
ಚಿಕ್ಕಬಳ್ಳಾಪುರ,[ಡಿ.01]: ಒಂದು ಕಡೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಮೆಲೆ ಹಲ್ಲೆಗೆ ಸಂಚು ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ತನ್ವೀರ್ ಸೇಠ್ ಮರ್ಡರ್ ಯತ್ನ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪಾಷಾ!
ಈ ಬಗ್ಗೆ ಸ್ವತಃ ಡಾ.ಕೆ. ಸುಧಾಕರ್ ಅವರೇ ಮಾಹಿತಿ ನೀಡಿದ್ದಾರೆ. ನನ್ನ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆದಿದೆ. ನಮ್ಮ ಪಕ್ಷದ ಮುಖಂಡರಾದ ಚಕ್ರಪಾಣಿಯವರು ಹೇಳಿದ್ರು ಎಂದು ತಿಳಿಸಿದರು.
ನಿನ್ನೆ [ಶನಿವಾರ] ರಾತ್ರಿ ಕೂಡಾ ಹಲ್ಲೆಗೆ ಸಂಚು ಮಾಡಿದ್ರಂತೆ. ಇದರ ಬಗ್ಗೆ ಐಜಿ, ಡಿಐಜಿ ಜೊತೆ ಮಾತಾಡ್ತೇನೆ. ದೈಹಿಕ ಹಲ್ಲೆ ಬಾಲಿಶತನದ್ದು, ಅಮಾನವೀಯ. ದ್ವೇಷ, ಹಲ್ಲೆ ಮನುಷ್ಯನ ಲಕ್ಷಣ ಅಲ್ಲ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರತಿಷ್ಠೆಯ ಕಣವಾದ ಚಿಕ್ಕಬಳ್ಳಾಪುರ ಉಪಚುನಾವಣೆ
ಹಲ್ಲೆ ಸಂಚು ಯಾರು ಮಾಡ್ತಿರೋದು ಅಂತ ಈಗ ಬೇಡ. ಇವತ್ತು ಇದರ ಬಗ್ಗೆ ಚರ್ಚಿಸಿ ದೂರು ಕೊಡ್ತೇವೆ. ಗೃಹ ಇಲಾಖೆ ತನಿಖೆ ಮಾಡಲಿದ್ದು, ತನಿಖೆ ಬಳಿಕ ಯಾರು ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಿ ಅನರ್ಹರಾಗಿದ್ದು, ಇದೀಗ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ಡಿಸೆಂಬರ್ 5ಕ್ಕೆ ಮತನಾದನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.