ಮೈಸೂರಿನ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!

Published : Jan 08, 2020, 10:58 AM IST
ಮೈಸೂರಿನ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು  ಕೂಡ 2022ರಲ್ಲಿ ಅಂತರಿಕ್ಷಕ್ಕೆ!

ಸಾರಾಂಶ

ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!| ಇಸ್ರೋ ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ತಯಾರಿ

ನವದೆಹಲಿ[ಜ.08]:  ದಕ್ಷಿಣ ಭಾರತೀಯರ ಜನಪ್ರಿಯ ಉಪಾಹಾರಗಳಾದ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಹಾಗೂ ತೆಂಗಿನಕಾಯಿ ಚಟ್ನಿ ಕೂಡ ಬಾಹ್ಯಾಕಾಶಕ್ಕೆ ಹೋಗಲಿವೆ.

2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ. ಭೂ ಕೆಳ ಕಕ್ಷೆಯಲ್ಲಿ 5ರಿಂದ 6 ದಿನಗಳ ಕಾಲ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಇರಲಿದ್ದಾರೆ. ಅವರ ಹಸಿವು ನೀಗಿಸಲೆಂದು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ವಿಶಿಷ್ಟ ಆಹಾರಗಳನ್ನು ತಯಾರಿಸಿದೆ. ಅದರಲ್ಲಿ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು, ತೆಂಗಿನಕಾಯಿ ಚಟ್ನಿಯೂ ಇದೆ.

ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

ಈ ಆಹಾರಗಳನ್ನು ಬಿಸಿ ಮಾಡಿಕೊಳ್ಳಲು ಹೀಟರ್‌ಗಳನ್ನು ಕೂಡ ಇಸ್ರೋ ಬಾಹ್ಯಾಕಾಶಕ್ಕೆ ರವಾನಿಸುತ್ತಿದೆ. ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಇಸ್ರೋ ಆಯ್ಕೆ ಮಾಡಿದ್ದು, ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ಅವರಿಗೆ ತರಬೇತಿ ಪ್ರಾರಂಭವಾಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ