Karnataka Election 2023: ಮತ​ದಾ​ನ​ದಲ್ಲಿ ರಾಮ​ನ​ಗರಕ್ಕೆ ರಾಜ್ಯ​ದ​ಲ್ಲಿಯೇ 2ನೇ ಸ್ಥಾನ

Published : May 12, 2023, 03:58 PM IST
Karnataka Election 2023: ಮತ​ದಾ​ನ​ದಲ್ಲಿ ರಾಮ​ನ​ಗರಕ್ಕೆ ರಾಜ್ಯ​ದ​ಲ್ಲಿಯೇ 2ನೇ ಸ್ಥಾನ

ಸಾರಾಂಶ

ಚುನಾವಣಾ ಆಯೋಗ ಮತದಾನದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸಲು ರೂಪಿಸಿದ ಕಾರ್ಯಕ್ರಮಗಳು ಹಾಗೂ ರಾಜಕೀಯ ನಾಯಕರ ಅಬ್ಬರದ ಪ್ರಚಾರದ ಪರಿಣಾಮ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾರ್ಹವಾದ ಮತದಾನ ನಡೆದಿದ್ದು, ರಾಜ್ಯ​ದ​ಲ್ಲಿಯೇ 2ನೇ ಸ್ಥಾನ ಪಡೆ​ದು​ಕೊಂಡಿ​ದೆ. 

ಎಂ.ಅ​ಫ್ರೋಜ್‌ ಖಾನ್‌

ರಾಮನಗರ (ಮೇ.12): ಚುನಾವಣಾ ಆಯೋಗ ಮತದಾನದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸಲು ರೂಪಿಸಿದ ಕಾರ್ಯಕ್ರಮಗಳು ಹಾಗೂ ರಾಜಕೀಯ ನಾಯಕರ ಅಬ್ಬರದ ಪ್ರಚಾರದ ಪರಿಣಾಮ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾರ್ಹವಾದ ಮತದಾನ ನಡೆದಿದ್ದು, ರಾಜ್ಯ​ದ​ಲ್ಲಿಯೇ 2ನೇ ಸ್ಥಾನ ಪಡೆ​ದು​ಕೊಂಡಿ​ದೆ. ಕಳೆದ 14 ವಿಧಾನಸಭಾ ಚುನಾವಣೆಗಳಿಗೆ ಹೋಲಿಕೆ ಮಾಡಿದಲ್ಲಿ 2023 ಚುನಾ​ವ​ಣೆ​ಯಲ್ಲಿ ಶೇಕ ಡ 85.04ರಷ್ಟು ಮತ​ದಾನ ಆಗಿ​ರು​ವುದು ದಾಖ​ಲೆ​ಯಾ​ಗಿದೆ. 2018ರ ಚುನಾ​ವ​ಣೆಗೆ (ಶೇ.84.55) ಹೋಲಿಸಿ​ದರೆ ಈ ಬಾರಿ ಶೇ 0.49ರಷ್ಟು ಮತ​ದಾನ ಅಧಿ​ಕ​ವಾ​ಗಿದೆ.

ಈವರೆಗಿನ ಚುನಾವಣೆಗಳಲ್ಲಿ ಅತಿ ಕಡಿಮೆ ಎಂದರೆ ರಾಮನಗರ ಕ್ಷೇತ್ರದಲ್ಲಿ 1967ರಲ್ಲಿ ಶೇ 55.57, ಚನ್ನಪಟ್ಟಣ ಕ್ಷೇತ್ರದಲ್ಲಿ 1972ರಲ್ಲಿ ಶೇ.64ರಷ್ಟು , ಕನಕಪುರ ಕ್ಷೇತ್ರದಲ್ಲಿ ಶೇ.64ರಷ್ಟುಹಾಗೂ ಮಾಗಡಿ ಕ್ಷೇತ್ರದಲ್ಲಿ 1962ರಲ್ಲಿ ಶೇ.61.56 ರಷ್ಟುಮತದಾನ ನಡೆದಿದೆ. 2013ರ ಚುನಾವಣೆಯಲ್ಲಿ ರಾಮನಗರದಲ್ಲಿ ಶೇ 80.57, ಚನ್ನಪಟ್ಟಣ - ಶೇ 84.77, ಕನಕಪುರ - ಶೇ 83.63 ಹಾಗೂ ಮಾಗಡಿ ಕ್ಷೇತ್ರದಲ್ಲಿ ಶೇ83.88 ರಷ್ಟು ಮತದಾನ ನಡೆದಿತ್ತು. 2018ರಲ್ಲಿ ರಾಮ​ನ​ಗರ ಕ್ಷೇತ್ರ​ದಲ್ಲಿ ಶೇ 82.55, ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಶೇ 86.32, ಕನ​ಕ​ಪುರ ಕ್ಷೇತ್ರ​ದಲ್ಲಿ ಶೇ 83.40 ಹಾಗೂ ಮಾಗಡಿ ಕ್ಷೇತ್ರ​ದಲ್ಲಿ 85.83ರಷ್ಟು ಮತ​ದಾನ ಆಗಿತ್ತು.

ಖರ್ಗೆ, ಸಿದ್ದು, ಡಿಕೆಶಿ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ: ಸಿ.ಪುಟ್ಟರಂಗಶೆಟ್ಟಿ

2023ರಲ್ಲಿ ಚನ್ನ​ಪ​ಟ್ಟಣ ಹೊರತು ಪಡಿ​ಸಿ​ ಕ್ಷೇತ್ರವಾರು ಚಲಾವಣೆಯಾಗಿರುವ ಮತದಾನದ ಶೇಕಡವಾರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡು ಬಂದಿದೆ. ರಾಮ​ನ​ಗರ ಕ್ಷೇತ್ರ​ದಲ್ಲಿ ಶೇ 84.09, ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಶೇ 85.27, ಕನ​ಕ​ಪುರ ಕ್ಷೇತ್ರ​ದಲ್ಲಿ ಶೇ 84.52 ಹಾಗೂ ಮಾಗಡಿ ಕ್ಷೇತ್ರ​ದಲ್ಲಿ ಶೇ 86.18ರಷ್ಟುಮತ​ದಾನ ನಡೆ​ದಿ​ದೆ.

ಯಶಸ್ಸು ತಂದ ಜಾಗೃತಿ ಕಾರ್ಯಕ್ರಮ: ಚುನಾವಣಾ ಆಯೋಗವು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಮತದಾರನನ್ನು ಮತಗಟ್ಟೆಗೆ ಸೆಳೆದು ಮತದಾನ ಪ್ರಮಾಣ ಹೆಚ್ಚಿಸಲು ಅರಿವು ಮೂಡಿಸುವಂತಹ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಇದರ ಪರಿಣಾಮ 2023ರ ಜನ​ವರಿ 1ರವರೆಗೆ 8,84,044 ಇದ್ದ ಮತ​ದಾ​ರರ ಸಂಖ್ಯೆ ಪರಿ​ಷ್ಕೃತ ಪಟ್ಟಿ​ಯಲ್ಲಿ (ಏಪ್ರಿಲ್‌ 20ಕ್ಕೆ ) 20,658 ಮಂದಿ ಸೇರ್ಪ​ಡೆ​ಯಾಗಿ 9,04,702ಕ್ಕೆ ಹೆಚ್ಚ​ಳ​ಗೊಂಡಿತು. ಜಿಲ್ಲಾ ಸ್ವೀಪ್‌ ಸಮಿ​ತಿಯು ವಿಶೇಷ ಚೇತ​ನರ ರ್ಯಾಲಿ, ರಂಗೋಲಿ ಬಿಡಿ​ಸುವ ಕಾರ್ಯ​ಕ್ರ​ಮ, ವಿದ್ಯಾ​ರ್ಥಿ​ಗಳ ಜಾಥಾ ಹಾಗೂ ಮಾನವ ಸರಪಳಿ ಕಾರ್ಯ​ಕ್ರಮ, ವಾಕ​ಥಾನ್‌, ನಮ್ಮ ನಡೆ ಮತ​ಗ​ಟ್ಟೆಯ ಕಡೆ ಘೋಷಣೆ ಅಡಿ​ಯಲ್ಲಿ ಬೈಕ​ಥಾನ್‌ , ಪಂಜಿನ ಮೆರ​ವ​ಣಿಗೆ ಸೇರಿ​ದಂತೆ ಅನೇಕ ಕಾರ್ಯ​ಕ್ರ​ಮ​ಗಳ ಮೂಲಕ ಜ​ನ​ರಲ್ಲಿ ಮತದಾ​ನದ ಅರಿವು ಮೂಡಿ​ಸ​ಲಾ​ಯಿ​ತು.

ಜಿಲ್ಲೆ​ಯಲ್ಲಿ ಕಡಿಮೆ ಮತ​ದಾನ ಆಗು​ತ್ತಿ​ರುವ ಮತ​ಗ​ಟ್ಟೆ​ಗ​ಳನ್ನು ಗುರು​ತಿಸಿ ಕಾರಣ ಪತ್ತೆ ಮಾಡ​ಲಾ​ಯಿತು. ಆ ಭಾಗ​ದಲ್ಲಿ ಶಾಲಾ - ಕಾಲೇಜು ವಿದ್ಯಾ​ರ್ಥಿ​ಗಳ ಮೂಲಕ ಮತ​ದಾ​ನದ ಕುರಿತು ಅರಿವು ಮೂಡಿ​ಸ​ಲಾ​ಯಿತು. ಅಲ್ಲದೆ, ಬಿಡದಿ ಮತ್ತು ಹಾರೋ​ಹಳ್ಳಿ ಕೈಗಾ​ರಿಕಾ ಪ್ರದೇ​ಶ​ಗ​ಳ​ಲ್ಲಿನ ಕಾರ್ಖಾ​ನೆ​ಗಳ ಕಾರ್ಮಿ​ಕ​ರ​ಲ್ಲಿಯೂ ಮತ​ದಾ​ನದ ಜಾಗೃತಿ ಮೂಡಿ​ಸಿ​ದೇವು. ಈ ಎಲ್ಲ ಕಾರ​ಣ​ಗ​ಳಿಂದ ಮತ​ದಾನ ಪ್ರಮಾಣ ಹೆಚ್ಚಳವಾಗಿದೆ. ಮುಂಬ​ರುವ ಲೋಕಸಭಾ ಚುನಾ​ವ​ಣೆ​ಯಲ್ಲಿ ಶೇಕಡ 90ರಷ್ಟುಮತ​ದಾನದ ಗುರಿ​ಯೊಂದಿಗೆ ಕಾರ್ಯ​ನಿ​ರ್ವ​ಹಿ​ಸು​ತ್ತೇವೆ ಎಂದು ಜಿಲ್ಲಾ ಪಂಚಾ​ಯಿತಿ ಸಿಇಒ ದಿಗ್ವಿ​ಜಯ್‌ ಬೋಡ್ಕೆ ’ಕನ್ನ​ಡ​ಪ್ರ​ಭ’ಕ್ಕೆ ಪ್ರತಿ​ಕ್ರಿಯೆ ನೀಡಿ​ದ​ರು.

ಮ​ತ​ದಾ​ರರ ಗಮನ ಸೆಳೆದ ಮಾದರಿ ಮತಗಟ್ಟೆಗಳು: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 05 ಪಿಂಕ್‌ ಮತಗಟ್ಟೆಗಳು, 01 ಪಿಡಬ್ಲ್ಯೂಡಿ ಮತಗಟ್ಟೆ, 01 ಥೀಮ್‌ ಆಧಾ​ರಿತ ಮತಗಟ್ಟೆಗಳು ಮತ​ದಾ​ರ​ರನ್ನು ಆಕ​ರ್ಷಿ​ಸಿ​ದವು. ವಿಶೇಷ ಚೇತನ ಮತ್ತು ಹಿರಿಯ ನಾಗ​ರೀ​ಕ​ರಿಗೆ ಮತ​ಗಟ್ಟೆಗೆ ಬರಲು ಅನು​ಕೂ​ಲ​ವಾ​ಗು​ವಂತೆ ವಾಹ​ನದ ವ್ಯವಸ್ಥೆ ಮಾಡ​ಲಾಗಿತ್ತು. ಇದರ ಮೇಲು​ಸ್ತು​ವಾ​ರಿ​ಯನ್ನು ತಾಪಂ ಕಾರ್ಯ​ನಿ​ರ್ವಾ​ಹಕ ಅಧಿ​ಕಾ​ರಿ​ಗಳು ವಹಿ​ಸಿ​ದ್ದರು. ಮತಗಟ್ಟೆಗಳಲ್ಲಿ ವಿಶೇಷಚೇತನರು ಸುಗಮವಾಗಿ ಮತ ಚಲಾಯಿಸಲು ವ್ಹೀಲ್‌ ಚೇರ್‌ ಹಾಗೂ ರ್ಯಾಂಪ್‌ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಚೇತನ ಮತದಾರರು ಮತ್ತು ವೃದ್ಧ ಮತದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ವಯಂ ಸೇವಕರು ಮತಕೇಂದ್ರದ ಬಳಿ ಸಹಾಯ ಮಾಡಿದರು. ಎಲ್ಲಾ ಮತಕೇಂದ್ರಗಳಲ್ಲಿ ಬೂದಗಾಜುಗಳನ್ನು ಒದಗಿಸಲಾಗಿತ್ತು. ಅಂಧ ಮತದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬ್ರೈಲ್‌ ಲಿಪಿಯಲ್ಲಿರುವ ಬ್ಯಾಲೆಚ್‌ ಪೇಪರ್‌ ಗಳನ್ನು ಪ್ರತಿ ಮತಗಟ್ಟೆಗಳಿಗೆ ಒದಗಿಸಲಾಗಿತ್ತು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

ಜೆಡಿಎಸ್‌ ಕುಟುಂಬವೇ ಬಂದರೂ ಗೆಲುವು ನನ್ನದೇ: ಪ್ರೀತಂ ಗೌಡ

ಮತದಾರರದ್ದು ಕೇವಲ ಒಂದು ಮತ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಮೌಲ್ಯ. ದೃಢವಾದ ಮತದಿಂದ ದೃಢವಾದ ಸರ್ಕಾರ ನಿರ್ಮಾಣ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಮತದಾರರು ತಪ್ಪದೇ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಿದೆ. ಈ ಕಾರಣಕ್ಕಾಗಿ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮತದಾರರು ಉತ್ಸಾಹದಿಂದ ಮತದಾನ ಮಾಡಿರುವುದು ತುಂಬಾ ಖುಷಿ ತಂದಿದೆ.
-ದಿಗ್ವಿ​ಜಯ್‌ ಬೋಡ್ಕೆ, ಅಧ್ಯಕ್ಷರು, ಸ್ವೀಪ್‌ ಸಮಿತಿ, ರಾಮ​ಗ​ನ​ರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ