
ಮಂಡ್ಯ (ಏ.3) : ನಾರಾಯಣಗೌಡರನ್ನ ಜೆಡಿಎಸ್ ಎರಡು ಬಾರಿ ಶಾಸಕರನ್ನಾಗಿ ಮಾಡಿತ್ತು. ಆದರೂ 2-3 ವರ್ಷದ ದರಿದ್ರ ಅಧಿಕಾರಕ್ಕೋಸ್ಕರ ಬಿಜೆಪಿಗೆ ಹೋದ್ರು. ಸಚಿವ ನಾರಾಯಣಗೌಡ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ(MLA Ravindra Srikantaiaht) ವಾಗ್ದಾಳಿ ನಡೆಸಿದರು.
ಜೆಡಿಎಸ್ನಿಂದ ಅನ್ಯಾಯವಾಗಿದೆ ಎಂಬ ಸಚಿವ ನಾರಾಯಣಗೌಡರ ಹೇಳಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದರು
ಜೆಡಿಎಸ್ ಪಕ್ಷದಿಂದ ಅಧಿಕಾರ ಅನುಭವಿಸಿ ಈಗ ಜೆಡಿಎಸ್ ನಿಂದ ಅನ್ಯಾಯವಾಗಿದೆ ಅಂತಾ ಹೇಳಿಕೆ ನೀಡ್ತಿರಲ್ಲ, ಪಕ್ಷ ದ್ರೋಹ ಮಾಡಿರುವ ನಿಮಗೆ ಜನ ವೋಟ್ ಕೊಡ್ತಾರೇನ್ರಿ? ಎಂದು ಕಿಡಿ ಕಾರಿದರು.
ಏನಪ್ಪ ನಿನಗೆ ದೇವೇಗೌಡರ ಕುಟುಂಬ ಅನ್ಯಾಯ ಮಾಡಿದ್ದು? ನಿನಗೆ ವಿರೋಧ ಇದ್ದರೂ ಟಿಕೆಟ್ ಕೊಡಲಿಲ್ಲವಾ? ಎರಡು ಬಾರಿ ಎಂಎಲ್ಎ ಮಾಡಿರಲಿಲ್ವ. ಕುಮಾರಣ್ಣ(HD kumaraswamy)ನ ಬಗ್ಗೆ ಮಾತನಾಡ್ತಿಯಲ್ಲ ನಿನಗೆ ನಾಚಿಕೆ ಆಗಲ್ವ. ನನ್ನ ಪ್ರಕಾರ ನಾರಾಯಣಗೌಡನಿಗೆ ಈ ಬಾರಿ ಠೇವಣಿ ಸಿಗಲ್ಲ. ಹಳ್ಳಿ ಮೇಲೆ ಹೋಗಿ ವೋಟ್ ಕೇಳೊಕೆ ಆಗಲ್ಲ. ಮೋಸ ಮಾಡಿಕೊಂಡೆ ಕಾಲಕಾಳೆದಿದ್ದು ಇದರಿಂದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಮತ ಕೇಳಲು ಹೋಗಲಿ ಅದರ ಪರಿಣಾಮ ಗೊತ್ತಾಗುತ್ತದೆ ಎಂದರು.
ಇವರಿಗಿಂತ ಮೊದಲೇ ನನಗೆ ಅವಕಾಶ ಬಂದಿತ್ತು. ಈ ರಾಜ್ಯದ ದೊಡ್ಡ ನಾಯಕರುಗಳೇ ನನ್ನನ್ನ ಬಿಜೆಪಿಗೆ ಬರುವಂತೆ ಕರೆದು ಮಾತನಾಡಿದ್ರು. ಮಂತ್ರಿ ಮಾಡ್ತೀವಿ, ಜಿಲ್ಲಾ ಉಸ್ತುವಾರಿ ಕೊಡ್ತೀವಿ ಒಪ್ಪಿಕೊಳ್ಳಿ ಅಂದ್ರು. ಆದ್ರೆ ನಾನು ನಮ್ಮ ಕುಟುಂಬದಲ್ಲಿ ಇದೆಲ್ಲ ನಡೆದು ಬಂದಿಲ್ಲ. ಜೆಡಿಎಸ್ ಪಕ್ಷಕ್ಕೆ ಬಂದಾಗಲು ಗುರು ಹಿರಿಯರ ವಿಶ್ವಾಸ ತೆಗೆದುಕೊಂಡು ಬಂದಿದ್ದೀನಿ. ನನ್ನದು ಆ ತರಹದ ಸಂಸ್ಕಾರ ಅಲ್ಲ ಎಂದು ಆಫರ್ ಮುರಿದುಹಾಕಿದ್ದೆ. ಆದ್ರೆ ನೀವು ಸಿಕ್ಕಿದ್ದನ್ನ ಬಾಚಿಕೊಂಡು ಮಂತ್ರಿ ಆಗ್ಬಿಟ್ಟು ಈಗ ಕುಮಾರಣ್ಣ ಅನ್ಯಾಯ ಮಾಡಿದ ಅಂತಾ ಮಾತಾಡ್ತಿರಲ್ಲ;
ಇದನ್ನ ಜೆಡಿಎಸ್ ಕಾರ್ಯಕರ್ತರು, ಶಾಸಕರು ಸಹಿಸಿಕೊಳ್ಳಲ್ಲ ಎಂದು ಹಾರಿಹಾಯ್ದರು.
ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ಯೋಗ್ಯತೆ ನಾರಾಯಣಗೌಡಗೆ ಇಲ್ಲ. ನಾರಾಯಣಗೌಡರೇ ಕುಮಾರಸ್ವಾಮಿಯವರಿಗೆ ಮೋಸ ಮಾಡಿದ್ದು. ಸುಖಾಸುಮ್ಮನೆ ಆರೋಪ ಮಾಡಿದರೆ ನಾವು ಸಹಿಸಲ್ಲ ನಾರಾಯಣಗೌಡಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಖಡಕ್ ಎಚ್ಚರಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.