ಭಾರೀ ಕುತೂಹಲ ಮೂಡಿಸಿದ ಬದ್ಧ ವೈರಿಗಳ ಗೌಪ್ಯ ಸಭೆ!

Published : Oct 09, 2019, 09:57 AM IST
ಭಾರೀ ಕುತೂಹಲ ಮೂಡಿಸಿದ ಬದ್ಧ ವೈರಿಗಳ ಗೌಪ್ಯ ಸಭೆ!

ಸಾರಾಂಶ

ಬದ್ಧ ರಾಜ​ಕೀಯ ವೈರಿ​ಗ​ಳಾದ ಮಂಜು, ಬಾಲ​ಕೃ​ಷ್ಣರ ಗೌಪ್ಯ ಸಭೆ| ಮಾಗಡಿ ಕ್ಷೇತ್ರ​ದಲ್ಲಿ ರಾಜ​ಕೀಯ ಸಂಚ​ಲನ ಮೂಡಿ​ಸಿದೆ ಇಬ್ಬರ ಭೇಟಿ| ಇಬ್ಬರು ನಾಯ​ಕರ ಭೇಟಿಯ ಹಿಂದಿನ ರಹ​ಸ್ಯ​ವಾ​ದರೂ ಏನು?

ಬೆಂಗಳೂರು[ಅ.09]: ರಾಜ​ಕಾ​ರ​ಣ​ದಲ್ಲಿ ಬದ್ಧ ವೈರಿ​ಗ​ಳಾ​ಗಿ​ರುವ ಮಾಗಡಿ ಕ್ಷೇತ್ರದ ಜೆಡಿ​ಎಸ್‌ ಶಾಸಕ ಎ.ಮಂಜು​ನಾಥ್‌ ಹಾಗೂ ಕಾಂಗ್ರೆಸ್‌ ನಾಯ​ಕ​ರಾದ ಮಾಜಿ ಶಾಸಕ ಎಚ್‌ .ಸಿ.​ಬಾ​ಲ​ಕೃಷ್ಣ ಅವರು ಗೌಪ್ಯ​ವಾಗಿ ಸಭೆ ನಡೆ​ಸಿ​ರು​ವುದು ರಾಜ​ಕೀಯ ವಲಯ​ದಲ್ಲಿ ತೀವ್ರ ಚರ್ಚೆಗೆ ಗ್ರಾಸ​ವಾ​ಗಿದೆ.

ಬೆಂಗಳೂರಿನ ಶಿವಾ​ನಂದ ಸರ್ಕಲ್‌ನಲ್ಲಿನ ಖಾಸಗಿ ಹೋಟೆಲ್‌ ಒಂದರಲ್ಲಿ ಶಾಸಕ ಎ. ಮಂಜು​ನಾಥ್‌, ಮಾಜಿ ಶಾಸಕ ಎಚ್‌.ಸಿ. ​ಬಾ​ಲ​ಕೃಷ್ಣ, ಕಾಂಗ್ರೆಸ್‌ ಯುವ ಅಧ್ಯಕ್ಷ ರಘುವೀರ್‌ ಗೌಡ ಹಾಗೂ ಮಂಡ್ಯದ ಕಾಂಗ್ರೆಸ್‌ ನಾಯಕ ಗಣಿಗ ರವಿ ಅವ​ರೆ​ಲ್ಲರು ಒಟ್ಟಿಗೆ ಚರ್ಚೆ ನಡೆ​ಸು​ತ್ತಿ​ರುವ ಫೋಟೋ​ಗ​ಳು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿವೆ.

ಪ್ರತಿ ವಿಧಾ​ನ​ಸಭಾ ಚುನಾ​ವ​ಣೆ​ಗ​ಳಲ್ಲಿ ಪರ​ಸ್ಪರ ಪ್ರತಿ​ಸ್ಪ​ರ್ಧಿ​ಗ​ಳಾ​ಗುವ ಇಬ್ಬರು ನಾಯ​ಕರು ಗೌಪ್ಯ ಸಭೆ ನಡೆ​ಸಿ​ರು​ವುದು ಜೆಡಿ​ಎಸ್‌ ಪಾಳ​ಯ​ದಲ್ಲಿ ಸಂಚ​ಲನ ಮೂಡಿ​ಸಿದೆ. ದಳ​ದಲ್ಲಿ ಎ. ಮಂಜು​ ಅ​ವರ ಮಾತಿಗೆ ಬೆಲೆ​ಯಿಲ್ಲ. ಕ್ಷೇತ್ರ​ದಲ್ಲಿ ಅಭಿವೃದ್ಧಿ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಇದರಿಂದ ಇವರು ಬೇಸತ್ತಿದ್ದಾರೆ. ಹೆಸರಿಗಷ್ಟೆಶಾಸಕ. ಆದರೆ, ಸ್ವತಂತ್ರ​ವಾಗಿ ಕ್ಷೇತ್ರದ ಕೆಲಸ ಮಾಡಲಾಗುತ್ತಿಲ್ಲ ಎಂದು ನೊಂದುಕೊಂಡಿದ್ದಾರೆ ಎಂಬುದು ಅವರ ಆಪ್ತರ ಮಾತು.

ಹೊಂದಾ​ಣಿಕೆ ಯತ್ನ:

ಹೀಗಾ​ಗಿ ಜೆಡಿ​ಎಸ್‌ ವರಿ​ಷ್ಠ​ರಿಗೆ ಸೆಡ್ಡು ಹೊಡೆ​ಯಲು ಮಂಜು​ರ​ವರು ಶತ್ರು ಜೊತೆಗೆ ಹೊಂದಾ​ಣಿಕೆ ಮಾಡಿ​ಕೊ​ಳ್ಳು​ತ್ತಿ​ದ್ದಾ​ರೆ. ದಳ​ಪ​ತಿ​ಗಳ ವಿರು​ದ್ಧವೇ ತೊಡೆ ತಟ್ಟಲು ಒಂದಾ​ಗು​ತ್ತಿ​ದ್ದಾ​ರೆಯೇ ಎಂಬ ಅನು​ಮಾ​ನ​ಗಳು ದಟ್ಟ​ವಾ​ಗುತ್ತಿವೆ.

ಜೆಡಿಎಸ್‌ ಪಕ್ಷದಲ್ಲಿ ದೀರ್ಘ​ಕಾಲ ರಾಜ​ಕಾ​ರಣ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿರುವ ಎಚ್‌.ಸಿ.ಬಾಲಕೃಷ್ಣರವರು ಶಾಸಕ ಎ.ಮಂಜುನಾಥ್‌ ಅವರನ್ನು ಜೆಡಿಎಸ್‌ ಪಕ್ಷದಿಂದ ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವ ಕಾರ್ಯಕ್ಕೆ ನವರಾತ್ರಿ ಸಂದರ್ಭದಲ್ಲಿಯೇ ಚಾಲನೆ ನೀಡಿದ್ದಾರೆ. ಇವರಿಬ್ಬರ ನಡುವಿನ ಮಾತು ಹೆಚ್ಚೂ ಕಡಿಮೆ ಫಲಪ್ರದವಾಗಿವೆ ಎಂಬ ಬಿಸಿಬಿಸಿ ಚರ್ಚೆಗಳು ನಡೆ​ಯು​ತ್ತಿ​ವೆ.

ಕಳೆದ ವಿಧಾ​ನ​ಸಭಾ ಚುನಾ​ವಣೆ ವೇಳೆ ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಎಚ್‌.ಸಿ. ​ಬಾ​ಲ​ಕೃಷ್ಣ ಅವ​ರನ್ನು ಕಾಂಗ್ರೆಸ್‌ನಲ್ಲಿದ್ದ ಮಂಜು​ನಾಥ್‌ ಅವ​ರನ್ನು ಜೆಡಿ​ಎಸ್‌ನಿಂದ ಟಿಕೆಟ್‌ ನೀಡಿ ಸೋಲಿ​ಸ​ಲಾ​ಗಿತ್ತು. ಆ ಸಿಟ್ಟನ್ನು ತೀರಿ​ಸಿ​ಕೊ​ಳ್ಳಲು ಮಾಜಿ ಸಿಎಂ ಕುಮಾ​ರ​ಸ್ವಾಮಿ ಬಳ​ಸಿದ ಅಸ್ತ್ರ​ವನ್ನೇ ಬಳ​ಸಲು ಬಾಲ​ಕೃಷ್ಣರವರು ಶಾಸಕ ಮಂಜು​ನಾಥ್‌ ಅವ​ರನ್ನು ಭೇಟಿ​ಯಾ​ಗಿ​ರ​ಬ​ಹುದು ಎಂಬ ಪ್ರಶ್ನೆ ಕಾಡ​ತೊ​ಡ​ಗಿ​ದೆ.

ಯಾರು ಎಲ್ಲಿಗೆ ಹೋಗ್ತಾರೆ?:

ಹಾಗೊಂದು ವೇಳೆ ಎ. ಮಂಜು​ನಾಥ್‌ ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರ್ಪ​ಡೆ​ಯಾ​ದಲ್ಲಿ ಮುಂದಿನ ಚುನಾ​ವ​ಣೆ​ಯ​ಲ್ಲಿ ಮಾಗಡಿ ಕ್ಷೇತ್ರ​ದಿಂದ ಸ್ಪರ್ಧಿ​ಸು​ವವರು ಯಾರು? ಅನರ್ಹ ಶಾಸ​ಕರಿಂದಾಗಿ ನಡೆ​ಯ​ಲಿ​ರುವ ಉಪ​ಚು​ನಾ​ವ​ಣೆ​ಯಲ್ಲಿ ಮಹಾ​ಲಕ್ಷ್ಮಿ ಲೇಔಟ್‌ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಪಕ್ಷ​ದಿಂದ ಎಚ್‌.ಸಿ. ​ಬಾ​ಲ​ಕೃಷ್ಣ ಸ್ಪರ್ಧಿ​ಸು​ತ್ತಾರೆ ಎಂಬ ಮಾತು​ಗಳು ಕೇಳಿ ಬರು​ತ್ತಿವೆ.

ಆ ರೀತಿ​ ಆ​ದಲ್ಲಿ ಎ.ಮಂಜು​ನಾಥ್‌ ಅವ​ರಿಗೆ ಮಾಗಡಿ ಕ್ಷೇತ್ರ ಗಟ್ಟಿ​ಯಾ​ಗ​ಲಿದೆ. ಆದರೆ, ಬಾಲಕೃಷ್ಣರ​ವರು ಮಹಾ​ಲಕ್ಷ್ಮಿ ಲೇಔಟ್‌ ಕ್ಷೇತ್ರ​ದಿಂದ ಸ್ಪರ್ಧಿ​ಸಲು ಹಿಂದೇಟು ಹಾಕು​ತ್ತಿ​ದ್ದಾರೆ. ನನ್ನ ಕರ್ಮ​ಭೂಮಿ ಏನಿ​ದ್ದರೂ ಮಾಗ​ಡಿ ಕ್ಷೇತ್ರ. ಸೋತರೂ, ಗೆದ್ದರೂ ಮಾಗಡಿಯಲ್ಲಿಯೇ ಸ್ಪರ್ಧಿ​ಸು​ತ್ತೇನೆ ಎಂಬ ಮಾತು​ಗ​ಳನ್ನು ಆಡಿ​ದ್ದಾ​ರೆ.

ಮಾಗ​ಡಿ​ಯಲ್ಲಿ ಬದ್ಧ ರಾಜ​ಕೀಯ ವೈರಿ​ಗ​ಳೆಂದೇ ಕರೆ​ಸಿ​ಕೊ​ಳ್ಳುವ ಮಂಜು​ನಾಥ್‌ ಮತ್ತು ಬಾಲ​ಕೃ​ಷ್ಣ​ರ​ವರು ಗುಪ್ತ ಸಭೆಯ ಹಿಂದಿ​ರುವ ಪ್ಲಾನ್‌ ಏನೆಂಬು​ದ​ನ್ನು ಅವ​ರೇ ಸ್ಪಷ್ಟಪಡಿಸ​ಬೇಕಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ