10 ಶಾಸಕರ ಸಸ್ಪೆಂಡ್‌ ಮಾಡಿದ ಸ್ಪೀಕರ್‌ ಕ್ಷಮೆ ಕೇಳಲಿ: ಈಶ್ವರಪ್ಪ

Published : Jul 24, 2023, 12:00 AM IST
10 ಶಾಸಕರ ಸಸ್ಪೆಂಡ್‌ ಮಾಡಿದ ಸ್ಪೀಕರ್‌ ಕ್ಷಮೆ ಕೇಳಲಿ: ಈಶ್ವರಪ್ಪ

ಸಾರಾಂಶ

ಅಧಿವೇಶನದಲ್ಲಿ ದಾದಾಗಿರಿ ನಡೆಸಿದ ಕಾಂಗ್ರೆಸ್‌ ಸರ್ಕಾರವು ಪ್ರತಿಭಟನಾನಿರತ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ: ಈಶ್ವರಪ್ಪ

ಹೂವಿನಹಡಗಲಿ(ಜು.24): ವಿಧಾನಸಭೆಯ ಅಧಿವೇಶನದಲ್ಲಿ 10 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್‌ ಕೂಡಲೇ ಕ್ಷಮೆ ಕೇಳಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ದಾದಾಗಿರಿ ನಡೆಸಿದ ಕಾಂಗ್ರೆಸ್‌ ಸರ್ಕಾರವು ಪ್ರತಿಭಟನಾನಿರತ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನಕ್ಕೆ ಮಾಡಿರುವ ಅಪ ಚಾರವಾಗಿದ್ದು, ಈ ಹಿಂದೆ ಸ್ಪೀಕರ್‌ ಆಗಿದ್ದ ಭೋಜಗೌಡ ಅವರನ್ನು ಸ್ಪೀಕರ್‌ ಆಸನದಿಂದಲೇ ಎಳೆದಾಡಿದ್ದು ಇದೇ ಕಾಂಗ್ರೆಸ್‌ನವರು. ಇದೀಗ ಬಿಜೆಪಿಯವರಿಗೆ ಸಂವಿಧಾನದ ಪಾಠ ಹೇಳಲು ಬರುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು. 

ಗೃಹಜ್ಯೋತಿ, ಗೃಹಲಕ್ಷ್ಮಿಯಿಂದ ಬಡವರಿಗೆ ಸಹಾಯ: ಸಚಿವ ನಾಗೇಂದ್ರ

ಸ್ಪೀಕರ್‌ ಆದವರು ನೂತನ ಶಾಸಕರಿಗೆ ತರಬೇತಿ ನೀಡುತ್ತಾರೆ. ಅದರ ಬದಲಿಗೆ ಈ ಸ್ಪೀಕರ್‌ ಖಾದರ್‌ ತಾವೇ ತರಬೇತಿ ಪಡೆಯುವುದು ಅಗತ್ಯವಿದೆ. ಈಗ ಕಾಂಗ್ರೆಸ್‌ನವರು ರುದ್ರಪ್ಪ ಲಮಾಣಿ ಅವರನ್ನು ಉಪ ಸ್ಪೀಕರ್‌ ಮಾಡಿದ್ದಾರೆ. ಆ ಮೂಲಕ ದಲಿತ ಅಸ್ತ್ರ ಬಳಕೆ ಮಾಡುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ