'ಕೋಮುವಾದಿ ಪುಂಡರ ರಕ್ಷಿಸಲು ದ.ಕ. ಡಿಸಿ ಸಿಂಧು ವರ್ಗ'

By Kannadaprabha NewsFirst Published Jul 30, 2020, 7:19 AM IST
Highlights

ಕೋಮುವಾದಿ ಪುಂಡರ ರಕ್ಷಿಸಲು ದ.ಕ. ಡಿಸಿ ವರ್ಗ: ಸಿದ್ದು ಕಿಡಿ| ಕೊಲೆ ಬೆದರಿಕೆ ಎದುರಿಸುತ್ತಿರುವ ಸಿಂಧೂಗೆ ರಕ್ಷಣೆ ಇಲ್ಲವೇ?| ಸಿಎಂಗೆ ಸಿದ್ದು ತೀಕ್ಷ$್ಣ ಪ್ರಶ್ನೆ

ಬೆಂಗಳೂರು(ಜು.30): ‘ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ ಆಯುಕ್ತರ ವರ್ಗಾವಣೆ ಮಾಡಿದ ನೀವು, ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನೇ ಇದೀಗ ಕೋಮುವಾದಿ ಪುಂಡರ ರಕ್ಷಿಸಲು ವರ್ಗಾವಣೆ ಮಾಡಿದ್ದೀರಿ. ಇದೇನಾ ಕೊರೋನಾ ವಾರಿಯರ್ಸ್‌ಗೆ ನೀವು ಕೊಡುವ ಗೌರವ?’

- ಹೀಗಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

'ಮೊದಲು ಇವಳನ್ನು ಕಡಿದು ಕೊಲ್ಲಬೇಕು': ಡಿಸಿ ಸಿಂಧೂ ರೂಪೇಶ್‌ಗೆ ಕೊಲೆ ಬೆದರಿಕೆ ಹಾಕಿದವ ಅಂದರ್

ಈ ಬಗ್ಗೆ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಶಹಬ್ಬಾಸ್‌ ಯಡಿಯೂರಪ್ಪ ಅವರೇ ಕೊರೋನಾ ವಾರಿಯರ್ಸ್‌ಗೆ ಆಕಾಶದಿಂದ ಹೂಮಳೆ ಸುರಿಸಿ ಗೌರವ ಸೂಚಿಸಿದಿರಿ. ಇದೀಗ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡಿದ್ದಿರಿ. ಇದೇನಾ ಕೊರೋನಾ ವಾರಿಯರ್ಸ್‌ಗೆ ನೀಡುವ ಗೌರವ?’ ಎಂದು ಪ್ರಶ್ನಿಸಿದರು.

ಅಕ್ರಮ ಗೋಸಾಗಾಟ: ದ.ಕ ನಿರ್ಗಮನ ಡಿಸಿ ಸಿಂಧು ರೂಪೇಶ್‌ಗೆ ಕೊಲೆ ಬೆದರಿಕೆ..!

‘ಕೊರೋನಾ ಅಕ್ರಮ ಬಯಲಿಗೆಳೆದರೆ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡ್ತೀರಿ ಎಂದು ದೂರುತ್ತೀರಿ. ಮೊದಲು ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ ಆಯುಕ್ತರ ವರ್ಗಾವಣೆ ಮಾಡಿದಿರಿ. ಈಗ ಕೋಮುವಾದಿ ಪುಂಡರ ರಕ್ಷಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಇದೇನಾ ನಿಮ್ಮ ಕೊರೋನಾ ವಿರುದ್ಧದ ಹೋರಾಟ’ ಎಂದು ಕಿಡಿ ಕಾರಿದರು.

click me!