ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಕರ್ನಾಟಕಕ್ಕೆ ಅಪಖ್ಯಾತಿ: ಸುರ್ಜೇವಾ​ಲ

By Kannadaprabha NewsFirst Published Feb 22, 2023, 12:30 AM IST
Highlights

ರಾಜ್ಯದ ಉ​ನ್ನತ ಶಿ​ಕ್ಷಣ ಸ​ಚಿವ ಅ​ಶ್ವ​ತ್ಥ​ನಾ​ರಾ​ಯಣ, ಸಿ​ದ್ದ​ರಾ​ಮಯ್ಯ ಹ​ತ್ಯೆಗೆ ಪ್ರ​ಚೋ​ದನೆ ನೀ​ಡು​ತ್ತಾರೆ ಎಂದು ಹ​ರಿ​ಹಾ​ಯ್ದ ಅವರು, ಉ​ನ್ನತ ಶಿ​ಕ್ಷಣ ಸ​ಚಿ​ವರ ಪ್ರ​ಚೋದನೆ ಹಿಂದೆ ನ​ರೇಂದ್ರ​ ಮೋದಿ, ಜೆ.ಪಿ. ನಡ್ಡಾ ಹಾಗೂ ಬ​ಸ​ವ​ರಾಜ ಬೊ​ಮಾಯಿ ಬೆಂಬ​ಲ​ವಿದ್ದು, ಬಿ​ಜೆ​ಪಿಗೆ ಬ​ಹಿ​ರಂಗ ಸ​ವಾಲು ಹಾ​ಕು​ತ್ತೇವೆ: ರ​ಣ​ದೀಪ್‌ ಸುರ್ಜೇವಾಲ 

ಮಂಡ್ಯ(ಫೆ.22):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ರಾಜ್ಯಕ್ಕೆ ಅಪಖ್ಯಾತಿ ಬಂದೊದಗಿದೆ ಎಂದು ಎ​ಐ​ಸಿಸಿ ಪ್ರ​ಧಾನ ಕಾ​ರ‍್ಯ​ದರ್ಶಿ ರ​ಣ​ದೀಪ್‌ ಸುರ್ಜೇವಾಲ ಅ​ಸ​ಮಾ​ಧಾನ ವ್ಯ​ಕ್ತ​ಪ​ಡಿ​ಸಿ​ದರು. ಮು​ಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ ನೇ​ತೃ​ತ್ವದ ಬಿ​ಜೆಪಿ ಸರ್ಕಾರ ಭ್ರ​ಷ್ಟಾ​ಚಾ​ರದ ಹ​ಲವು ಮು​ಖ​ಗ​ಳನ್ನು ಹೊಂದಿದೆ ಇದು ರಾಜ್ಯಕ್ಕೆ ಕಳಂಕ ತರುವ ವಿಚಾರ ಎಂದು ಹೇಳಿದರು.

ರಾಜ್ಯದ ಉ​ನ್ನತ ಶಿ​ಕ್ಷಣ ಸ​ಚಿವ ಅ​ಶ್ವ​ತ್ಥ​ನಾ​ರಾ​ಯಣ, ಸಿ​ದ್ದ​ರಾ​ಮಯ್ಯ ಹ​ತ್ಯೆಗೆ ಪ್ರ​ಚೋ​ದನೆ ನೀ​ಡು​ತ್ತಾರೆ ಎಂದು ಹ​ರಿ​ಹಾ​ಯ್ದ ಅವರು, ಉ​ನ್ನತ ಶಿ​ಕ್ಷಣ ಸ​ಚಿ​ವರ ಪ್ರ​ಚೋದನೆ ಹಿಂದೆ ನ​ರೇಂದ್ರ​ ಮೋದಿ, ಜೆ.ಪಿ. ನಡ್ಡಾ ಹಾಗೂ ಬ​ಸ​ವ​ರಾಜ ಬೊ​ಮಾಯಿ ಬೆಂಬ​ಲ​ವಿದ್ದು, ಬಿ​ಜೆ​ಪಿಗೆ ಬ​ಹಿ​ರಂಗ ಸ​ವಾಲು ಹಾ​ಕು​ತ್ತೇವೆ. ಸ್ಥಳ ಹಾಗೂ ದಿ​ನಾಂಕ​ವನ್ನು ನಿ​ಗ​ದಿಪ​ಡಿ​ಸಿ​ದರೆ ಸಿ​ದ್ದರಾ​ಮಯ್ಯ ಮತ್ತು ಶಿ​ವ​ಕು​ಮಾರ್‌ ಅ​ವ​ರನ್ನು ಅವರ ಬಳಿಗೇ ಕ​ರೆ​ತ​ರು​ತ್ತೇವೆ. ಹತ್ಯೆ ಮಾ​ಡಲು ಸಿ​ದ್ಧ​ರಿ​ದ್ದೀರಾ? ಎಂದು ಪ್ರ​ಶ್ನಿ​ಸಿ​ದರು.

Latest Videos

MANDYA: ಕಸದ ರಾಶಿ ಪಕ್ಕದಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ: ಮಗು ವಶಕ್ಕೆ ಪಡೆದ ಮಕ್ಕಳ‌ ಕಲ್ಯಾಣ ಇಲಾಖೆ

ತುಟಿ ಬಿಚ್ಚದ ಪ್ರಧಾನಿ: 

ರಾ​ಜ್ಯದ ಬಿ​ಜೆಪಿ ಸರ್ಕಾರ 40 ಪರ್ಸೆಂಟ್‌ ಕ​ಮೀ​ಷನ್‌ ಸರ್ಕಾರ​ವೆಂದು ರಾಜ್ಯ ಗು​ತ್ತಿ​ಗೆ​ದಾ​ರರ ಸಂಘ ಹಾಗೂ ಖಾ​ಸಗಿ ಶಿ​ಕ್ಷಣ ಸಂಸ್ಥೆ​ಗಳ ಒಕ್ಕೂಟ ಪ್ರ​ಧಾನ ಮಂತ್ರಿಗೆ ಪತ್ರ ಬ​ರೆ​ದಿದೆ. ಈ ನ​ಡುವೆ ರಾ​ಜ್ಯಕ್ಕೆ ಎಂಟು ಬಾರಿ ಭೇಟಿ ನೀ​ಡಿ​ರುವ ಪ್ರ​ಧಾ​ನಿ​ಗಳು ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚದೆ ಮೌ​ನಕ್ಕೆ ಶ​ರ​ಣಾ​ಗಿ​ರು​ವುದು ದು​ರ​ದೃ​ಷ್ಟ​ಕರ ಎಂದು ಟೀ​ಕಿ​ಸಿ​ದರು.

click me!