ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿ​ವ ರಾಮ​ಲಿಂಗಾ​ರೆಡ್ಡಿ

Published : Aug 06, 2023, 05:33 PM IST
ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿ​ವ ರಾಮ​ಲಿಂಗಾ​ರೆಡ್ಡಿ

ಸಾರಾಂಶ

ನಮ್ಮ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಯಾವ ​ದಂಧೆ​ಯಾ​ಗಲಿ, ಭ್ರಷ್ಟಾ​ಚಾ​ರವಾಗಲಿ ನಡೆ​ಯು​ತ್ತಿಲ್ಲ. ವಿರೋಧ ಪಕ್ಷ​ದ​ಲ್ಲಿ​ರುವ ಕಾರ​ಣಕ್ಕೆ ಕೆಲ​ವರು ಸುಳ್ಳು ಆರೋ​ಪ ಮಾಡಿಕೊಂಡು ಕಾಲ ದೂಡು​ತ್ತಿ​ದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿಯವರ ವೈಎಸ್‌ಟಿ ಟ್ಯಾಕ್ಸ್‌ ಆರೋ​ಪಕ್ಕೆ ಸಾರಿಗೆ ಸಚಿ​ವ ರಾಮ​ಲಿಂಗಾ​ರೆಡ್ಡಿ ತಿರು​ಗೇಟು ನೀಡಿ​ದ​ರು.   

ರಾಮ​ನ​ಗರ (ಆ.06): ನಮ್ಮ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಯಾವ ​ದಂಧೆ​ಯಾ​ಗಲಿ, ಭ್ರಷ್ಟಾ​ಚಾ​ರವಾಗಲಿ ನಡೆ​ಯು​ತ್ತಿಲ್ಲ. ವಿರೋಧ ಪಕ್ಷ​ದ​ಲ್ಲಿ​ರುವ ಕಾರ​ಣಕ್ಕೆ ಕೆಲ​ವರು ಸುಳ್ಳು ಆರೋ​ಪ ಮಾಡಿಕೊಂಡು ಕಾಲ ದೂಡು​ತ್ತಿ​ದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿಯವರ ವೈಎಸ್‌ಟಿ ಟ್ಯಾಕ್ಸ್‌ ಆರೋ​ಪಕ್ಕೆ ಸಾರಿಗೆ ಸಚಿ​ವ ರಾಮ​ಲಿಂಗಾ​ರೆಡ್ಡಿ ತಿರು​ಗೇಟು ನೀಡಿ​ದ​ರು. ನಗ​ರದ ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಸಭಾಂಗ​ಣ​ದಲ್ಲಿ ಜಿಲ್ಲಾ ಮಟ್ಟದ ಅಧಿ​ಕಾ​ರಿ​ಗಳ ಸಭೆಗೂ ಮುನ್ನ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಪಕ್ಷ ರಾಜ್ಯ​ದಲ್ಲಿ ಸ್ವಚ್ಛ ಆಡ​ಳಿತ ನೀಡು​ತ್ತಿದೆ. ಇದನ್ನು ಸಹಿ​ಸ​ದ​ ವಿಪ​ಕ್ಷ​ಗಳು ಆರೋ​ಪ​ಗ​ಳಲ್ಲಿ ತೊಡ​ಗಿವೆ. 

ಈಗ ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರೋಧ ಪಕ್ಷ​ದಲ್ಲಿದ್ದಾರೆ. ಅದ​ಕ್ಕಾಗಿ ಅವರು ರಾಜ್ಯ​ದಲ್ಲಿ ವೈಎಸ್‌ಟಿ ಟ್ಯಾಕ್ಸ್‌ ಅಂತೆಲ್ಲ ಆರೋಪ ಮಾಡು​ತ್ತಿ​ದ್ದಾರೆ. ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾ​ಚಾ​ರವೂ ಇಲ್ಲ. ನಮ್ಮದು ಸ್ವಚ್ಛ ಆಡ​ಳಿತ ಎಂದು ಹೇಳಿ​ದ​ರು. ಪೊಲೀಸ್‌ ಹಾಗೂ ಸಾರಿಗೆ ಇಲಾಖೆಯಲ್ಲಿ ವೇತನ ಪಾವತಿ ವಿಚಾ​ರ​ವಾಗಿ ಕೇಳಿದ ಪ್ರಶ್ನೆಗೆ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ 1ನೇ ತಾರೀಖು ಸಂಬಳ ನೀಡಲಾಗುತ್ತದೆ. ಬಿಎಂಟಿಸಿಯಲ್ಲಿ 7ನೇ ತಾರೀಖು, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗದಿ ಮಾಡಲಾಗಿದೆ. 

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

ಎಲ್ಲಾ ಇಲಾಖೆಗಳಲ್ಲೂ ಈ ರೀತಿಯಾಗಿ ವೇತನ ಪಾವತಿ ಮಾಡು​ತ್ತಾರೆ. ಆದರೆ, ಇದ​ರ​ಲ್ಲಿಯೂ ಕೆಲ​ವರು ರಾಜ​ಕೀಯ ಮಾಡು​ತ್ತಿ​ದ್ದಾರೆ. ಮಾಜಿ ಸಿಎಂ ಬಸ​ವ​ರಾಜ ಬೊಮ್ಮಾಯಿ ನಮ್ಮ ಸಾರಿಗೆ ಇಲಾಖೆ ಕುರಿತು ಟ್ವೀಚ್‌ ಮಾಡಿ ಅರ್ಧ ಸಂಬಳ ಅಂತ ಆರೋಪ ಮಾಡಿದ್ದರು. ಪೂರ್ಣ ಮಾಹಿತಿ ಇಲ್ಲದೆ ಈ ರೀತಿಯ ಹೇಳಿಕೆ ನೀಡಬಾರದು. ಇದು ಅವ​ರಿಗೆ ಶೋಭೆ ತರು​ವು​ದಿಲ್ಲ ಎಂದು ಹೇಳಿದರು. ಬಸ​ವ​ರಾಜ ಬೊಮ್ಮಾಯಿ ಮುಖ್ಯ​ಮಂತ್ರಿ​ಯಾಗಿ ಆಡ​ಳಿತ ನಡೆ​ಸಿ​ದವರು. ಅವರ ಅವಧಿಯಲ್ಲಿ ಯಾವ ರೀತಿ ಸಮಸ್ಯೆ ಆಗಿತ್ತು ಅಂತ ಎಲ್ಲರಿಗೂ ಗೊತ್ತು. ಈಗ ನಮಗೆ ನೀತಿ ಪಾಠ ಹೇಳಿ​ಕೊ​ಡಲು ಬರು​ತ್ತಿ​ದ್ದಾರೆ ಎಂದು ಬಿಜೆಪಿ ನಾಯ​ಕ​ರಿಗೆ ಟಾಂಗ್‌ ನೀಡಿ​ದರು. 

ಡಿಸಿಎಂ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ ಖಂಡಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ಥೆ!

ಶಾಸಕರು ಹಾಗೂ ಸಚಿವರ ನಡುವೆ ಸಣ್ಣಪುಟ್ಟ ಅಸಮಾಧಾನ ಇದ್ದೆ ಇರು​ತ್ತದೆ. ಇಲ್ಲ ಅಂತ ಏನಿಲ್ಲ. ಆದರೆ, ಎಲ್ಲವನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ ಎಂದು ರಾಮ​ಲಿಂಗಾ​ರೆಡ್ಡಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು. ಲೋಕಸಭಾ ಚುನಾವಣೆ ವಿಚಾರವಾಗಿ ಹೈಕಮಾಂಡ್‌ ಎಲ್ಲ​ರಿಗೂ ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಕುರಿತು ಹೈಕಮಾಂಡ್‌ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಿ​ದರು. ಶಾಸಕ ಇಕ್ಬಾಲ್‌ ಹುಸೇನ್‌, ಮಾಜಿ ಶಾಸಕ ಕೆ.ರಾಜು, ನಗ​ರ​ಸಭೆ ಪ್ರಭಾರ ಅಧ್ಯಕ್ಷ ಸೋಮ​ಶೇ​ಖರ್‌(ಮ​ಣಿ) ಮತ್ತಿ​ತ​ರರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ