ಇದೆ ಎಂದಿದ್ದಾರೆ.
ಆದರೆ ರಾಹುಲ್ ಹಾಗೂ ಪಂತ್ ಬ್ಯಾಟಿಂಗ್ ನಿಜಕ್ಕೂ ಅಮೋಘವಾಗಿತ್ತು. ಮುಂದಿನ ವಿದೇಶಿ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸಾಕಷ್ಟು ತರಬೇತಿ ಮಾಡಿಕೊಳ್ಳಬೇಕು. ಮುಗಿದಿದ್ದು ಮುಗಿದಿದೆ. ಇನ್ನು ಮುಂದೆ ಮಿಶನ್ ಆಸ್ಟ್ರೇಲಿಯಾ ಶುರುಮಾಡಬೇಕಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.