ಬೆಂಗಳೂರು (ಜು.01): ರಾಜ್ಯ ಕಾಂಗ್ರೆಸ್ನ ಪ್ರಚಾರ ವಾಹನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಫೋಟೋ ತಾನಾಗಿಯೇ ಕಳಚಿಕೊಂಡಿದೆಯೇ ಹೊರತು ಉದ್ದೇಶಪೂರ್ವಕವಾಗಿ ಯಾರೂ ತೆಗೆದಿಲ್ಲ ಎಂದು ಕೆಪಿಸಿಸಿ ಸ್ಪಷ್ಟನೆ ನೀಡಿದೆ.
ಪ್ರಚಾರ ವಾಹನದ ಮುಂಭಾಗದಲ್ಲಿದ್ದ ಫೋಟೋ ಬೋಲ್ಟ್ ಸಡಿಲಗೊಂಡು ಉದುರಿದೆ.
ಸಿದ್ದುಗೆ ಮುಖಭಂಗ: ನಲಪಾಡ್ಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಡಿಕೆಶಿ ಯಶಸ್ವಿ ...
ಆದರೆ, ಹಿಂಭಾಗದಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇದೆ. ಹಿಂಭಾಗದಲ್ಲಿ ಅಳವಡಿಸಿದ್ದ ಫೋಟೋದಲ್ಲಿ ಬೇರೆಯವರ ಫೋಟೋ ಕಳಚಿದೆ.
ಹೀಗಾಗಿ ಸಿದ್ದರಾಮಯ್ಯ ಅವರ ಫೋಟೋ ತೆಗೆದಿದ್ದಾರೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು ಎಂದು ಕೆಪಿಸಿಸಿ ಮೂಲಗಳು ಸ್ಪಷ್ಟಪಡಿಸಿವೆ.