RCB ಟೀಂ ಆಯ್ಕೆ ಬಗ್ಗೆ ABD ಹೇಳಿದ್ದೇನು..? ಆಫ್ರಿಕಾದಿಂದಲೇ ಚಿನ್ನಸ್ವಾಮಿ ಮೈದಾನ ನೆನಪಿಸಿಕೊಂಡ ಮಿ.360

By Suvarna Web DeskFirst Published Jan 28, 2018, 8:13 PM IST
Highlights

ಆರ್'ಸಿಬಿ ಆಟಗಾರರ ರೀಟೈನ್ ಮಾಡಿಕೊಳ್ಳುವ ಅವಕಾಶ ಬಳಸಿಕೊಂಡು ಎಬಿ ಡಿವಿಲಿಯರ್ಸ್ ಅವರನ್ನು 11 ಕೋಟಿ ನೀಡಿ ಉಳಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಆರ್'ಸಿಬಿ ಪ್ರಾಂಚೈಸಿ ಖರೀದಿಸಿದ ತಂಡದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಎಬಿಡಿ ಏನ್ ಹೇಳಿದ್ರು ನೀವೆ ಅವರ ಮಾತುಗಳಲ್ಲಿ ಕೇಳಿ...

ಅದ್ಭುತ ತಂಡವನ್ನು ಆರ್'ಸಿಬಿ ಖರೀದಿಸಿದೆ. ಚಾಹಲ್, ನೇಗಿ ಆರ್'ಸಿಬಿಯಲ್ಲೇ ಉಳಿದಿದ್ದಾರೆ. ಇದರ ಜೊತೆಗೆ ಇನ್ನಷ್ಟು ಪ್ರತಿಭಾನ್ವಿತ ಆಟಗಾರರು ತಂಡವನ್ನು ಕೂಡಿಕೊಂಡಿದ್ದಾರೆ. ಆರ್'ಸಿಬಿಯಲ್ಲೇ ಮುಂದುವರೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಮತ್ತೊಮ್ಮೆ ಅದ್ಭುತ ಆಟವಾಡಲು ಎದುರು ನೋಡುತ್ತಿದ್ದೇವೆ. ಈ ಬಾರಿ ಐಪಿಎಲ್ ಆಡಲು ಸಾಕಷ್ಟು ಕಾತರನಾಗಿದ್ದೇನೆ. ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಮನರಂಜನೆ ನೀಡಲು ತುದಿಗಾಲಿನಲ್ಲಿ ನಿಂತಿರುವುದಾಗಿ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಆರ್'ಸಿಬಿ ಆಟಗಾರರ ರೀಟೈನ್ ಮಾಡಿಕೊಳ್ಳುವ ಅವಕಾಶ ಬಳಸಿಕೊಂಡು ಎಬಿ ಡಿವಿಲಿಯರ್ಸ್ ಅವರನ್ನು 11 ಕೋಟಿ ನೀಡಿ ಉಳಿಸಿಕೊಂಡಿದೆ.

click me!