ಸಿದ್ದರಾಮಯ್ಯಗೆ ಎದುರಾಯ್ತು ಭೂ ಕಂಟಕ..!

Published : Jan 20, 2020, 07:07 PM ISTUpdated : Jan 20, 2020, 07:17 PM IST
ಸಿದ್ದರಾಮಯ್ಯಗೆ ಎದುರಾಯ್ತು ಭೂ ಕಂಟಕ..!

ಸಾರಾಂಶ

ಒಂದೂ ಅಪವಾದಗಳಿಲ್ಲದೇ ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯ ವಿರುದ್ಧ ಎಸಿಬಿ ದೂರು ನೀಡಿದ್ದಾರೆ. ಏನಿದು ಪ್ರಕರಣ..?

ಬೆಂಗಳೂರು, (ಜ.20): ರಾಮನಗರ ಜಿಲ್ಲೆಯ ದೇವರಕಗ್ಗಲಹಳ್ಳಿಯಲ್ಲಿ 5.7 ಗುಂಟೆ ಜಮೀನು ಮಂಜೂರು ಮಾಡಿದ್ದ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.

2016ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ದೇವರಕಗ್ಗಲಹಳ್ಳಿಯಲ್ಲಿ 5.7 ಗುಂಟೆ ಕರಾಬು ಜಮೀನನ್ನು ಮಹತ್ಮಾಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಮಂಜೂರು ಮಾಡಿದ್ದರು.

ಸಜೀವ ಬಾಂಬ್‌ಗೆ ಬೆಚ್ಚಿ ಬಿದ್ದ ಮಂಗ್ಳೂರ್, ವಿಜಿಗೆ ಸಂಕಷ್ಟ ತಂದ ತಲ್ವಾರ್; ಜ.20ರ ಟಾಪ್ 10 ಸುದ್ದಿ!

ಆದ್ರೆ, ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲ ಹಳ್ಳಿ ಎನ್ನುವರು ಎಸಿಬಿಗೆ ದೂರು ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲದ ನಿಯಮದ ಪ್ರಕಾರ ಕರಾಬು ಜಮೀನು ಮಂಜೂರು ಮಾಡುವಂತ್ತಿಲ್ಲ. ಸಾರ್ವಜನಿಕ ಉದ್ದೇಶಕ್ಕೆ ಬಿ ಕರಾಬು ಜಮೀನು ಬಳಸಬೇಕು. ಅದು ಹರಾಜು ಪ್ರಕ್ರಿಯೆ ಮಾಡುಬೇಕು.

ಆದ್ರೆ, ಸಿದ್ದರಾಮಯ್ಯನವರು ಅದ್ಯಾವ ನಿಯಮಗಳನ್ನು ಪಾಲಿಸದೇ ಮಹತ್ಮಾಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಮಂಜೂರು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲ ಹಳ್ಳಿ ಆರೋಪಿಸಿದ್ದಾರೆ.

ಅದ್ರೆ ಸಿದ್ದರಾಮಯ್ಯ ಯಾವುದನ್ನು ಪಾಲಿಸದೇ ಮಂಜೂರು ಮಾಡಿದ್ದಾರೆ. ಅದು ಕೂಡ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ 20 ರಿಂದ 30 ಕೋಟಿನಷ್ಟ ಮಾಡಿದ್ದಾರೆ.

ಜಮೀನು ಪರಬಾವೆಯಲ್ಲಿ ಅಕ್ರಮ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!