ಮೋದಿ ಲಸಿಕೆ ಕೊಡಿಸಿದ್ದಕ್ಕೆ ನಾವು ಜೀವಂತ: ದೇವೇಂದ್ರ ಫಡ್ನವೀಸ್

Published : Apr 28, 2024, 08:02 AM IST
ಮೋದಿ ಲಸಿಕೆ ಕೊಡಿಸಿದ್ದಕ್ಕೆ ನಾವು ಜೀವಂತ: ದೇವೇಂದ್ರ ಫಡ್ನವೀಸ್

ಸಾರಾಂಶ

ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 

ಪುಣೆ(ಏ.28): 'ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ. ಅವರಿಂದಲೇ ನಾವು ಬದುಕಿದ್ದೇವೆ . ಹಾಗಾಗಿ ಅವರಿಗೆ ಮತ ನೀಡಿ' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ. 

ಚುನಾವಣಾ ಪ್ರಚಾರ ನಡೆಸಿದ ಅವರು, ಕೊರೋನಾ ವೇಳೆ ಹಲವಾರು ಮಂದಿ ತಮ್ಮ ಆತ್ಮೀಯರನ್ನು, ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಯಾರೂ ಭಾರತದ ನೆರವಿಗೆ ಬಂದಿರಲಿಲ್ಲ. ಹೀಗಾಗಿ ದೇಶದಲ್ಲಿ 40- 50 ಕೋಟಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಆತಂಕವಿತ್ತು ಎಂದರು.

ಪ್ರಧಾನಿ ಮೋದಿ ಆಡಳಿತದ ಪಿಕ್ಚರ್‌ ಇನ್ನೂ ಬಾಕಿ ಇದೆ: ದೇವೇಂದ್ರ ಫಡ್ನವಿಸ್‌

'ಈ ವೇಳೆ ಮೋದಿಯವರು ವಿಜ್ಞಾನಿಗಳ ಜೊತೆ ಸಂವಹನ ನಡೆಸಿ ಲಸಿಕೆ ಕಂಡು ಹಿಡಿಯುವುದಕ್ಕೆ ನೆರವಾಗಿದ್ದರು. ಅದರಿಂದಲೇ ಇಂದು ನಾವೆಲ್ಲರೂ ಬದುಕಿದ್ದೇವೆ. ಎಲ್ಲರೂ ಇಲ್ಲಿದ್ದೇವೆ. ಮೋದಿ ನಮಗೆ ಲಸಿಕೆ ನೀಡದಿದ್ದರೆ ನಾವು ಇಂದು ಈ ರ್ಯಾಲಿ ವೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ' ಎಂದರು. ಇದೇ ವೇಳೆ ವಿದೇಶಗಳೊಂದಿಗೆ ಕೇಂದ್ರದ ವ್ಯಾಕ್ಸಿನ್ ಮೈತ್ರಿ ವಿಚಾರ ಪ್ರಸ್ತಾಪಿಸಿದ ಫಡ್ನವೀಸ್, 'ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ' ಎಂದೂ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!