ನಾಯ​ಕ​ತ್ವ ಬದ​ಲು, ಹೊಸ ಮುಖ​ಕ್ಕೆ ಮಣೆ: ಸಂತೋಷ್‌ ಹೇಳಿಕೆ ಸಂಚಲನ

Published : May 02, 2022, 05:01 AM IST
ನಾಯ​ಕ​ತ್ವ ಬದ​ಲು, ಹೊಸ ಮುಖ​ಕ್ಕೆ ಮಣೆ: ಸಂತೋಷ್‌ ಹೇಳಿಕೆ ಸಂಚಲನ

ಸಾರಾಂಶ

* ಗುಜರಾತ್‌ ಸಿಎಂನೇ ಬದಲಿಸಿದ್ದೇವೆ * ಪಾಲಿಕೆಗಳಲ್ಲಿ ಹೊಸಬರನ್ನು ಗೆಲ್ಲಿಸಿದ್ದೇವೆ: ಬಿಜೆಪಿಗ * ಇದು ರಾಜ್ಯದಲ್ಲಿ ಸಿಎಂ ಬದಲಾವಣೆ ಸಂದೇಶ: ಸಿದ್ದು * ಅಪಾರ್ಥ ಕಲ್ಪಿಸಬೇಡಿ: ಸಿ.ಟಿ.ರವಿ * ಬೊಮ್ಮಾಯಿ ಬದಲಿಸಲು ಆರೆಸ್ಸೆಸ್‌ನಿಂದ ಯತ್ನ

ಮೈಸೂರು(ಮೇ.02): ‘ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಸಂಪುಟವನ್ನೇ ಪುನಾರಚನೆ ಮಾಡಿದ್ದೇವೆ. ಗುಜರಾತ್‌, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ್ದರಿಂದ ಗೆದ್ದಿದ್ದೇವೆ. ಬಿಜೆಪಿಯಲ್ಲಿ ಇಂತಹ ಪ್ರಯೋಗಗಳು ಯಶಸ್ವಿಯಾಗಿವೆ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ನೀಡಿದ ಹೇಳಿ​ಕೆ ರಾಜ್ಯ​ದ​ಲ್ಲಿ ತೀವ್ರ ಸಂಚ​ಲನ ಮೂಡಿ​ಸಿದೆ. ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಪಕ್ಷದ ರಾಷ್ಟ್ರೀಯ ಮುಖಂಡ​ರೊಬ್ಬರು ನೀಡಿದ ಈ ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಸಂತೋ​ಷ್‌ ಹೇಳಿ​ಕೆಯನ್ನು ಸ್ವಾಗ​ತಿ​ಸಿ​ರುವ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ‘ಅವರು ಹೇಳಿದ್ದು ಸರಿ​ಯಾ​ಗಿಯೇ ಇದೆ. ಪಾಲಿಕೆ ಚುನಾ​ವ​ಣೆ​ ಕೇಂದ್ರಿ​ತವಾಗಿ ಆ ಹೇಳಿಕೆ ನೀಡಿ​ದ್ದಾ​ರೆ’ ಎಂದು ಸ್ಪಷ್ಟನೆ ನೀಡಿದರೆ, ಇದು ಸಾರ್ವ​ತ್ರಿಕ ಹೇಳಿಕೆ, ಯಾರೂ ಅಪಾರ್ಥ ಕಲ್ಪಿ​ಸೋದು ಬೇಡ ಎಂದು ಬಿಜೆಪಿ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರೆಸ್ಸೆ​ಸ್‌​ನ​ವರು ಬದ​ಲಾ​ಯಿ​ಸ​ಲು ಹೊರಟಿದ್ದಾರೆ ಎಂದು ಸಂತೋಷ್‌ ಅವ​ರ ಹೇಳಿ​ಕೆ​ಯನ್ನು ಮುಂದಿ​ಟ್ಟು​ಕೊಂಡು ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ವಿಶ್ಲೇ​ಷ​ಣೆ ಮಾಡಿ​ದ್ದಾ​ರೆ.

ಸಂತೋಷ್‌ ಹೇಳಿ​ದ್ದೇ​ನು?:

ಮೈಸೂ​ರಿನ ರಿಯೋ ಮೆರೀಡಿಯನ್‌ ಹೋಟೆಲ್‌ ಸಭಾಂಗಣದಲ್ಲಿ ಶನಿ​ವಾರ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಎಲ್‌. ಸಂತೋಷ್‌ ಅವರು, ದೆಹಲಿ, ಗುಜರಾತ್‌ ನಗರಪಾಲಿಕೆ ಚುನಾ​ವ​ಣೆ​ಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇ​ವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿ​ದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್‌ ನೀಡಲಿಲ್ಲ. ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದರು. ಅಲ್ಲದೆ, ಗುಜ​ರಾ​ತ್‌​ನಲ್ಲಿ ಮುಖ್ಯ​ಮಂತ್ರಿ ಸೇರಿ ಇಡೀ ಕ್ಯಾಬಿ​ನೆಟ್‌ ಅನ್ನೇ ಪುನರ್‌ ರಚಿ​ಸಿ​ದ್ದೆವು ಎಂದು ತಿಳಿ​ಸಿ​ದ್ದ​ರು.

ಸಾರ್ವ​ತ್ರಿ​ಕ​ವಾಗಿ ಹೇಳಿ​ದ್ದಾ​ರೆ​-ಸಿ.ಟಿ.​ರ​ವಿ:

ಬಿ.ಎಲ್‌. ಸಂತೋಷ್‌ ಅವರ ಹೇಳಿಕೆ ಬಗ್ಗೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಅವರು ನಿರ್ದಿ​ಷ್ಟ​ವಾದ ಕ್ಷೇತ್ರ​ವನ್ನು ಉದ್ದೇ​ಶಿಸಿ ಹೇಳಿಲ್ಲ, ಸಾರ್ವ​ತ್ರಿ​ಕ​ವಾಗಿ ಹೇಳಿ​ದ್ದಾರೆ ಎಂದಿ​ರುವ ಬಿಜೆಪಿ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಅವ​ರು, ನಮ್ಮ ಪಕ್ಷ ನಿಂತ ನೀರಲ್ಲ, ಹೊಸ ಪ್ರಯೋಗಗಳಿಗೆ ಒಡ್ಡಿ​ಕೊ​ಳ್ಳು​ತ್ತಲೇ ಇರು​ತ್ತೇವೆ ಎಂದೂ ತಿಳಿ​ಸಿ​ದ್ದಾ​ರೆ.

ನಾವು ಪ್ರಯೋಗಶೀಲ​ತೆಗೆ ಹೆಚ್ಚಿನ ಒತ್ತು ನೀಡು​ತ್ತೇವೆ, ಯಾವ ಕ್ಷೇತ್ರ​ದಲ್ಲಿ ಹಳ​ಬರು ಗೆಲ್ಲುವ ಸಾಧ್ಯತೆ ಕಡಿಮೆ ಇರು​ತ್ತ​ದೆಯೋ ಅಲ್ಲಿ ಬದ​ಲಾ​ವ​ಣೆ ಆಗ​ಲಿದೆ. ಹಾಗಂತ ಎಲ್ಲ​ರನ್ನು ಬದ​ಲಾ​ಯಿಸಿ ಬಿಡು​ತ್ತೇವೆ ಎಂದಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ.

ಸಂತೋಷ್‌ ಅವರ ಹೇಳಿ​ಕೆ​ಯಿಂದ ಪಕ್ಷ​ದಲ್ಲಿ ಲಾಬಿ ಮಾಡು​ವ ಅನೇ​ಕ​ರಿಗೆ ಆತಂಕ ಶುರು​ವಾ​ಗಿದೆ ಎಂದು ಶಾಸಕ ಬಸ​ವ​ನ​ಗೌಡ ಪಾಟೀಲ ಯತ್ನಾಳ್‌ ಹೇಳಿ​ದರೆ, ಕುಟುಂಬ ರಾಜ​ಕಾ​ರಣ ಇಲ್ಲ. ಸಂತೋಷ್‌ ಅವರು ಹೇಳಿ​ದಂತೆ ರಾಜ್ಯ​ದಲ್ಲಿ ಈಗಾ​ಗಲೇ ನಾಯ​ಕತ್ವ ಬದ​ಲಾ​ವಣೆ ಮಾಡಲಾ​ಗಿದೆ ಎಂದು ಸಂಸದ ಸಿದ್ದೇ​ಶ್ವರ್‌ ತಿಳಿ​ಸಿ​ದ್ದಾ​ರೆ.

ಸಿಎಂ ಬದ​ಲಾ​ವ​ಣೆ-ಸಿದ್ದು:

ಸಂತೋಷ್‌ ಅವರ ಹೇಳಿ​ಕೆ​ ರಾಜ್ಯ​ದಲ್ಲಿ ಮುಖ್ಯ​ಮಂತ್ರಿ ಬದ​ಲಾ​ವಣೆ ಆಗ​ಲಿ​ರುವ ಸಂದೇಶ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ವಿಶ್ಲೇ​ಷಿ​ಸಿ​ದ್ದಾ​ರೆ. ಮುಖ್ಯಮಂತ್ರಿ ಬೊಮ್ಮಾಯಿ ಆರ್‌ಎಸ್‌ಎಸ್‌ನವರÜಲ್ಲ, ಜನತಾ ಪರಿ​ವಾ​ರ​ದಿಂದ ಬಂದ​ವರು. ಹೀಗಾಗಿ, ಆರೆ​ಸ್ಸೆ​ಸ್‌​ನ​ವ​ರು ಅವ​ರನ್ನು ಬದಲಾಯಿಸಲು ಹೊರಟಿದ್ದಾರೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ. ನಮ್ಮ ಜತೆ​ಗಿ​ದ್ದರೂ ಬೊಮ್ಮಾಯಿ ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ತಿಳಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್