'ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು'

Published : Feb 13, 2021, 10:06 PM ISTUpdated : Feb 13, 2021, 10:19 PM IST
'ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು'

ಸಾರಾಂಶ

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವಿನ ವಾಕ್ಸಮರ ಮುಂದುವರೆದಿದೆ.

ತುಮಕೂರು, (ಫೆ.13): ಪಂಚಮಸಾಲಿ 2A ಮೀಸಲಾತಿ ಪಾದಯಾತ್ರೆ ಮಧ್ಯೆ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ.

ಅದರಲ್ಲೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಬಾರಿನಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ? ಎಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ತಿರುಗೇಟು ಕೊಟ್ಟಿದ್ದಾರೆ. 

ಕಾಶಪ್ಪನವರ್ ಅಂದ್ರೆ ಬಾರ್‌ನಲ್ಲಿ ಗಲಾಟೆ ಮಾಡಿದ್ರಲ್ಲಾ ಅವರಾ? ವಿಜಯೇಂದ್ರ ಟಾಂಗ್

ವೈಯಕ್ತಿಕ ವಿಚಾರಕ್ಕೆ ವ್ಯಂಗ್ಯವಾಗಿ ಮಾತಾಡಿ ದೊಡ್ಡವರಾಗಲ್ಲ. ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಶಾಸಕರೂ ಆಗಿಲ್ಲ, ಇನ್ನೂ ಏನು ಆಗಿಲ್ಲ. ನನಗಾದರೂ ಸ್ಥಾನಮಾನ ವಿದೆ. ಇವರಿಗೆ ಏನಿದೆ ಯೋಗ್ಯತೆ? ಎಂದು ಖಾರವಾಗಿ ಪ್ರಶ್ನಿಸಿದರು.

ನಾನೂ ಹಗುರವಾಗಿ ಮಾತನಾಡಬಹುದು ಎಂದ ಕಾಶಪ್ಪನವರ್​​ ನನಗೂ ಇವರು ಎಲ್ಲಿ ಮಲಗುತ್ತಾರೆ. ಎಲ್ಲಿ ಕುಡಿಯುತ್ತಾರೆ. ಯಾರ ಮನೆಯಲ್ಲಿ ಇರುತ್ತಾರೆ ಎಂದು ಗೊತ್ತು. ಆದರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತಾಡುವವನಲ್ಲ ಎಂದು ಹೇಳಿದರು.

ಈ ರಾಜ್ಯದಲ್ಲಿ ಅವರಿಗೆಷ್ಟು ಗೌರವವಿದೆ. ಅದಕ್ಕಿಂತ ಹೆಚ್ಚು ನಮ್ಮ ಮನೆತನಕ್ಕಿದೆ. ಸಿಎಂಗೆ ನಾವು ಬೆಲೆ ಕೊಡುತ್ತೇವೆ. ನಮ್ಮ ಸಮುದಾಯದಿಂದ 15 ಶಾಸಕರು ಇದ್ದಾರೆ. ಯಡಿಯೂರಪ್ಪ ದೊಡ್ಡ ನಾಯಕರು, ಅವರ ಬಗ್ಗೆ ಗೌರವವಿದೆ. ನಾಳೆ ಬೆಳೆಯುವಂತ ನಾಯಕ ಈ ರೀತಿ ವ್ಯಂಗ್ಯವಾಗಿ ಹೇಳಿಕೆ ನೀಡಬಾರದು. ಈ ರಾಜ್ಯದಲ್ಲಿ ಕಾಶಪನವರ್ ಅಂದರೆ ಯಾರು ಅಂತಾ ಜನರನ್ನು ಕೇಳಿ ಹೇಳ್ತಾರೆ ವಿಜಯೇಂದ್ರವರೇ ಎಂದು ತಿರುಗೇಟು ಕೊಟ್ಟರು.

ಹಗುರವಾಗಿ ಮಾತನಾಡಿದ ತಕ್ಷಣ ಯಾರೂ ದೊಡ್ಡವರು ಆಗಲ್ಲ. ಹಗುರತನ ಮಾತಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನನಗೂ ನಿಮ್ಮ ವೈಯಕ್ತಿಕ ವಿಚಾರಗಳು ಬಹಳಷ್ಟು ಗೊತ್ತಿವೆ. ಆದರೆ, ನಾನು ಚಿಲ್ಲರೆಗಿರಿ ಮಾಡೋಕೆ ಹೋಗಲ್ಲ. ಸಮಯ ಬಂದಾಗ ಬಾಯಿಬಿಟ್ಟರೇ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ