ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು!

Published : Mar 07, 2021, 08:28 AM IST
ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು!

ಸಾರಾಂಶ

ನಮ್ಮನ್ನು ಡಿಎಂಕೆ ಸರಿ​ಯಾಗಿ ನಡೆ​ಸಿ​ಕೊ​ಳ್ಳುತ್ತಿಲ್ಲ: ಅಳ​ಗಿ​ರಿ| ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು| ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ ತಮಿ​ಳು​ನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌ ಅಳ​ಗಿರಿ

ಚೆನ್ನೈ(ಮಾ.07): ತಮಿಳುನಾಡಿನಲ್ಲಿ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸಲ ಎಐ​ಎ​ಡಿ​ಎಂಕೆ​ ಸರ್ಕಾ​ರ​ವನ್ನು ಹೊರ​ದಬ್ಬಿ ಆಡ​ಳಿ​ತದ ಚುಕ್ಕಾಣಿ ಹಿಡಿ​ಯಲು ಕನಸು ಕಾಣು​ತ್ತಿ​ರುವ ಡಿಎಂಕೆ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ ತಮಿ​ಳು​ನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌ ಅಳ​ಗಿರಿ ಅವರು, ‘ಸೀಟು ಹಂಚಿಕೆ ಬಗ್ಗೆ ಮಾತು​ಕ​ತೆಗೆ ಹೋದಾಗ ಕಾಂಗ್ರೆಸ್‌ ನಿಯೋ​ಗ​ವನ್ನು ಡಿಎಂಕೆ ನಡೆ​ಸಿ​ಕೊಂಡ ಬಗ್ಗೆ ಭಾರೀ ಘಾಸಿ​ಗೊ​ಳಿ​ಸಿದೆ. ನಮಗೆ ಇಂತಿಷ್ಟುಸೀಟು ಅನ್ನು​ವು​ದ​ಕ್ಕಿಂತ ಮಾಜಿ ಮುಖ್ಯ​ಮಂತ್ರಿ ಊಮ್ಮನ್‌ ಚಾಂಡಿ ಅವ​ರನ್ನು ನಡೆ​ಸಿ​ಕೊಂಡ ರೀತಿ ನೋವು ತರಿ​ಸಿದೆ’ ಎಂದು ಭಾವ​ನಾ​ತ್ಮ​ಕ​ವಾಗಿ ನುಡಿ​ದಿ​ದ್ದಾರೆ.

ಅಳ​ಗಿರಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು, ‘ಪಕ್ಷಕ್ಕೆ ಸರಿ​ಯಾದ ಸೀಟು ಪಡೆ​ಯುವ ಮೂಲಕ ಡಿಎಂಕೆ ಜೊತೆ​ಗಿನ ಮೈತ್ರಿ​ಯನ್ನು ಉಳಿ​ಸ​ಬೇ​ಕು’ ಎಂದು ಸೂಚಿ​ಸಿ​ದ್ದಾರೆ.

ಡಿಎಂಕೆ ಈಗಾಗಲೇ ವಿಸಿಕೆ, ಸಿಪಿಐ, ಐಯು​ಎಂಎಲ್‌, ವೈಕೋ ಅವರ ಎಂಡಿಎಂಕೆ ಹಾಗೂ ಎಂಎಂಕೆ ಪಕ್ಷ​ಗ​ಳೊಂದಿಗೆ ಮೈತ್ರಿ ಮಾಡಿ​ಕೊಂಡಿದೆ. ಆದರೆ ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಬದಲಾವಣೆ ಚರ್ಚೆ ತೀವ್ರ: ಹೈಕಮಾಂಡ್‌ ಜೊತೆ ಡಿ.ಕೆ.ಶಿವಕುಮಾರ್‌ ಮಾತುಕತೆ
ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ