
ಬೆಂಗಳೂರು, [ಜ.02]: ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಸರ್ಕಾರದಲ್ಲಿ ಒಂದಲ್ಲ ಒಂದಕ್ಕೆ ಅಸಮಾಧನಗಳು ಸ್ಫೋಟಗೊಳ್ಳುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ಆರ್.ಬಿ ತಿಮ್ಮಾಪುರ್ಗೆ ಕೊಡಬೇಕಾಗಿದ್ದ ಖಾತೆಗೆ ಜೆಡಿಎಸ್ ಕನ್ನ ಹಾಕಿದೆ.
ರಾಜ್ಯದ ನೂತನ ಸಚಿವ ಸಂಪುಟದಲ್ಲಿ ವಿಧಾನಪರಿಷತ್ ಸದಸ್ಯ, ಬಾಗಲಕೋಟೆಯ ಆರ್.ಬಿ.ತಿಮ್ಮಾಪುರ್ ಮಂತ್ರಿ ಭಾಗ್ಯವೇನೋ ಸಿಕ್ಕಿದೆ. ಎಐಸಿಸಿ ಪಟ್ಟಿಯಲ್ಲಿ ಆರ್.ಬಿ ತಿಮ್ಮಾಪುರ್ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ 2 ಖಾತೆ ಹಂಚಿಕೆ ಮಾಡಿದೆ.
ಆದ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಪತ್ರದಲ್ಲಿ ಆರ್.ಬಿ.ತಿಮ್ಮಾಪುರ್ಗೆ ಸಕ್ಕರೆ ಖಾತೆ ಮಾತ್ರ ಪ್ರಕಟಿಸಿದ್ದು, ಬಂದರು ಮತ್ತು ಒಳನಾಡು ಸಾರಿಗೆ ಖಾತೆಯನ್ನ ಯಾರಿಗೂ ಹಂಚದ ಕುಮಾರಸ್ವಾಮಿ ಅವರು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ.
ಸಂಪುಟ ಪುನಾರಚನೆ ಬಳಿಕ ಆರ್.ಬಿ.ತಿಮ್ಮಾಪುರ್ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ ಎರಡು ಖಾತೆಗಳನ್ನು ನೀಡಲಾಗಿತ್ತು. ಆದ್ರೆ ನೋಟಿಫಿಕೇಶನ್ನಲ್ಲಿ ಆರ್.ಬಿ ತಿಮ್ಮಾಪುರ್ಗೆ ಸಕ್ಕರೆ ಖಾತೆ ಮಾತ್ರ ನೀಡಲಾಗಿದ್ದು, ಸುತ್ತೋಲೆಯಲ್ಲಿ ಪ್ರಕಟ ಮಾಡದಿರೋದಕ್ಕೆ ಆರ್.ಬಿ.ತಿಮ್ಮಾಪುರ್ ಶಾಕ್ ಆಗಿದ್ದಾರೆ.
ಈ ಬೆಳವಣಣಿಗೆ ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಧರ್ಮ ಪಾಲಿಸ್ತಿಲ್ವಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.