ರಾಯಚೂರು ನಗ​ರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್‌ ಲೆಕ್ಕಾಚಾರ

Published : Feb 13, 2023, 06:15 AM IST
ರಾಯಚೂರು ನಗ​ರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್‌ ಲೆಕ್ಕಾಚಾರ

ಸಾರಾಂಶ

ಪಕ್ಷಗಳಲ್ಲಿ ಭರ್ಜರಿ ಟಿಕೆಟ್‌ ಲೆಕ್ಕಾಚಾರ ಕಾಂಗ್ರೆ​ಸ್‌,​ ಜೆ​ಡಿ​ಎ​ಸ್‌​ ಸಮರ್ಥರ ಪಟ್ಟಿಸಿದ್ಧ, ಮುಸ್ಲಿಂ ಸಮು​ದಾ​ಯಕ್ಕೆ ಟಿಕೆ​ಟ್‌ಗೆ ಒತ್ತ​ಡ  ಬಿಜೆಪಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌ ಅವ​ರಿಗೆ ಟಿಕೆಟ್‌ ಪಕ್ಕಾ ಎಂಬುದು ಕಾರ್ಯ​ಕ​ರ್ತ​ರಲ್ಲಿ ವಿಶ್ವಾಸ

ರಾಮ​ಕೃಷ್ಣ ದಾಸರಿ

 ರಾಯ​ಚೂರು (ಫೆ.13) : ಸಾಮಾನ್ಯ ವರ್ಗಕ್ಕೆ ಮೀಸ​ಲಿ​ರುವ ರಾಯ​ಚೂರು ನಗರ ವಿಧಾ​ನ​ಸಭಾ ಕ್ಷೇತ್ರಕ್ಕೆ ಮೂರು ಪಕ್ಷ​ಗಳಿಂದ ಅರ್ಹ ಅಭ್ಯ​ರ್ಥಿ​ಗಳು ಯಾರು? ಎನ್ನುವ ಸಮಾ​ಲೋ​ಚ​ನೆ​ಗಳು ಸಾಮಾನ್ಯ ವಲ​ಯ​ದ​ಲ್ಲಿ ಸಾಮಾ​ನ್ಯ​ವಾ​ಗಿ​ವೆ.

ಕ್ಷೇತ್ರ​ ಪ್ರತಿ​ನಿ​ಧಿ​ಸು​ತ್ತಿ​ರುವ ಬಿಜೆಪಿ ಹಾಲಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌(Dr shivaraj patil former MLA) ಅವ​ರಿಂದ ಹಿಡಿದು ಕಾಂಗ್ರೆ​ಸ್‌, ಜೆಡಿ​ಎಸ್‌ ಸೇರಿ ಇತರೆ ಪಕ್ಷ​ಗಳು ಸಮರ್ಥ ಅಭ್ಯ​ರ್ಥಿ ಆಯ್ಕೆ ವಿಚಾ​ರ​ದಲ್ಲಿ ಅತ್ಯಂತ ಜಾಗೃ​ತಿ ಹೆಜ್ಜೆ​ಯ​ನ್ನಿ​ಡು​ತ್ತಿವೆ. ವಿಧಾನಸಭೆ ಚುನಾ​ವಣೆ ಸಮೀಪಿಸುತ್ತಿದ್ದರೂ ಅಭ್ಯ​ರ್ಥಿ​ಗಳ ಆಯ್ಕೆ​ಯಲ್ಲಿ ಯಾವ ಪಕ್ಷ​ದ​ವರೂ ಸ್ಪಷ್ಟ​ವಾದ ನಿರ್ಧಾ​ರ​ ಹೊರ​ಹಾ​ಕದೇ ಇರು​ವುದು ಕ್ಷೇತ್ರ​ದಲ್ಲಿ ಭರ್ಜರಿ ಚರ್ಚಾ ವಿಷಯವಾಗಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 50-60 ಸ್ಥಾನ ಗೆಲ್ಲುವುದೆ ಕಷ್ಟ: ಸಿದ್ದರಾಮಯ್ಯ

ಕಾಂಗ್ರೆಸ್‌ ಟಿಕೆಟ್‌ಗೆ 17 ಜನರು ಅರ್ಜಿ ಸಲ್ಲಿ​ಸಿದ್ದು(Siddaramaiah), ಪಕ್ಷದ ನಾಯ​ಕರು ಮಾಜಿ ಶಾಸಕ ಸೈಯದ್‌ ಯಾಸೀನ್‌(Former MLA Syed Yasin), ಮಾಜಿ ಎಂಎಲ್ಸಿ, ಎಐ​ಸಿಸಿ ಪ್ರಧಾನ ಕಾರ್ಯ​ದರ್ಶಿ ಎನ್‌.​ಎ​ಸ್‌. ​ಬೋ​ಸ​ರಾಜು(NS Bosaraju), ಬಸ​ವ​ರಾಜ ಪಾಟೀಲ್‌ ಇಟಗಿ ಅವರ ಹೆಸ​ರು​ ಅಂತಿಮಗೊಳಿಸಿ ಹೈಕ​ಮಾಂಡ್‌ಗೆ ಶಿಫಾ​ರಸ್ಸು ಮಾಡಿದ್ದಾರೆನ್ನಲಾಗಿದೆ. ಅದೇ ರೀತಿ ಜೆಡಿ​ಎ​ಸ್‌​ನಿಂದ ಈ. ವಿ​ನಯ ಕುಮಾರ, ರಾಮ​ನ​ಗೌಡ ಏಗ​ನೂರು ಹೆಸ​ರು ಕೇಳಿ​ಬ​ರು​ತ್ತಿದ್ದು, ಯಾರಿಗೆ ಟಿಕೆಟ್‌ ಎನ್ನುವ ಕುತೂ​ಲ​ಹವು ಮುಂದುವರಿದಿದೆ.

ಮುಸ್ಲಿಮರೆ ಹೆಚ್ಚಿರುವ ಕ್ಷೇತ್ರ​ದಲ್ಲಿ ಆ ಸಮು​ದಾ​ಯ​ದ​ವ​ರಿಗೆ ಟಿಕೆಟ್‌ ನೀಡ​ಬೇಕು ಎನ್ನುವ ಕೂಗು ಬಲ​ವಾಗಿ ಕೇಳಿ​ಬ​ರು​ತ್ತಿ​ದೆ. ಅದ​ರ​ಲ್ಲಿಯೂ ಕಾಂಗ್ರೆ​ಸ್‌ ಪಕ್ಷ​ದಲ್ಲಿ ಈ ಬೇಡಿ​ಕೆ ತುಸು ಹೆಚ್ಚಾಗಿಯೇ ಇದೆ. ಜೊತೆಗೆ ಜೆಡಿ​ಎ​ಸ್‌​ನಲ್ಲಿ ಸಹ ಮುಸ್ಲಿಂ ಮುಖಂಡ​ರಿಗೆ ಟಿಕೆಟ್‌ ನೀಡ​ಬೇಕು ಎನ್ನುವ ಒತ್ತಾ​ಸೆ ಇದೆ. ಅದ​ಕ್ಕಾ​ಗಿಯೇ ಜಿಲ್ಲೆಯ ಏಳು ಕ್ಷೇತ್ರ​ಗಳ ಪೈಕಿ ಐದು ಕ್ಷೇತ್ರಕ್ಕೆ ಅಭ್ಯ​ರ್ಥಿ ಘೋಷಿ​ಸಿ​ರುವ ಜೆಡಿ​ಎಸ್‌ ರಾಯ​ಚೂರು ನಗ​ರ ಕ್ಷೇತ್ರದಲ್ಲಿ ಕಾದು​ನೋ​ಡುವ ತಂತ್ರ ಅನುಸರಿಸುತ್ತಿದೆ.

ಇನ್ನು ಬಿಜೆಪಿ ಹಾಲಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌ ಅವ​ರಿಗೆ ಟಿಕೆಟ್‌ ಖಚಿ​ತ​ ಎನ್ನಲಾಗಿದ್ದರೂ ಸಹ ಪಕ್ಷದ ಹೈಕ​ಮಾಂಡ್‌ ಯಾವ ರೀತಿ ನಿರ್ಧಾ​ರ​ ತೆಗೆ​ದು​ಕೊ​ಳ್ಳು​ತ್ತದೆ ಎನ್ನುವ ಸಂಗ​ತಿ ಮಾತ್ರ ನಿಗೂಢ. ಡಾ.ಶಿ​ವ​ರಾಜ ಪಾಟೀಲ್‌ ಅತೀವ ವಿಶ್ವಾ​ಸ​ದಲ್ಲಿಯೇ ಇದ್ದಾರೆ. ಮೂರು ಪ್ರಮುಖ ಪಕ್ಷ​ಗಳ ಜೊತೆಗೆ ಆಪ್‌, ಗಾಲಿ ಜನಾ​ರ್ದ​ನ​ರೆಡ್ಡಿ ಕೆಆ​ರ್‌​ಪಿಪಿ ಪಕ್ಷ​ದಿಂದಲೂ ಹೆಚ್ಚಿನ ಪ್ರಭಾವ ಹೊಂದಿ​ರುವ ಅಭ್ಯ​ರ್ಥಿ​ಗಳು ಕಣ​ಕ್ಕಿ​ಳಿ​ಯುವ ಸಾಧ್ಯ​ತೆ​ಗ​ಳಿವೆ.

ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಪಕ್ಕಾ: ಸಿದ್ದರಾಮಯ್ಯ

ನಮ್ಮ ಕೆಲ​ಸ​ವನ್ನು ನಾವು ಪ್ರಮಾ​ಣಿ​ಕ​ವಾಗಿ ಮಾಡಿ​ಕೊಂಡು ಹೋಗು​ತ್ತಿ​ದ್ದೇವೆ. ಪಕ್ಷದ ಟಿಕೆಟ್‌ ಕೇಳಲು ಬರ​ಬೇಕು ಎಂದು ಹೈಕ​ಮಾಂಡ್‌ ಸೂಚಿ​ಸಿದೆ. ಅರ್ಹ​ರಿಗೆ, ಸಮ​ರ್ಥ​ರಿಗೆ ಟಿಕೆಟ್‌ ನೀಡ​ಲು ಪಕ್ಷ ವ್ಯವ​ಸ್ಥೆ​ಯನ್ನು ರೂಪಿ​ಸಿದ್ದು, ಅರ್ಹ​ತೆ​ಯ​ನ್ನಾ​ಧ​ರಿಸಿ ಟಿಕೆಟ್‌ ದೊರೆ​ಯ​ಲಿ​ದೆ. ಆರ್‌​ಎ​ಸ್‌​ಎಸ್‌, ಡಿಎ​ಸ್‌​ಎ​ಸ್‌,​ ಜ​ನ​ಸಾ​ಮಾ​ನ್ಯ​ರು,​ ಜ​ನ​ಪ್ರ​ತಿ​ನಿ​ಧಿ​ಗಳ ಅಭಿ​ಪ್ರಾ​ಯ​ಗ​ಳನ್ನು ಸಂಗ್ರ​ಹಿಸಿ ಸೂಕ್ತ ಅಭ್ಯ​ರ್ಥಿ​ಯನ್ನು ಹೈಕ​ಮಾಂಡ್‌ ಆಯ್ಕೆ ಮಾಡ​ಲಿ​ದೆ.

- ಡಾ.ಶಿ​ವ​ರಾಜ ಪಾಟೀಲ್‌, ಶಾಸಕ, ರಾಯ​ಚೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ