4 ಅತೃಪ್ತ ಶಾಸಕರನ್ನ ಕರೆತರಲು 40 ಜನರ ಪೊಲೀಸ್ ತಂಡ ಮುಂಬೈಗೆ

Published : Feb 11, 2019, 08:11 PM ISTUpdated : Feb 11, 2019, 08:19 PM IST
4 ಅತೃಪ್ತ ಶಾಸಕರನ್ನ ಕರೆತರಲು 40 ಜನರ ಪೊಲೀಸ್ ತಂಡ ಮುಂಬೈಗೆ

ಸಾರಾಂಶ

ನಾಲ್ವರು ಅತೃಪ್ತ ಶಾಸಕರನ್ನ ಕರೆತರಲು ರಾಜ್ಯದ 40 ಜನರ ಪೊಲೀಸ್ ತಂಡ ಮುಂಬೈಗೆ! ಸ್ಪೀಕರ್ ಸೂಚನೆ ಮೇರೆಗೆ ನಾಪತ್ತೆಯಾಗಿರುವ ನಾಲ್ವರು ಶಾಸಕರನ್ನು ಹುಡುಕಲು ರಾಜ್ಯದಿಂದ ಪೊಲೀಸ್ ರವಾನೆ!

ಬೆಂಗಳೂರು, [ಫೆ.11]: ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ಕು ಅತೃಪ್ತ ಶಾಸಕರನ್ನ ಹುಡುಕಲು ರಾಜ್ಯದ 40 ಜನರ ಪೊಲೀಸ್ ತಂಡ ಮುಂಬೈಗೆ ತೆರಳಿದೆ.

ನಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದು ಹುಡುಕಿಕೊಡಿ ಎಂದು ಆಯಾ ಶಾಸಕರ ಕ್ಷೇತ್ರದ ಜನರು  ಸ್ಪೀಕರ್ ಗೆ ಪತ್ರ ಬರೆದಿದ್ದರು.  ಜನರ ಮನವಿ ಮೇರೆಗೆ ಶಾಸಕರು ಏಲ್ಲಿದ್ದಾರೆ ಎನ್ನುವುದನ್ನು ಹುಡುಕಿ ಅವರನ್ನ ಕರೆತನ್ನಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಅತೃಪ್ತರ ವಿರುದ್ಧ ಕ್ರಮ: ಕೈಪಡೆಗೆ 2 ವಿಷಯಗಳದ್ದೇ ಟೆನ್ಶನ್

ಈ ಹಿನ್ನೆಲೆಯಲ್ಲಿ ಗೋಕಾಕ್ ಶಾಸಕ ಮತ್ತು ಟೀಮ್ ಅನ್ನು ಹುಡುಕಲು ರಾಜ್ಯ ಗೃಹ ಇಲಾಖೆ, 40 ಜನರ ಪೊಲೀಸ್ ತಂಡವನ್ನು ಮುಂಬೈಗೆ ರವಾನಿಸಿದೆ.

ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಾಲ್ವರು ಶಾಸಕರು ಯಾರ ಸಂಪರ್ಕಕ್ಕೂ ಸಿಗದೇ ಮುಂಬೈನ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಬ್ರಹ್ಮಾಸ್ತ್ರ, ಅತೃಪ್ತ ಶಾಸಕರಿಗೆ ಅನರ್ಹತೆಯ ಭೀತಿ

ಗೋಕಾಕ್ ಶಾಸಕ [ಮಾಧ್ಯಮದಿಂದ ಬ್ಯಾನ್ ಆಗಿದ್ದಾರೆ], ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಚಿಂಚೋಳ್ಳಿ ಶಾಸಕ ಡಾ. ಉಮೇಶ್ ಜಾಧವ್ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ
ಸಿಎಂ ಬದಲಾವಣೆ ಚರ್ಚೆ ತೀವ್ರ: ಹೈಕಮಾಂಡ್‌ ಜೊತೆ ಡಿ.ಕೆ.ಶಿವಕುಮಾರ್‌ ಮಾತುಕತೆ