ಮೊದಲ ಲಿಸ್ಟ್‌ನಲ್ಲೇ ಸ್ಥಾನ ಪಡೆಯಲು ಶುರುವಾಯ್ತು ಭರ್ಜರಿ ಲಾಭಿ: ಕೈ ನಾಯಕರ ಈ ಆತುರಕ್ಕೆ ಅಸಲಿ ಕಾರಣವೇನು?

Kannadaprabha News   | Kannada Prabha
Published : May 31, 2026, 01:41 PM IST
DK Shivakumar New Karnataka Chief Minister

ಸಾರಾಂಶ

ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಂಬತ್ತು ಮಂದಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎರಡನೇ ಹಂತದ ವಿಸ್ತರಣೆ ನಡೇYಳೀಡೇ.

ಬೆಂಗಳೂರು (ಮೇ.31) : ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡನೇ ಹಂತದ ವಿಸ್ತರಣೆ ನಡೆಯುವುದು ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎಂದು ಕಾಂಗ್ರೆಸ್‌(Congress)ನ ಉನ್ನತ ಮೂಲಗಳು ತಿಳಿಸಿವೆ.

ಬುಧವಾರ ಮೊದಲ ಹಂತದ ಸಂಪುಟ ರಚನೆ

ಬುಧವಾರ ಮೊದಲ ಹಂತದ ಸಂಪುಟ ರಚನೆ ನಡೆಯಲಿದೆ. ಈ ವೇಳೆ ಸಿಎಂ ಸೇರಿ 9 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಮಾಡುವ ಬಗ್ಗೆ ಹೈಕಮಾಂಡ್(Congress high command) ಚಿಂತನೆ ಹೊಂದಿದೆ. ಇದಾದ ನಂತರ ಉಳಿದ ಸ್ಥಾನಗಳ ಭರ್ತಿ ಪ್ರಕ್ರಿಯೆ ನಡೆಯುವುದೇನಿದ್ದರೂ ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ ಚುನಾವಣೆ (ಜೂ.18)ನಂತರವೇ ಎಂದು ಖಚಿತ ಮಾಹಿತಿಯಿದೆ.

ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬ

ಹೀಗೆ ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬವಾಗಲಿರುವ ಕಾರಣ ಬುಧವಾರದ ಮೊದಲ ಹಂತದಲ್ಲೇ ತಮ್ಮ ಹೆಸರು ಸೇರ್ಪಡೆಯಾಗುವಂತೆ ಮಾಡಲು ಹಿರಿಯ ಸಚಿವರೇ ಪ್ರಬಲ ಲಾಬಿ ಆರಂಭಿಸಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ ಸಿಎಂ ಹೊರತುಪಡಿಸಿ 8 ಮಂದಿಯನ್ನು ಸೇರಿಸಿಕೊಳ್ಳಬೇಕು ಎಂಬ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!
2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ