ಹಣ ಹಂಚಿದ್ದರಿಂದಲೇ ಗೆಲುವು: ಬಿಜೆಪಿ ಶಾಸಕ ಯತ್ನಾಳ್‌

Published : Jan 19, 2020, 07:41 AM ISTUpdated : Jan 19, 2020, 08:41 AM IST
ಹಣ ಹಂಚಿದ್ದರಿಂದಲೇ ಗೆಲುವು: ಬಿಜೆಪಿ ಶಾಸಕ ಯತ್ನಾಳ್‌

ಸಾರಾಂಶ

ಹಣ ಹಂಚಿದ್ದರಿಂದಲೇ ಗೆಲುವು: ಯತ್ನಾಳ್‌| ಮಹಿಳೆಯರಿಗೆ ಹಣ ತಲುಪಿಸಬೇಕು| ಯಾವುದೇ ಕಾರಣಕ್ಕೂ ಗಂಡನಿಗೆ ನೀಡಬಾರದು

ಸುರಪುರ[ಜ.19]: ಹಣ ಹಂಚಿದ್ದರಿಂದಲೇ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯ್ತು ಎಂದು ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಶನಿವಾರ ನಗರದ ರಂಗಂಪೇಟಯ ವೀರಶೈವ-ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ, ಬಸವೇಶ್ವರ ಪುತ್ಥಳಿ ಅಡಿಗಲ್ಲು ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಹಣ ತಲುಪಿಸಬೇಕು. ಯಾವುದೇ ಕಾರಣಕ್ಕೂ ಗಂಡನಿಗೆ ನೀಡಬಾರದು. ಇದರಲ್ಲಿ ಯಶಸ್ಸು ಸಾಧಿ​ಸಿದ್ದರಿಂದಲೇ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿ​ಕ ಮತಗಳ ಅಂತರದಿಂದ ಗೆಲುವು ಪಡೆಯಲು ಸಾಧ್ಯವಾಯಿತು ಎಂದರು.

ವಚನಾನಂದ ಶ್ರೀಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ

ಚುನಾವಣೆಯಲ್ಲಿ ಹಣ ಹಂಚಿಕೆಗಾಗಿ ಸಹಕಾರ ಸಂಘದ ನೌಕರರನ್ನೇ ಬಳಸಿಕೊಂಡಿದ್ದೆ. ಮಹಿಳೆಯರಿಗೇ ತಲುಪಿಸಬೇಕು, ಅವರು ಹೊಲದಲ್ಲಿರಲಿ ಅಥವಾ ಮನೆಯಲ್ಲಿರಲಿ ಅಥವಾ ಬೇರೆಲ್ಲೋ ಇರಲಿ. ಅಲ್ಲಿಗೇ ಹೋಗಿ ಮುಟ್ಟಿಸಿ ಅಂತ ತಿಳಿಸಿದ್ದೆ. ಅದರಂತೆ, ಅವರಿಗೆ ಹಣ ತಲುಪಿದ್ದರಿಂದ ರಾಜ್ಯದಲ್ಲಿಯೇ ಅತ್ಯಧಿ​ಕ ಮತಗಳಿಂದ ವಿಜಯಶಾಲಿಯಾದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ