Karnataka Assembly Polls: ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಕಣಕ್ಕೆ

Published : Nov 14, 2022, 07:24 PM ISTUpdated : Nov 14, 2022, 07:31 PM IST
Karnataka Assembly Polls: ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಕಣಕ್ಕೆ

ಸಾರಾಂಶ

Karnataka Assembly Elections 2023: ದಾವಣಗೆರೆ ಜಿಲ್ಲೆಯಲ್ಲಿ ಎಲೆಕ್ಷನ್ ಜ್ವರ ಶುರುವಾಗಿದ್ದು  ಜಿಲ್ಲೆಯ  ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾ ಮುಂದು ತಾ ಮುಂದು ಎಂದು ಅಭ್ಯರ್ಥಿಗಳು ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಅದರಲ್ಲು ಈಗಾಗಲೇ ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ನಿಂದ ಟಿಕೇಟ್ ಪಡೆಯುವ ಆಕಾಂಕ್ಷಿಗಳು ಕ್ಷೇತ್ರವಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ವರದಿ : ವರದರಾಜ್  ಏಷ್ಯಾನೆಟ್ ಸುವರ್ಣ ನ್ಯೂಸ್ 

ದಾವಣಗೆರೆ (ನ.14): ದಾವಣಗೆರೆ ಜಿಲ್ಲೆಯಲ್ಲಿ ಎಲೆಕ್ಷನ್ ಜ್ವರ ಶುರುವಾಗಿದ್ದು  ಜಿಲ್ಲೆಯ  ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾ ಮುಂದು ತಾ ಮುಂದು ಎಂದು ಅಭ್ಯರ್ಥಿಗಳು ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಅದರಲ್ಲು ಈಗಾಗಲೇ ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ನಿಂದ ಟಿಕೇಟ್ ಪಡೆಯುವ ಆಕಾಂಕ್ಷಿಗಳು ಕ್ಷೇತ್ರವಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್ ನ ಹಿರಿಯ ಮುಖಂಡ 91 ವರ್ಷ ಶಾಮನೂರು ಶಿವಶಂಕರಪ್ಪ ಈ ಬಾರಿ ದಾವಣಗೆರೆ  ದಕ್ಷಿಣ ಕ್ಷೇತ್ರದಿಂದ  ಅರ್ಜಿ ಸಲ್ಲಿಸಿದ್ದರೆ  ಇನ್ನು ದಾವಣಗೆರೆ ಉತ್ತರ  ಚನ್ನಗಿರಿ ಮಾಯಕೊಂಡ ಹರಿಹರ ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧೆಗೆ ಬಿದ್ದು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಚನ್ನಗಿರಿ  ಕ್ಷೇತ್ರದಲ್ಲಿ  ದಿವಂಗತ ಮಾಜಿ ಮುಖ್ಯಮಂತ್ರಿ  ಜೆ ಹೆಚ್ ಪಟೇಲ್ ಕುಟುಂಬದಿಂದ  ಚನ್ನಗಿರಿ ಟಿಕೇಟ್ ಆಕಾಂಕ್ಷಿಯಾಗಿ  ಈ ಬಾರಿ ಟಿಕೇಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.. ಜೆ ಹೆಚ್ ಪಟೇಲ್ ಸಹೋದರನ ಪುತ್ರ ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ರಿಂದ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ  ಸಂದರ್ಭದಲ್ಲಿ ಬಡಕುಟುಂಬವೊಂದರ ಮದುವೆಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಕೆಪಿಸಿಸಿಗೆ ನೀಡುವ 2 ಲಕ್ಷ ನಿಧಿ ಹಣವನ್ನು ಬಡ ವಿಕಲ ಚೇತನ ಮಹಿಳೆ ಮದುವೆಗೆ ನೀಡಲು ನಿರ್ಧಾರ ಮಾಡಿ   ಆ ಕುಟುಂಬಕ್ಕೆ ಚೆಕ್ ನೀಡಿದ್ದಾರೆ.  ದಾವಣಗೆರೆ ಅಂಬೇಡ್ಕರ್ ಸರ್ಕಲ್ ನಲ್ಲಿ ಆ ಮಹಿಳೆ ಕುಟುಂಬಕ್ಕೆ ಚೆಕ್ ನೀಡಿದ್ದಾರೆ.  2 ಲಕ್ಷ ಹಣವನ್ನು ಮದುವೆಗೆ ಬಳಸಲು ಅನುಮತಿ ನೀಡಿ  ಎಂದು ಕೆಪಿಸಿಸಿಗೆ  ಮನವಿ ಮಾಡುತ್ತಿರುವ ತೇಜಸ್ವಿ ಪಟೇಲ್ ಕೆಪಿಸಿಸಿಗೆ ಈ 2 ಲಕ್ಷ ಹಣ  ಹೊರೆಯಾಗುವುದಿಲ್ಲ. ಈ ಹಣವನ್ನು ಬಡ ವಿಕಲಚೇತನ ಮಹಿಳೆಗೆ ನೀಡಿ ಎಂದಿದ್ದಾರೆ.  ಕೆಪಿಸಿಸಿ ಒಂದು ವೇಳೆ ಒಪ್ಪದಿದ್ದರೇ ತಾನೇ ಬಡ ಮಹಿಳೆಗೆ ಹಣ ನೀಡಲು ನಿರ್ಧಾರ ಮಾಡಿದ್ದಾರೆ.

ಚುನಾವಣೆ ಬಂದಾಗಲೆಲ್ಲಾ ಸಿದ್ದು ಅಬ್ಬೇಪಾರಿ: ಪ್ರಹ್ಲಾದ್‌ ಜೋಶಿ ಲೇವಡಿ

ಬೆಳಲಗೆರೆ ಯಲ್ಲಮ್ಮ ಹಾಗು ಅಕಾಡದರ ರಂಗಪ್ಪ ದಂಪತಿಗಳಿಗೆ ಐವರು ಹೆಣ್ಣಮಕ್ಕಳಿದ್ದು ಐವರು ಹೆಣ್ಣುಮಕ್ಕಳು ಸಹ ಮಾತನಾಡಲು ಬಾರದೆ  ವಿಕಲಚೇತನ ರಾಗಿದ್ದಾರೆ. ಅದರಲ್ಲಿ ಓರ್ವ ಮಹಿಳೆ ಗೀತಾ ಎಂಬ ಯುವತಿಯ ಮದುವೆ ಒದಗಿಬಂದಿದ್ದು ಹರಪನಹಳ್ಳಿ ತಾಲ್ಲೂಕಿನ ವಡ್ಡಿನಹಳ್ಳೀ ಗ್ರಾಮದ ಮಂಜುನಾಥ್ ಮದುವೆ ಆಗಲು ಮುಂದೆ ಬಂದಿದ್ದಾರೆ. ಮಂಜುನಾಥ್ ಸಹ ವಿಕಲಚೇತನ ರಾಗಿದ್ದು ಗೀತಾ ಕುಟುಂಬಕ್ಕೆ 2 ಲಕ್ಷ ಹಣವನ್ನು ಹೊಂದಿಸುವುದು ಕಷ್ಟವಾಗಿದೆ.

ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್‌

ಈ ಬಗ್ಗೆ ತೇಜಸ್ವಿ ಪಟೇಲ್ ರಲ್ಲಿ ಆ ಕುಟುಂಬ ಬಂದು ಕೇಳಿಕೊಂಡಾಗ ಆಯ್ತು ನೀವು ಮದುವೆಗೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ಈ ಬಗ್ಗೆ ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ಏನಾದ್ರು ಸಹಾಯ ಮಾಡಲು ವಿಚಾರಿಸಿದಾಗ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡುವ ಯಾವುದೇ ಅವಕಾಶ ಇಲ್ಲ ಎಂದರು. ಆಗ ತೇಜಸ್ವಿ ಪಟೇಲ್ ಕೆಪಿಸಿಸಿಗೆ ನೀಡುವ ಹಣವನ್ನೇ ಏಕೆ ನೀಡಬಾರದು ಎಂದು ವಿಚಾರಿಸಿ ಈ ಬಗ್ಗೆ ಕೆಪಿಸಿಸಿ ಬಳಿ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ಕೆಪಿಸಿಸಿ ಒಪ್ಪಿದರೆ  ಶಾಮನೂರು ಶಿವಶಂಕರಪ್ಪನವರ ಮುಖಾಂತರ  ಆ ಕುಟುಂಬದ ಮದುವೆಗೆ ನೆರವಾಗಲು ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ