
ಘಟಪ್ರಭಾ[ಡಿ.02]: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಲುಕೊಡುವ ಗೋವಿನ ಹಾಗೆ, ಮುಖ್ಯಮಂತ್ರಿ ಯಡಿಯೂರಪ್ಪ ಕರ್ಣನ ಹಾಗೆ’
- ಇಂತಹ ಒಂದು ಹೋಲಿಕೆ ಕೊಟ್ಟದ್ದು ಅನರ್ಹ ಶಾಸಕ ಮುನಿರತ್ನ. ಘಟಪ್ರಭಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಮೇಶ್ ಯಾರಿಗೂ ಕೆಟ್ಟದ್ದು ಬಯಸದ ವ್ಯಕ್ತಿ. ಅವರನ್ನು ಹಾಲುಕೊಡುವ ಗೋವಿಗೆ ಹೋಲಿಸಬಹುದು. ಯಡಿಯೂರಪ್ಪ ಅವರನ್ನು ಕರ್ಣನಿಗೆ ಹೋಲಿಸಬಹುದು. ಮಾತು ಕೊಟ್ಟಿದ್ದನ್ನು ಉಳಿಸಿಕೊಳ್ಳುತ್ತಾ ಬಂದಿದ್ದಾರೆ ಎಂದು ಹೇಳಿದರು.
ನಮ್ಮ 17 ಮಂದಿಯಲ್ಲಿ ಅತಿ ಹೆಚ್ಚು ಮತ ಪಡೆಯೋದು ರಮೇಶ್. ರಮೇಶ ಮೋಸ ಮಾಡೋರಲ್ಲ. ರಾಜ್ಯದ ಉತ್ತಮ ಸಚಿವರಾಗ್ತಾರೆ. ಕ್ಷೇತ್ರಕ್ಕಷ್ಟೇ ಅಲ್ಲದೆ ರಾಜ್ಯಕ್ಕೂ ಅವರ ಸೇವೆ ಬೇಕಾಗಿದೆ ಎಂದರು. ಯಡಿಯೂರಪ್ಪ ಕರ್ಣನಿಗೆ ಸಮಾನ. ಒಮ್ಮೆ ಕೊಟ್ಟಮಾತನ್ನ ಯಡಿಯೂರಪ್ಪ ಉಳಿಸಿಕೊಳ್ತಾರೆ. ಯಡಿಯೂರಪ್ಪನ್ನ ನಂಬಬಹುದು ಅಂತ ಬಂದಿದ್ದೀವಿ. 17 ಮಂದಿಯಲ್ಲಿ ಯಾರೂ ದಡ್ಡರಿಲ್ಲ, ಒಬ್ಬರಿಗೊಬ್ಬರು ಜಾಣರಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.