ಶಿಕಾ​ರಿ​ಪುರ ತಾಲೂ​ಕು ಅಭಿ​ವೃ​ದ್ಧಿ​ಯಲ್ಲಿ ಯಡಿ​ಯೂ​ರಪ್ಪ ಶ್ರಮ ಅಪಾ​ರ: ವಿಜಯೇಂದ್ರ

Published : Aug 08, 2022, 10:57 AM ISTUpdated : Aug 08, 2022, 10:59 AM IST
ಶಿಕಾ​ರಿ​ಪುರ ತಾಲೂ​ಕು ಅಭಿ​ವೃ​ದ್ಧಿ​ಯಲ್ಲಿ ಯಡಿ​ಯೂ​ರಪ್ಪ ಶ್ರಮ ಅಪಾ​ರ: ವಿಜಯೇಂದ್ರ

ಸಾರಾಂಶ

ಶಿಕಾರಿಪುರ ಹಿಂದುಳಿದ ತಾಲೂಕು ಎಂಬ ಶಾಶ್ವತ ಹಣೆಪಟ್ಟಿಯನ್ನು ಯಡಿಯೂರಪ್ಪ ಅವರು ಹೋಗಲಾಡಿಸಿ ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವದ ಮೂಲಕ ಇದೀಗ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಶಿಕಾರಿಪುರ (ಆ.8) : ಶಿಕಾರಿಪುರ ಹಿಂದುಳಿದ ತಾಲೂಕು ಎಂಬ ಶಾಶ್ವತ ಹಣೆಪಟ್ಟಿಯನ್ನು ಯಡಿಯೂರಪ್ಪ ಅವರು ಹೋಗಲಾಡಿಸಿ ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವದ ಮೂಲಕ ಇದೀಗ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (Vijayendra Yeddyurappa) ಹೇಳಿದರು. ಭಾನುವಾರ ಪಟ್ಟಣದ ಮಂಗಳ ಭವನದಲ್ಲಿ ನಡೆದ ತಾಲೂಕು ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಪೇಜ್‌ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ನಾಯಕರು ತಲೆಯೆತ್ತಿ ನಡೆಯಲಾಗುತ್ತಿಲ್ಲ: ಬಿವೈ ವಿಜಯೇಂದ್ರ ಅಸಮಾಧಾನ

ಕಳೆದ 4-5 ದಶಕದ ಹಿಂದೆ ಶಿಕಾರಿಪುರ ತಾಲೂಕು ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಹೊಂದಿದ್ದು, ನಂಜುಂಡಪ್ಪ ವರದಿ(Najundappa Report)ಯ ಅನ್ವಯ ಹಿಂದುಳಿದ ತಾಲೂಕು ಎಂಬ ಶಾಶ್ವತ ಕಪ್ಪುಚುಕ್ಕೆಯನ್ನು ಯಡಿಯೂರಪ್ಪ(B.S.Yadiyurappa) ಅವರು ಮುಖ್ಯಮಂತ್ರಿ ಅವಧಿಯಲ್ಲಿ ಸಮಗ್ರ ಅಭಿವೃದ್ಧಿ ಮೂಲಕ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದೀಗ ತಾಲೂಕು ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ತಾಲೂಕಿನ ಜನತೆಯ ಆಶೀರ್ವಾದದಿಂದ ನಾಲ್ಕು ಬಾರಿಗೆ ಮುಖ್ಯ ಮಂತ್ರಿಯಾದ ಯಡಿಯೂರಪ್ಪನವರು ಜನಪರ ಕಾರ್ಯದ ಮೂಲಕ ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರು ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಹಗಲು ಕನಸು ಕಾಣುತ್ತಿದ್ದು, ಅದು ಅವರ ಭ್ರಮೆ. ರಾಜ್ಯದಲ್ಲಿ ಬಿಜೆಪಿ ಪುನಃ ಅಧಿಕಾರದ ಗದ್ದುಗೇರಲಿದೆ. ಪ್ರಧಾನಿಯವರ ಅಭಿವೃದ್ಧಿ ಪರವಾದ, ಸಮರ್ಥ ಆಡಳಿತದಿಂದ ಪಕ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿದೆ. ಪಕ್ಷದ ಶಿಸ್ತಿನ ಸಿಪಾಯಿಯಾದ ನಾನು ಪಕ್ಷ ಅವಕಾಶ ಕಲ್ಪಿಸಿದಲ್ಲಿ ಮಾತ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಜನತೆಯ ಸೇವೆ ಮಾಡುವುದಾಗಿ ತಿಳಿಸಿದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘಟನೆಯನ್ನು ಸದೃಢಗೊಳಿಸುವ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸಬೇಕು. ಪಕ್ಷ ಕಟ್ಟಿಬೆಳೆಸಿದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಸಬೇಕು. ಶಕ್ತಿಕೇಂದ್ರದ ಮಟ್ಟದಲ್ಲಿ ಸಭೆಯನ್ನು ನಡೆಸಲಾಗುತ್ತಿದೆ. ಪೇಜ್‌ ಪ್ರಮುಖರಿಗೆ ಅತಿ ದೊಡ್ಡ ಜವಾಬ್ದಾರಿಯಿದೆ. ಪ್ರತಿ ಪೇಜ್‌ ವ್ಯಾಪ್ತಿಯಲ್ಲಿ 6ರಿಂದ 8 ಮನೆಗಳಿವೆ. ಪ್ರತಿಯೊಬ್ಬರ ಗುರಿ ಪಕ್ಷ ಸಂಘಟನೆ ಮಾತ್ರ. ಚುನಾವಣೆ ಸಮಯದಲ್ಲಿ ಪ್ರತಿ ಬೂತ್‌ನಲ್ಲಿ ನಡೆದಿರುವ ಕೆಲಸ ಕಾರ್ಯದ ಬಗ್ಗೆ ಸ್ಥಳೀಯ ಜನತೆಗೆ ಅರಿವು ಮೂಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾದವರ ಪಟ್ಟಿಮಾಡಬೇಕು. ಅವರಿಗೆ ಸ್ಪಂದಿಸಬೇಕು, ಪ್ರತಿ ಮನೆಯೂ ನಮ್ಮ ಮನೆಯಾಗಬೇಕು. ಅವರಿಗೆ ಸರ್ಕಾರ ನೀಡಿರುವ ಸವಲತ್ತುಗಳನ್ನು ಪರಿಚಯಿಸಬೇಕು. ಉಚಿತ ಯೋಜನೆಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಸೂಚಿಸಿದರು.\

ಇಂದಿನ ರಾಜಕಾರಣದಲ್ಲಿ ಕಬಡ್ಡಿ, ಚದುರಂಗ ಎರಡೂ ಗೊತ್ತಿರಬೇಕು: ವಿಪಕ್ಷಗಳಿಗೆ ವಿಜಯೇಂದ್ರ ಟಾಂಗ್

ತಾಲೂಕಿನ ಪ್ರತಿ ಗ್ರಾಮಕ್ಕೆ ಅಂದಾಜು .5 ಕೋಟಿ ಅನುದಾನ ನೀಡಲಾಗಿದೆ. ಈ ವಿಷಯವನ್ನು ವ್ಯಾಪ್ತಿಯಲ್ಲಿನ ಪ್ರತಿ ಕುಟುಂಬದವರಿಗೆ ಮನದಟ್ಟು ಮಾಡಬೇಕಾದ ಅಗತ್ಯವಿದೆ. ಇದರಿಂದಮತದಾರರ ಒಲವು ಗಳಿಸಲು ಸಾದ್ಯ ಎಂದು ತಿಳಿಸಿದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮಾಜಿ ಶಾಸಕ ಹರೀಶ್‌ ಮುಖಂಡ ಕೆ. ಹಾಲಪ್ಪ, ಮಲ್ಲೇಶಪ್ಪ, ಅಂಬಾರಗೊಪ್ಪ ಶೇಖರಪ್ಪ, ಗಾಯತ್ರಿ ಮಲ್ಲಪ್ಪ, ಕುಮಾರಗೌಡ, ನೇತ್ರಾವತಿ, ರುದ್ರೇಶ್‌, ಗುರುರಾಜ ಜಕ್ಕಿನಕೊಪ್ಪ, ಎ.ಬಿ. ಸುಧೀರ್‌, ಗಣೇಶ್‌ ನಾಗೀಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ