ಮೀಸಲಾತಿ ಚುನಾವಣೆ ಗಿಮಿಕ್‌: ಸಿದ್ದರಾಮಯ್ಯ

Published : Dec 31, 2022, 07:52 AM IST
ಮೀಸಲಾತಿ ಚುನಾವಣೆ ಗಿಮಿಕ್‌: ಸಿದ್ದರಾಮಯ್ಯ

ಸಾರಾಂಶ

ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ವಿಚಾರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲವೂ ಸಂವಿಧಾನ ಬದ್ಧವಾಗಿ ಆಗಿದೆಯೋ, ಇಲ್ಲವೋ ನೋಡಬೇಕು ಎಂದ ಸಿದ್ದರಾಮಯ್ಯ

ದಾವಣಗೆರೆ(ಡಿ.31):  ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಗಿಮಿಕ್‌ ಅಷ್ಟೆಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ವಿಚಾರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲವೂ ಸಂವಿಧಾನ ಬದ್ಧವಾಗಿ ಆಗಿದೆಯೋ, ಇಲ್ಲವೋ ನೋಡಬೇಕು ಎಂದರು.

ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರದಂತೆ ಸುಪ್ರೀಂ ಕೋರ್ಚ್‌ ಹೇಳಿದೆ. 1992ರಲ್ಲಿ ಸುಪ್ರೀಂ ಕೋರ್ಚ್‌ನ 9 ನ್ಯಾಯಾಧೀಶರ ನ್ಯಾಯಪೀಠವು ಇದನ್ನೇ ಹೇಳಿದೆ. ಕೇಂದ್ರದಲ್ಲಿ ಶೇ.49.5 ಮೀಸಲಾತಿ ನೀಡಿದ್ದು, ಈಚೆಗೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ(ಇಡಬ್ಲ್ಯುಸಿ) ವರ್ಗಕ್ಕೆ ಶೇ.10 ಮೀಸಲಾತಿ ನೀಡಿದೆ. ಒಟ್ಟು ಶೇ. 59.5 ಮೀಸಲಾತಿ ನೀಡಿದಂತಾಗಿದೆ. ಈಗ ರಾಜ್ಯ ಸರ್ಕಾರ ಎಲ್ಲಿಂದ ಮೀಸಲಾತಿ ಕೊಡುತ್ತದೆಂಬುದನ್ನೇ ಹೇಳಿಲ್ಲ. ಸರ್ಕಾರವೇ ಗೊಂದಲದಲ್ಲಿದೆ. ಚುನಾವಣೆಗಾಗಿ ಇಷ್ಟೆಲ್ಲಾ ಗಿಮಿಕ್‌ ಮಾಡುತ್ತಿದ್ದಾರಷ್ಟೇ ಎಂದು ಕುಟುಕಿದರು.

Belagavi Winter Session: ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದು ಆಕ್ರೋಶ

ಪಂಚಮಸಾಲಿ, ಒಕ್ಕಲಿಗರಿಗೆ ಎಲ್ಲಿಂದ ಮೀಸಲಾತಿ ನೀಡುತ್ತಾರೆ? ಒಕ್ಕಲಿಗರಿಗೆ ಮೀಸಲಾತಿ ನೀಡಲು ನಮ್ಮ ತಕರಾರು ಇಲ್ಲ. 3ಎ ವರ್ಗದಲ್ಲಿದ್ದ ಒಕ್ಕಲಿಗರನ್ನು 2ಡಿ ವರ್ಗಕ್ಕೆ ಸೇರಿಸಿದ್ದಾರೆ. 3ಬಿ ವರ್ಗದಲ್ಲಿದ್ದ ಪಂಚಮಸಾಲಿಗಳನ್ನು 2ಸಿ ಮಾಡಿದ್ದಾರೆ. ಎರಡೂ ಜಾತಿಗಳು ಈ ಬಗೆಯ ಮೀಸಲಾತಿ ಕೇಳಿದ್ದವ? ರಾಜಕೀಯ ಗಿಮಿಕ್‌ಗೋಸ್ಕರ್‌ ಹೀಗೆಲ್ಲಾ ಮಾಡಲಾಗಿದೆ ಎಂದು ದೂರಿದರು.

ಇಲ್ಲಿ ಕಾನೂನು ಮಾಡಿದರಷ್ಟೇ ಸಾಲದು, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು. ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರವಿದೆಯಲ್ಲ. ಸುಗ್ರಿವಾಜ್ಞೆ ತರಿಸಿ, ಪ್ರಧಾನಿ ಮೋದಿ ಮುಂದೆ ಕುಳಿತು ಮಾಡಿಸಲಿ ಎಂದು ಕಿವಿಮಾತು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?