ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಕರ್ನಾಟಕಕ್ಕೆ ಅಪಖ್ಯಾತಿ: ಸುರ್ಜೇವಾ​ಲ

Published : Feb 22, 2023, 12:30 AM IST
ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಕರ್ನಾಟಕಕ್ಕೆ ಅಪಖ್ಯಾತಿ: ಸುರ್ಜೇವಾ​ಲ

ಸಾರಾಂಶ

ರಾಜ್ಯದ ಉ​ನ್ನತ ಶಿ​ಕ್ಷಣ ಸ​ಚಿವ ಅ​ಶ್ವ​ತ್ಥ​ನಾ​ರಾ​ಯಣ, ಸಿ​ದ್ದ​ರಾ​ಮಯ್ಯ ಹ​ತ್ಯೆಗೆ ಪ್ರ​ಚೋ​ದನೆ ನೀ​ಡು​ತ್ತಾರೆ ಎಂದು ಹ​ರಿ​ಹಾ​ಯ್ದ ಅವರು, ಉ​ನ್ನತ ಶಿ​ಕ್ಷಣ ಸ​ಚಿ​ವರ ಪ್ರ​ಚೋದನೆ ಹಿಂದೆ ನ​ರೇಂದ್ರ​ ಮೋದಿ, ಜೆ.ಪಿ. ನಡ್ಡಾ ಹಾಗೂ ಬ​ಸ​ವ​ರಾಜ ಬೊ​ಮಾಯಿ ಬೆಂಬ​ಲ​ವಿದ್ದು, ಬಿ​ಜೆ​ಪಿಗೆ ಬ​ಹಿ​ರಂಗ ಸ​ವಾಲು ಹಾ​ಕು​ತ್ತೇವೆ: ರ​ಣ​ದೀಪ್‌ ಸುರ್ಜೇವಾಲ 

ಮಂಡ್ಯ(ಫೆ.22):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ರಾಜ್ಯಕ್ಕೆ ಅಪಖ್ಯಾತಿ ಬಂದೊದಗಿದೆ ಎಂದು ಎ​ಐ​ಸಿಸಿ ಪ್ರ​ಧಾನ ಕಾ​ರ‍್ಯ​ದರ್ಶಿ ರ​ಣ​ದೀಪ್‌ ಸುರ್ಜೇವಾಲ ಅ​ಸ​ಮಾ​ಧಾನ ವ್ಯ​ಕ್ತ​ಪ​ಡಿ​ಸಿ​ದರು. ಮು​ಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ ನೇ​ತೃ​ತ್ವದ ಬಿ​ಜೆಪಿ ಸರ್ಕಾರ ಭ್ರ​ಷ್ಟಾ​ಚಾ​ರದ ಹ​ಲವು ಮು​ಖ​ಗ​ಳನ್ನು ಹೊಂದಿದೆ ಇದು ರಾಜ್ಯಕ್ಕೆ ಕಳಂಕ ತರುವ ವಿಚಾರ ಎಂದು ಹೇಳಿದರು.

ರಾಜ್ಯದ ಉ​ನ್ನತ ಶಿ​ಕ್ಷಣ ಸ​ಚಿವ ಅ​ಶ್ವ​ತ್ಥ​ನಾ​ರಾ​ಯಣ, ಸಿ​ದ್ದ​ರಾ​ಮಯ್ಯ ಹ​ತ್ಯೆಗೆ ಪ್ರ​ಚೋ​ದನೆ ನೀ​ಡು​ತ್ತಾರೆ ಎಂದು ಹ​ರಿ​ಹಾ​ಯ್ದ ಅವರು, ಉ​ನ್ನತ ಶಿ​ಕ್ಷಣ ಸ​ಚಿ​ವರ ಪ್ರ​ಚೋದನೆ ಹಿಂದೆ ನ​ರೇಂದ್ರ​ ಮೋದಿ, ಜೆ.ಪಿ. ನಡ್ಡಾ ಹಾಗೂ ಬ​ಸ​ವ​ರಾಜ ಬೊ​ಮಾಯಿ ಬೆಂಬ​ಲ​ವಿದ್ದು, ಬಿ​ಜೆ​ಪಿಗೆ ಬ​ಹಿ​ರಂಗ ಸ​ವಾಲು ಹಾ​ಕು​ತ್ತೇವೆ. ಸ್ಥಳ ಹಾಗೂ ದಿ​ನಾಂಕ​ವನ್ನು ನಿ​ಗ​ದಿಪ​ಡಿ​ಸಿ​ದರೆ ಸಿ​ದ್ದರಾ​ಮಯ್ಯ ಮತ್ತು ಶಿ​ವ​ಕು​ಮಾರ್‌ ಅ​ವ​ರನ್ನು ಅವರ ಬಳಿಗೇ ಕ​ರೆ​ತ​ರು​ತ್ತೇವೆ. ಹತ್ಯೆ ಮಾ​ಡಲು ಸಿ​ದ್ಧ​ರಿ​ದ್ದೀರಾ? ಎಂದು ಪ್ರ​ಶ್ನಿ​ಸಿ​ದರು.

MANDYA: ಕಸದ ರಾಶಿ ಪಕ್ಕದಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ: ಮಗು ವಶಕ್ಕೆ ಪಡೆದ ಮಕ್ಕಳ‌ ಕಲ್ಯಾಣ ಇಲಾಖೆ

ತುಟಿ ಬಿಚ್ಚದ ಪ್ರಧಾನಿ: 

ರಾ​ಜ್ಯದ ಬಿ​ಜೆಪಿ ಸರ್ಕಾರ 40 ಪರ್ಸೆಂಟ್‌ ಕ​ಮೀ​ಷನ್‌ ಸರ್ಕಾರ​ವೆಂದು ರಾಜ್ಯ ಗು​ತ್ತಿ​ಗೆ​ದಾ​ರರ ಸಂಘ ಹಾಗೂ ಖಾ​ಸಗಿ ಶಿ​ಕ್ಷಣ ಸಂಸ್ಥೆ​ಗಳ ಒಕ್ಕೂಟ ಪ್ರ​ಧಾನ ಮಂತ್ರಿಗೆ ಪತ್ರ ಬ​ರೆ​ದಿದೆ. ಈ ನ​ಡುವೆ ರಾ​ಜ್ಯಕ್ಕೆ ಎಂಟು ಬಾರಿ ಭೇಟಿ ನೀ​ಡಿ​ರುವ ಪ್ರ​ಧಾ​ನಿ​ಗಳು ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚದೆ ಮೌ​ನಕ್ಕೆ ಶ​ರ​ಣಾ​ಗಿ​ರು​ವುದು ದು​ರ​ದೃ​ಷ್ಟ​ಕರ ಎಂದು ಟೀ​ಕಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ