ಲೋಕಸಭಾ ಚುನಾವಣೆ 2024: ಸೋತ ಕೇಂದ್ರ ಸಚಿವರ ಪೈಕಿ ರಾಜೀವ್‌ರದ್ದೇ ಅತಿ ಕನಿಷ್ಠ ಅಂತರ..!

Published : Jun 13, 2024, 07:59 AM ISTUpdated : Jun 13, 2024, 08:01 AM IST
ಲೋಕಸಭಾ ಚುನಾವಣೆ 2024: ಸೋತ ಕೇಂದ್ರ ಸಚಿವರ ಪೈಕಿ ರಾಜೀವ್‌ರದ್ದೇ ಅತಿ ಕನಿಷ್ಠ ಅಂತರ..!

ಸಾರಾಂಶ

ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ಗೆ ಭಾರೀ ಪೈಪೋಟಿ ನೀಡಿ ಕೇವಲ 16077 ಮತಗಳ ಅಂತರದಿಂದ ಸೋತ ರಾಜೀವ್‌ ಚಂದ್ರಶೇಖರ್‌ 

ನವದೆಹಲಿ(ಜೂ.13):   ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಸಚಿವ ಸಂಪುಟದಲ್ಲಿದ್ದ ಸುಮಾರು 20 ಸಚಿವರು ಸೋಲನ್ನಪ್ಪಿದ್ದರು. ಈ ಪೈಕಿ ಕೆಲವರು ಭಾರೀ ಮತಗಳ ಅಂತರದಿಂದ ಸೋತಿದ್ದರೆ, ಇನ್ನು ಕೆಲವರು ಅತ್ಯಂತ ತೀವ್ರ ಸ್ಪರ್ಧೆ ನೀಡಿ ವಿರೋಚಿತ ಸೋಲು ಕಂಡಿದ್ದಾರೆ. ಹೀಗೆ ಸೋತ ಸಚಿವರ ಮತಗಳ ಅಂತರವನ್ನು ನೋಡಿದರೆ, ಕೇರಳದ ತಿರುವನಂತಪುರ ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಸೋಲಿನ ಅಂತರ ಅತ್ಯಂತ ಕಡಿಮೆ.

ತಿರುವನಂತಪುರದಲ್ಲಿ ರಾಜೀವ್‌ ಅವರು, ಕಾಂಗ್ರೆಸ್‌ನ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ಗೆ ಭಾರೀ ಪೈಪೋಟಿ ನೀಡಿ ಕೇವಲ 16077 ಮತಗಳ ಅಂತರದಿಂದ ಸೋತಿದ್ದಾರೆ.

ಕನ್ನಡಿಗರ ಸೇವೆಗೆ ಅವಕಾಶ ಸಿಕ್ಕಿದ್ದು ಭಾಗ್ಯ: ರಾಜೀವ್‌ ಚಂದ್ರಶೇಖರ್‌ ವಿಶೇಷ ಸಂದರ್ಶನ

ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜೀವ್‌ ಅವರಿಗೆ ಈ ಬಾರಿ ಕಡೆಯ ಹಂತದಲ್ಲಿ ಕೇರಳದ ತಿರುವನಂತಪುರದ ಟಿಕೆಟ್‌ ನೀಡಲಾಗಿತ್ತು. ಪ್ರಚಾರಕ್ಕೆ ಸಿಕ್ಕಿದ್ದು ಕೇವಲ 35 ದಿನ. ಮತ್ತೊಂದೆಡೆ ಎದುರಾಳಿಯಾಗಿದ್ದು, ಇಂಡಿ ಕೂಟದ ಅಭ್ಯರ್ಥಿ, 3ನೇ ಸಲ ಲೋಕಸಭೆ ಪ್ರವೇಶಕ್ಕಾಗಿ ಕಣಕ್ಕೆ ಇಳಿದಿದ್ದ ತರೂರ್‌. ಈ ಎಲ್ಲಾ ಸವಾಲುಗಳ ಹೊರತಾಗಿಯೂ ಸಿಕ್ಕ ಅವಧಿಯಲ್ಲೇ ಇಡೀ ಕ್ಷೇತ್ರ ಸುತ್ತಾಡಿದ ರಾಜೀವ್‌ ಬಿಜೆಪಿ, ಮೋದಿ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿ ಹೊಸ ಅಲೆ ಕಾಣಿಸಿಕೊಂಡಿತ್ತು. ಅದರೆ ಅಂತಿಮವಾಗಿ ರಾಜೀವ್‌ ಕೇವಲ 16000 ಮತಗಳ ಅಂತರದಿಂದ ಸೋತರು. ಚುನಾವಣೆಯಲ್ಲಿ ರಾಜೀವ್‌ ನೀಡಿದ ಸ್ಪರ್ಧೆ ಎದುರಾಳಿಗಳಲ್ಲೂ ಅಚ್ಚರಿ ಹುಟ್ಟಿಸಿತ್ತು.

ಉಳಿದಂತೆ ಕೈಲಾಶ್‌ ಚೌಧರಿ 4.17 ಲಕ್ಷ, ಮುರುಗನ್‌ 2.4 ಲಕ್ಷ, ಸಚಿವೆ ಸ್ಮೃತಿ ಇರಾನಿ 1.67 ಲಕ್ಷ, ಅರ್ಜುನ್‌ ಮುಂಡಾ 1.49 ಲಕ್ಷ, ರಾವ್‌ ಸಾಹೇಬ್‌ ಧನ್ವೆ 1.09 ಲಕ್ಷ, ಭಗವಂತ್ ಖೂಬಾ 1.28 ಲಕ್ಷ, ಭಾರತೀ ಪವಾರ್‌ 1.13 ಲಕ್ಷ, ಅಜಯ್‌ ಕುಮಾರ್‌ ಮಿಶ್ರಾ 34329 ಅಂತರದಲ್ಲಿ ಸೋತ ಪ್ರಮುಖ ಸಚಿವರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ