'ಗುಜರಾತ್‌ ರೀತಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್‌: ಹಾಲಿ ಎಂಎಲ್‌ಎ, ಸಚಿವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ'

Published : Feb 22, 2023, 12:00 AM IST
'ಗುಜರಾತ್‌ ರೀತಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್‌: ಹಾಲಿ ಎಂಎಲ್‌ಎ, ಸಚಿವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ'

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಸ್ಪಷ್ಟವಾಗಿದೆ. ಹೀಗಾಗಿ ಟಿಕೆಟ್‌ ಕಾಂಕ್ಷಿಗಳೆಲ್ಲರ ಚಾರಿತ್ರ್ಯ, ಅವರ ನಡೆ- ನುಡಿಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ. ಕೈ, ಬಾಯಿ ಶುದ್ಧ ಇದ್ದವರಿಗೆ ಈ ಬಾರಿ ಹೆಚ್ಚಿನ ಆದ್ಯತೆ. ಹೀಗಾಗಿ ಈ ಮಾನದಂಡದಡಿಯಲ್ಲಿ ಹೊಂದದೆ ಇದ್ದವರು ಹಾಲಿ ಶಾಸಕರಾಗಿರಲೀ, ಸಚಿವರಾಗಿರಲಿ ಅಂತಹವರಿಗೆ ಟಿಕೆಟ್‌ ಕೈ ತಪ್ಪೋದು ನಿಶ್ಚಿತ ಎಂದು ಖಚಿತಪಡಿಸಿದ ಮಾಲೀಕಯ್ಯ ಗುತ್ತೇದಾರ್‌

ಕಲಬುರಗಿ(ಫೆ.22):  ರಾಜ್ಯದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದೆ. ಜನಪ್ರತಿನಿಧಿಗಳ ಚಾರಿತ್ರ್ಯ, ಜನರೊಂದಿಗಿನ ಸಂಬಂಧಗಳ ಬಗ್ಗೆ ಹೈಕಮಾಂಡ್‌ ಗಮನಿಸ್ತಾ ಇದೆ. ಗುಜರಾತ್‌ ಮಾದರಿಯಂತೆಯೇ ರಾಜ್ಯದಲ್ಲೂ ಟಿಕೆಟ್‌ ಹಂಚಿಕೆಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಸ್ಪಷ್ಟವಾಗಿದೆ. ಹೀಗಾಗಿ ಟಿಕೆಟ್‌ ಕಾಂಕ್ಷಿಗಳೆಲ್ಲರ ಚಾರಿತ್ರ್ಯ, ಅವರ ನಡೆ- ನುಡಿಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ. ಕೈ, ಬಾಯಿ ಶುದ್ಧ ಇದ್ದವರಿಗೆ ಈ ಬಾರಿ ಹೆಚ್ಚಿನ ಆದ್ಯತೆ. ಹೀಗಾಗಿ ಈ ಮಾನದಂಡದಡಿಯಲ್ಲಿ ಹೊಂದದೆ ಇದ್ದವರು ಹಾಲಿ ಶಾಸಕರಾಗಿರಲೀ, ಸಚಿವರಾಗಿರಲಿ ಅಂತಹವರಿಗೆ ಟಿಕೆಟ್‌ ಕೈ ತಪ್ಪೋದು ನಿಶ್ಚಿತ ಎಂದು ಖಚಿತಪಡಿಸಿದರು.

ಚುನಾ​ವಣೆಯಲ್ಲಿ ಸ್ಪರ್ಧೆಸಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್‌

ಜನನಾಯಕರಾದವರು ಜನರೊಂದಿಗೆ ಅನ್ಯೋನ್ಯ ಬಾಂಧವ್ಯ ಹೊಂದಿರಬೇಕು ಎಂಬುದು ಪಕ್ಷದ ನಾಯಕರ ಮುಖ್ಯ ಮಾನದಂಡ. ಹಾಲಿ ಇರುವ ಶಾಸಕರು, ಸಚಿವರು ಅದ್ಹೇಗೆ ಆಡಳಿತ ನೀಡಿದ್ದಾರೆ. ಜನರೊಂದಿಗೆ ಹೇಗಿದ್ದಾರೆ ಎಲ್ಲದರ ಮಾಹಿತಿ ಸಂಗ್ರಹ ಮಾಡಿಯೇ ಟಿಕೆಟ್‌ ಅಂತಿಮಗೊಳಿಸಲು ಹೈಕಮಾಂಡ್‌ ಮುಂದಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ