
ಹುಬ್ಬಳ್ಳಿ(ಏ.12): ಮನೆಯಲ್ಲಿ ಮಗು ಹುಟ್ಟಿದರೆ, ನಮ್ಮ ₹ 2 ಸಾವಿರದಿಂದಲೇ ಹುಟ್ಟಿತು ಎನ್ನುವ ಮಾನಸಿಕತೆಯಲ್ಲಿ ಕಾಂಗ್ರೆಸ್ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇದು ಇದೀಗ ಚರ್ಚೆಗೆ ಗ್ರಾವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರದಾದರೂ ಮನೆಯಲ್ಲಿ ಮಗು ಹುಟ್ಟುವುದು ಸಹಜ. ಆ ಮಗು ನಮ್ಮ ₹ 2 ಸಾವಿರದಿಂದಲೇ ಹುಟ್ಟಿದೆ ಎನ್ನುವ ಮಾನಸಿಕತೆ ಕಾಂಗ್ರೆಸ್ಸಿನದ್ದಾಗಿದೆ ಎಂದರು.
ಕಾಂಗ್ರೆಸ್ ದೇಶಕ್ಕೆ ಯಾವತ್ತೂ ನ್ಯಾಯ ನೀಡಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ರಾಜ್ಯ ಸರ್ಕಾರ ಕೊಟ್ಟ ₹ 2 ಸಾವಿರದಿಂದ ಅನುಕೂಲವಾಗಿದೆ ಎಂದು ವಿಜಯಪುರದ ವಿದ್ಯಾರ್ಥಿಯೋರ್ವ ಕೊಟ್ಟ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಅದನ್ನು ಟೀಕಿಸುವ ಭರದಲ್ಲಿ ಜೋಶಿ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.