ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ

Published : Aug 20, 2024, 11:09 PM IST
ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ

ಸಾರಾಂಶ

ಭಾರತದ ನೆಲದಲ್ಲಿ ನಿಂತು ಹೀಗೆ ಮಾತನಾಡೋದಕ್ಕೆ ನಾಚಿಕೆ ಆಗೊಲ್ವ? ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಅರಕಲಗೂಡು ಶಾಸಕ ಎ ಮಂಜು ಹಿಗ್ಗಾಮುಗ್ಗಾ ಜಾಡಿಸಿದರು.

ಕೊಡಗು (ಆ.20): ಭಾರತದ ನೆಲದಲ್ಲಿ ನಿಂತು ಹೀಗೆ ಮಾತನಾಡೋದಕ್ಕೆ ನಾಚಿಕೆ ಆಗೊಲ್ವ? ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಅರಕಲಗೂಡು ಶಾಸಕ ಎ ಮಂಜು ಹಿಗ್ಗಾಮುಗ್ಗಾ ಜಾಡಿಸಿದರು.

ವೈಯಕ್ತಿಕ ಕಾರಣದಿಂದ ಕುಶಾಲನಗರಕ್ಕೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ ರಾಜ್ಯಪಾಲರಿಗೆ ಬಾಂಗ್ಲಾದೇಶದ ಪ್ರಧಾನಿಗೆ ಬಂದ ಗತಿ ಬರುತ್ತದೆ ಎಂಬ ಐವನ್ ಡಿಸೋಜಾರ ಪ್ರಚೋದನಕಾರಿ ಹೇಳಿಕೆಗೆ ತಿರುಗೇಟು ನೀಡಿದ ಅವರು,  ನಮ್ಮ ದೇಶವನ್ನು ಬಾಂಗ್ಲಾದೇಶಕ್ಕೆ ಹೋಲಿಸಿಕೊಂಡು ಮಾತನಾಡುವುದಾದರೆ ಅವನು ಇಲ್ಲಿರುವುದಕ್ಕೆ ನಾಲಾಯಕ್. ಇಂತಹ ಹೇಳಿಕೆ ನೀಡುವವನು ಬೇರೆ ದೇಶಕ್ಕೆ ಹೋಗಲಿ. ಈ ದೇಶದ ಅನ್ನ ನೀರು ತಿಂದು ದೇಶದ ವಿರುದ್ಧವಾಗಿ ಮಾತನಾಡುತ್ತಾನೆಂದರೆ ನಾಚಿಕೆ ಆಗಬೇಕು ಅವನಿಗೆ ಎಂದು ಏಕವಚನದಲ್ಲಿ ಹರಿಹಾಯ್ದರು.

ಫ್ರೀ ಫ್ರೀ ಫ್ರೀ ಯಾರಿಗೆ ಬೇಕು ಫ್ರೀ... ಮಳೆಗೆ ಸೋರುತ್ತಿರುವ ಪೀಣ್ಯ ಫ್ಲೈಓವರ್ ಅಧ್ವಾನ ನೋಡಿ ಪುನೀತ್ ಕೆರೆಹಳ್ಳಿ ವ್ಯಂಗ್ಯ!

ಈ ರೀತಿ ದೇಶದ ವಿರುದ್ಧ ಮಾತನಾಡಿದರೆ ಮುಂದೆ ಅವರಿಗೇ ವಿರುದ್ಧವಾಗುತ್ತೆ ಅನ್ನೋದು ನೆನಪಿರಲಿ. ಎಂಎಲ್ಸಿ ಆಗಿ ನಿಮಗೆ ರಕ್ಷಣೆ ಇರಬಹುದು. ಆದರೆ ನಿಮ್ಮ ಮನೆಯವರಿಗೆ ಅಣ್ಣ ತಮ್ಮಂದಿರಿಗೆ ರಕ್ಷಣೆ ಇರಬೇಕಲ್ವಾ? ಎಂಎಲ್ಸಿ ಸ್ಥಾನ ಬಿಟ್ಟು ನೀವು ಹೊರಗೆ ಓಡಾಡಿ. ಆಗ ಜನ ಒಡಾಡಿಸಿಕೊಂಡು ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ