ರಾಜಾ ವೆಂಕ​ಟಪ್ಪ ನಾಯಕ ಗೆಲು​ವು ಹಿನ್ನೆಲೆ 18ಕಿಮೀ ದೀಡ್ ನಮಸ್ಕಾರ ಹಾಕಿದ ಅಭಿಮಾನಿ

Published : May 27, 2023, 04:30 AM IST
ರಾಜಾ ವೆಂಕ​ಟಪ್ಪ ನಾಯಕ ಗೆಲು​ವು ಹಿನ್ನೆಲೆ 18ಕಿಮೀ ದೀಡ್ ನಮಸ್ಕಾರ ಹಾಕಿದ ಅಭಿಮಾನಿ

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ನಗರದ ಉಪ್ಪಾರ ಮೊಹಲ್ಲಾದಿಂದ ಸಗರದ ಎಲ್ಲಮ್ಮ ದೇವಸ್ಥಾನದವರೆಗೆ ರಾಜು ಸುಣ್ಣದಮನಿ 18 ಕಿ.ಮೀ. ವರೆಗೆ ದೀಡ್‌ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿ ಹರಕೆ ತೀರಿಸಿದರು.

ಸುರಪುರ (ಮೇ.27) : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ನಗರದ ಉಪ್ಪಾರ ಮೊಹಲ್ಲಾದಿಂದ ಸಗರದ ಎಲ್ಲಮ್ಮ ದೇವಸ್ಥಾನದವರೆಗೆ ರಾಜು ಸುಣ್ಣದಮನಿ 18 ಕಿ.ಮೀ. ವರೆಗೆ ದೀಡ್‌ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿ ಹರಕೆ ತೀರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ರಾಜಾ ರಾಮಪ್ಪ ನಾಯಕ(Raja venkatappa nayak MLA surpur) ಮತ್ತು ಪ್ರಕಾಶ ಹಳ್ಳಿಗಿಡ, ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ವಿಜಯ ಸಾಧಿಸಿದ ಬಳಿಕ ತಾಲೂಕಿನಲ್ಲಿ ಹರಕೆ, ಪೂಜೆ ಪುನಸ್ಕಾರಗಳು ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತ ರಾಜು ಸುಣ್ಣದಮನಿ ನಿಸ್ವಾರ್ಥ ಮನೋಭಾವದಿಂದ ಬಿಸಿಲಿನ ಪ್ರಖರತೆಯನ್ನೂ ಲೆಕ್ಕಿಸದೆ 18 ಕಿ.ಮೀ. ದೀಡ್‌ ನಮಸ್ಕಾರ ಹಾಕುತ್ತಿದ್ದಾರೆ. ಈ ಬಾರಿಯ ಗೆಲುವು ಕಾಂಗ್ರೆಸ್‌ ಕಾರ್ಯಕರ್ತರ ಸ್ವಾಭಿಮಾನದ ಗೆಲುವಾಗಿದೆ ಎಂದು ತಿಳಿಸಿದರು.

ರಾಜುಗೌಡ ಶಾಸಕರಾಗಲೆಂದು ನಾಲ್ಕು ವರ್ಷ ಬರಿಗಾಲಲ್ಲೇ ತಿರುಗಿದವರು!

ನೂತನ ಶಾಸಕ, ಅನುಭವಿ ರಾಜಕಾರಣಿ, ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ರಾಜಾ ವೆಂಕಟಪ್ಪ ನಾಯಕರಿಗೆ ಸಿಎಂ ಸಿದ್ದರಾಮಯ್ಯನವರ ಸರ್ಕಾ​ರದ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ನೀಡಬೇಕು. ಸುಮಾರು ಏಳು ಚುನಾವಣೆಗಳಲ್ಲಿ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದು, ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅವರ ಅಪಾರ ಅನುಭವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ಹರಕೆ ತೀರಿಸಲಾಗಿದೆ ಎಂದರು. ಮುಖಂಡ ಹಣಮಂತ ನಗರಖಾನಿ, ಮಹೇಶ್‌ ಜೋಶಿ, ಸಂತೋಷ್‌ ಕುಮಾರ ಸಗರ ಸೇರಿದಂತೆ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌