ರೇಣು ದಿಢೀರ್‌ ದೆಹಲಿಗೆ ದೌಡು, ಬಳಿಕ ಥಂಡಾ ಹೊಡೆದ ಶಾಸಕ..!

Kannadaprabha News   | Asianet News
Published : Jan 15, 2021, 11:45 AM IST
ರೇಣು ದಿಢೀರ್‌ ದೆಹಲಿಗೆ ದೌಡು, ಬಳಿಕ ಥಂಡಾ ಹೊಡೆದ ಶಾಸಕ..!

ಸಾರಾಂಶ

ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ| ಬೆಳಗ್ಗೆ ಹೈಕಮಾಂಡ್‌ ಭೇಟಿ ಮಾಡಲು ದೆಹಲಿಗೆ| ಬಳಿಕ ವೈಯಕ್ತಿಕ ಕೆಲಸಕ್ಕೆ ಆಗಮಿಸಿದ್ದೆ ಎಂದ ರೇಣುಕಾಚಾರ್ಯ| .ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶ ಹೊರಹಾಕಿದ ರೇಣು| 

ನವದೆಹಲಿ(ಜ.15): ಸಚಿವ ಸ್ಥಾನ ವಂಚಿತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುರುವಾರ ಬೆಳಗ್ಗೆ ದಿಢೀರ್‌ ದೌಡಾಯಿಸಿ ಭಾರೀ ಬಂಡಾಯದ ಸುಳಿವು ನೀಡಿದ್ದರು. ಆದರೆ, ಅದ್ಯಾಕೋ ಬಳಿಕ ಥಂಡಾ ಹೊಡೆದ ಅವರು ನಾನು ಹೈಕಮಾಂಡ್‌ ಭೇಟಿಗಲ್ಲ, ವೈಯಕ್ತಿಕ ಕೆಲಸದಿಂದಾಗಿ ದೆಹಲಿಗೆ ಬಂದಿದ್ದೇನೆ ಎಂದು ಉಲ್ಟಾಹೊಡೆದರು.

ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದ ರೇಣುಕಾಚಾರ್ಯ ಅವರು ದೆಹಲಿಗೆ ತೆರಳಿ ಹೈಕಮಾಂಡ್‌ಗೆ ದೂರು ನೀಡುವ ಸುಳಿವು ನೀಡಿದ್ದರು. ಅದರಂತೆ ಬೆಳಗ್ಗೆ ಲಘುಬಗೆಯಿಂದ ದೆಹಲಿ ವಿಮಾನ ಹತ್ತಿದ್ದರು. ಆದರೆ, ದೆಹಲಿಗೆ ತೆರಳಿದ ಬಳಿಕ ಯಾಕೋ ತಣ್ಣಗಾದಂತೆ ಕಂಡ ಅವರು, ನಾನು ದೆಹಲಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡಲು ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ಆಗಮಿಸಿದ್ದೇನೆ. ಅವಕಾಶ ಸಿಕ್ಕರಷ್ಟೇ ಕೇಂದ್ರ ನಾಯಕರನ್ನು ಭೇಟಿಯಾಗುತ್ತೇನೆ. ಅಲ್ಲದೆ, ನಾನು ಅತೃಪ್ತ ಶಾಸಕರ ತಂಡದ ನಾಯಕತ್ವ ವಹಿಸಲ್ಲ ಎಂದೂ ಸ್ಪಷ್ಟಪಡಿಸಿದರು

ಸಿಗದ ಸಚಿವ ಸ್ಥಾನ: ಸಿಎಂ ವಿರುದ್ಧವೇ ನೋವು ತೋಡಿಕೊಂಡ ರೇಣುಕಾಚಾರ್ಯ

ಸಿಡಿಯೂ ಇಲ್ಲ ಪಿಡಿಯೂ ಇಲ್ಲ : 

ಸಿ.ಡಿ. ತೋರಿಸಿ ಮಂತ್ರಿಯಾದರು ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸಿ.ಡಿ.ಯೂ ಇಲ್ಲ, ಪಿ.ಡಿ.ಯೂ ಇಲ್ಲ. ಅದೆಲ್ಲಾ ಗಾಳಿ ಸುದ್ದಿ ಎಂದರು.

ಏತನ್ಮಧ್ಯೆ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶ ಹೊರಹಾಕಿದ ರೇಣುಕಾಚಾರ್ಯ, ಚುನಾವಣೆಗೆ ಸ್ಪರ್ಧಿಸದೆ, ಕ್ಷೇತ್ರದ ಜನರಿಂದಲೆ ತಿರಸ್ಕಾರಗೊಂಡವರು, ವಂಚನೆ ಮಾಡಿದವರನ್ನು ಮಂತ್ರಿ ಮಾಡಲಾಗಿದೆ ಎಂದು ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ