ಕಾಂಗ್ರೆಸ್ ಗ್ಯಾರಂಟಿಯನ್ನ 'ಎರೆಹುಳು'ಗೆ ಹೋಲಿಸಿ ಸಿಟಿ ರವಿ ವಾಗ್ದಾಳಿ

Published : Apr 16, 2024, 11:34 AM IST
ಕಾಂಗ್ರೆಸ್ ಗ್ಯಾರಂಟಿಯನ್ನ 'ಎರೆಹುಳು'ಗೆ ಹೋಲಿಸಿ ಸಿಟಿ ರವಿ ವಾಗ್ದಾಳಿ

ಸಾರಾಂಶ

ಮೀನು ಹಿಡಿಯುವವರು ಮೊದಲು ಗಾಳಕ್ಕೆ ಎರೆಹುಳು ಸಿಕ್ಕಿಸುತ್ತಾರೆ. ಎರೆಹುಳು ತಿನ್ನುವ ಆಸೆಯಲ್ಲಿ ಮೀನುಗಳ ಗಾಳಕ್ಕೆ ಸಿಕ್ಕಿಕೊಳ್ಳುತ್ತೇವೆ. ಎರೆಹುಳು  ಸಿಕ್ಕಿಸಿದಂತೆ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಗಾಳ ಹಾಕಿದೆ ಎಂದು ಸಿಟಿ ರವಿ ಗ್ಯಾರಂಟಿ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯಪುರ (ಏ.16): ಕಾಂಗ್ರೆಸ್ ಗ್ಯಾರಂಟಿ ಓಟ್‌ ಬ್ಯಾಕ್ ಸೃಷ್ಟಿ ಮಾಡುತ್ತೆ. ಬಳಿಕ ಹರಿಕೆ ಕುರಿಗಳನ್ನಾಗಿ ಮಾಡುತ್ತೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಹೇಳಿದರು.

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮೀನು ಹಿಡಿಯುವವರು ಮೊದಲು ಗಾಳಕ್ಕೆ ಎರೆಹುಳು ಸಿಕ್ಕಿಸುತ್ತಾರೆ. ಎರೆಹುಳು ತಿನ್ನುವ ಆಸೆಯಲ್ಲಿ ಮೀನುಗಳ ಗಾಳಕ್ಕೆ ಸಿಕ್ಕಿಕೊಳ್ಳುತ್ತೇವೆ. ಎರೆಹುಳು  ಸಿಕ್ಕಿಸಿದಂತೆ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಗಾಳ ಹಾಕಿದೆ. ಇವರ ಉದ್ದೇಶ ಜನರ ನಿಜವಾದ ಕಾಳಜಿ ಅಲ್ಲ. ಗ್ಯಾರಂಟಿ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದು ಲೂಟಿ ಮಾಡುವುದು ಉದ್ದೇಶವಾಗಿದೆ. ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಗ್ಯಾರಂಟಿ ಯೋಜನೆ ವಿರುದ್ಧ ಟೀಕಿಸಿದರು.

ಮೋದಿ ಗ್ಯಾರಂಟಿ ಬಡವರ ಬದುಕನ್ನು ಬದಲಾಯಿಸುತ್ತದೆ. ದೇಶವನ್ನ ಅಬಿವೃದ್ಧಿಪಥದ ಕಡೆಗೆ ಕೊಂಡೊಯ್ಯುತ್ತದೆ. ಹೀಗಾಗಿ ಈ ಬಾರಿ ಮತದಾನ ಮಾಡುವಾಗ ಯೋಚಿಸಿ ಎರೆಹುಳು ಆಸೆಗೆ ಗಾಳಕ್ಕೆ ಸಿಕ್ಕಿಕೊಳ್ಳುತ್ತಿರೋ ಅಭಿವೃದ್ಧಿ ಪಥದೆಡೆಗೆ ಸಾಗುತ್ತಿರೋ ಯೋಚಿಸಿ ಎನ್ನುವ ಮೂಲಕ ಬಿಜೆಪಿಗೆ ಬೆಂಬಲಿಸುವಂತೆ ತಿಳಿಸಿದರು.

ಬಾಂಬ್ ಇರುವವರ ಪರ ಇರುವವರಿಗೆ ಪಾಠ ಕಲಿಸಿ: ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KPSC Scam: ಪಶು ವೈದ್ಯರ ನೇಮಕದಲ್ಲಿ 400 ಕೋಟಿ ಲಂಚ: ಬಿವೈ ವಿಜಯೇಂದ್ರ ಗಂಭೀರ ಆರೋಪ
Bhagirath Choudhary: ಸೌತೆಕಾಯಿಗೆ ₹99 ಲಕ್ಷ ಸಬ್ಸಿಡಿ ಪಡೆದ ಸಚಿವನಿಂದ ಹಣ ವಾಪಸ್‌!