ಟೀಂ ಇಂಡಿಯಾಕ್ಕೆ ಸ್ಫೋಟಕ ಆಟಗಾರ ಹೇಳಿದ ಮಿಶನ್ ಆಸ್ಟ್ರೇಲಿಯಾ ಕತೆ!

By Web DeskFirst Published Sep 12, 2018, 10:00 PM IST
Highlights

ಆಂಗ್ಲರ ನೆಲದಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಹಿರಿಯ ಆಟಗಾರರೊಬ್ಬರು ಚೈತನ್ಯ ತುಂಬಿದ್ದಾರೆ. ಹಿರಿಯ ಆಟಗಾರ ಮಾಡಿರುವ ಟ್ವೀಟ್ ನಿಜಕ್ಕೂ ವಿಭಿನ್ನವಾಗಿದೆ.

ನವದೆಹಲಿ[ಸೆ.12] ರಾಜ್ಯದಲ್ಲಿ ಆಪರೇಶನ್ ಕಮಲದ ಮಾತು ಹರಿದಾಡುತ್ತಿದ್ದರೆ ಅತ್ತ ಟೀಂ ಇಂಡಿಯಾ ಇನ್ನೊಂದು ಆಪರೇಶನ್ ಗೆ ಸಿದ್ಧವಾಗಬೇಕಿದೆ. ಹಾಗಾದರೆ ಅದು ಯಾವ ಆಪರೇಶನ್? ಏನಿದು ಹೊಸ ಮಿಶನ್?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನ 4-1 ಅಂತರದಿಂದ ಕೈಚೆಲ್ಲಿರುವ ನಂಬರ್​ ಸ್ಥಾನದಲ್ಲಿರುವ ಟೀಂ ಇಂಡಿಯಾ ಅನೇಕರಿಂದ ಟೀಕೆಗೆ ಒಳಗಾಗಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್ ತಂಡಕ್ಕೆ ಪ್ರೇರಣೆ ನೀಡುವ ಮಾತನಾಡಿದ್ದಾರೆ.

ಟ್ವಿಟ್ಟರ್​​ನಲ್ಲಿ ಸರಣಿ ಗೆದ್ದ ಇಂಗ್ಲೆಂಡ್​ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿರುವ ಸೆಹ್ವಾಗ್​, ಟೀಂ ಇಂಡಿಯಾ ಕೂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ,  ಕೆಲವೊಂದು ವೇಳೆ ಬ್ಯಾಟ್​​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.. ಅದಕ್ಕೆ ಹಲವು ಕಾರಣ ಇದೆ ಎಂದಿದ್ದಾರೆ.

ಆದರೆ ರಾಹುಲ್ ಹಾಗೂ ಪಂತ್​ ಬ್ಯಾಟಿಂಗ್​ ನಿಜಕ್ಕೂ ಅಮೋಘವಾಗಿತ್ತು. ಮುಂದಿನ ವಿದೇಶಿ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸಾಕಷ್ಟು ತರಬೇತಿ ಮಾಡಿಕೊಳ್ಳಬೇಕು. ಮುಗಿದಿದ್ದು ಮುಗಿದಿದೆ. ಇನ್ನು ಮುಂದೆ ಮಿಶನ್ ಆಸ್ಟ್ರೇಲಿಯಾ ಶುರುಮಾಡಬೇಕಿದೆ ಎಂದಿದ್ದಾರೆ.

 

 

 

Congratulations England on the 4-1 series win. India were good in patches,but not consistent enough with the bat. Pant & Rahul’s display on last day was very heartening, so were Kohli’s & the bowlers consistency throughout .Need to work a lot to travel better.Ab MissionAustralia

— Virender Sehwag (@virendersehwag)
click me!