ಬಿಜೆಪಿಯರಿಗೆ ಗಡಿಭಾಗದ ಮರಾಠಿಗರ ಭವಣೆ ಕೇಳಿಸಲ್ಲ: ಸಂಜಯ ರಾವೂತ್‌ ವಾಗ್ದಾಳಿ

Published : May 05, 2023, 09:30 PM IST
ಬಿಜೆಪಿಯರಿಗೆ ಗಡಿಭಾಗದ ಮರಾಠಿಗರ ಭವಣೆ ಕೇಳಿಸಲ್ಲ: ಸಂಜಯ ರಾವೂತ್‌ ವಾಗ್ದಾಳಿ

ಸಾರಾಂಶ

ಕೇವಲ ಎಂಇಎಸ್‌ನಿಂದ ಚುನಾಯಿತರಾದ ಶಾಸಕರು ಮಾತ್ರ ವಿಧಾನಸಭೆಯಲ್ಲಿ ಗಡಿಭಾಗದ ಮರಾಠಿಗರ ಧ್ವನಿ ಎತ್ತಲಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂಇಎಸ್‌ ಮತ್ತು ಶಿವಸೇನೆ ಜಂಟಿಯಾಗಿ ಕಣಕ್ಕಿಳಿದಿದೆ. ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಎಂಇಎಸ್‌ ಗೆಲ್ಲಿಸಬೇಕು ಎಂದು ಕೋರಿದ ಸಂಜಯ ರಾವೂತ್‌

ಖಾನಾಪುರ(ಮೇ.05): ಮಹಾರಾಷ್ಟ್ರದ ಬಿಜೆಪಿ ಮುಖಂಡರಿಗೆ ಈಗ ಗಡಿವಿವಾದ ನೆನಪಿಗೆ ಬಂದಿದೆ. ಉಳಿದ ದಿನಗಳಲ್ಲಿ ಅವರಿಗೆ ಗಡಿಭಾಗದ ಮರಾಠಿಗರ ಭವಣೆ ಕೇಳಿಸುವುದಿಲ್ಲ. ಹೀಗಾಗಿ ಬಿಜೆಪಿ ಮರಾಠಿಗರ ವಿರೋಧಿ ಎಂಬುವುದು ತಿಳಿದು ಬರುತ್ತದೆ ಎಂದು ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ ರಾವೂತ್‌ ಗುಡುಗಿದರು.

ಪಟ್ಟಣದಲ್ಲಿ ಬುಧವಾರ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಅಭ್ಯರ್ಥಿ ಮುರಳೀಧರ ಪಾಟೀಲ ಪರ ಆಯೋಜಿಸಿದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಎಂಇಎಸ್‌ನಿಂದ ಚುನಾಯಿತರಾದ ಶಾಸಕರು ಮಾತ್ರ ವಿಧಾನಸಭೆಯಲ್ಲಿ ಗಡಿಭಾಗದ ಮರಾಠಿಗರ ಧ್ವನಿ ಎತ್ತಲಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂಇಎಸ್‌ ಮತ್ತು ಶಿವಸೇನೆ ಜಂಟಿಯಾಗಿ ಕಣಕ್ಕಿಳಿದಿದೆ. ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಎಂಇಎಸ್‌ ಗೆಲ್ಲಿಸಬೇಕು ಎಂದು ಕೋರಿದರು.

ಸಾಹುಕಾರಗಿರಿ ಪದ್ಧತಿ ದೂರು ಮಾಡಿ: ಎಚ್‌.ಡಿ.ಕುಮಾರಸ್ವಾಮಿ

ಪ್ರಚಾರ ಸಭೆಗೂ ಮುಂಚೆ ರಾವೂತ್‌ ಸ್ಥಳೀಯ ಎಂಇಎಸ್‌ ಮುಖಂಡರು ಮತ್ತು ಕಾರ್ಯಕರ್ತರೊಟ್ಟಿಗೆ ಪಟ್ಟಣದ ಶಿವಸ್ಮಾರಕ ವೃತ್ತದಿಂದ ಅರ್ಬನ್‌ ಬ್ಯಾಂಕ್‌ ವೃತ್ತದವರೆಗೆ ರೋಡ್‌ ಶೋ ನಡೆಸಿದರು. ಈ ಸಂದರ್ಭದಲ್ಲಿ ಎಂಇಎಸ್‌ ಅಧ್ಯಕ್ಷ ಗೋಪಾಳ ದೇಸಾಯಿ, ಮಾಜಿ ಶಾಸಕ ದಿಗಂಬರ ಪಾಟೀಲ ಮತ್ತಿತರರು ಇದ್ದರು.

ಜೈ ಮಹಾರಾಷ್ಟ್ರ, ಮಹಾರಾಷ್ಟ್ರಕ್ಕೆ ಖಾನಾಪುರ ಸೇರಿಸಿ

ಪ್ರಚಾರ ಸಭೆ ಮತ್ತು ರೋಡ್‌ ಶೋ ಸಂದರ್ಭದಲ್ಲಿ ಎಂಇಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಜೈ ಮಹಾರಾಷ್ಟ್ರ ಮತ್ತು ಖಾನಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ರಚಿಸಬೇಕು ಎಂಬ ಘೋಷಣೆಗಳನ್ನು ಕೂಗಿದರು.

ಬಿಜೆಪಿಯವರು ತಮ್ಮ ವೈಯುಕ್ತಿಕ ವರ್ಚಸ್ಸನ್ನು ಬಳಸಿ ಚುನಾವಣೆ ಎದುರಿಸದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಬರುತ್ತಿದ್ದಾರೆ. ದೆಹಲಿಯಲ್ಲಿದ್ದು ನಮ್ಮ ದೇಶದ ಆಡಳಿತ ವ್ಯವಸ್ಥೆ ನೋಡಬೇಕಾಗಿದ್ದ ಪ್ರಧಾನಿ ವಾರಗಟ್ಟಲೇ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಂದು ರಾಜ್ಯ ಸುತ್ತುತ್ತಿರುವುದು ಹಾಸ್ಯಾಸ್ಪದ. ಇದು ದೇಶದ ಪ್ರಧಾನಿ ಹುದ್ದೆಯಲ್ಲಿರುವವರಿಗೆ ಶೋಭೆ ತರುವ ಕೆಲಸವಲ್ಲ ಅಂತ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ ರಾವೂತ್‌ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌