ಕೈ-ಬಿಜೆಪಿ ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ಭಾಜಪ ನಡೆಯ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಹೈಕಮಾಂಡ್!

Published : Jun 25, 2025, 11:14 AM IST
Karnataka Political President News

ಸಾರಾಂಶ

ಕರ್ನಾಟಕ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷ ಸ್ಥಾನಗಳ ಆಯ್ಕೆ ಕುರಿತು ತೀವ್ರ ಕಸರತ್ತು ನಡೆಯುತ್ತಿದೆ. ಬಿಜೆಪಿಯ ನಡೆಯನ್ನು ಅವಲಂಬಿಸಿ ಕಾಂಗ್ರೆಸ್ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜಾತಿ ಸಮೀಕರಣ ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳು ತಂತ್ರ ರೂಪಿಸುತ್ತಿವೆ.

ಬೆಂಗಳೂರು (ಜೂ. 25): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಧ್ಯಕ್ಷ ಸ್ಥಾನಗಳ ವಿಚಾರದಲ್ಲಿ ಚತುರ ರಾಜಕೀಯ ನಡೆಗಳು ಕಂಡುಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಜೋರಾಗಿ ಚರ್ಚೆಗಳು ನಡೆಯುತ್ತಿದ್ದರೆ, ಇದನ್ನೇ ಆಧಾರವನ್ನಾಗಿ ಮಾಡಿಕೊಂಡು ಕೆಪಿಸಿಸಿ ಅಧ್ಯಕ್ಷ ಪಟ್ಟದ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಲವು ತಂತ್ರಗಳನ್ನು ರೂಪಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷನ ಆಯ್ಕೆ ವಿಚಾರವನ್ನ ಕಾಂಗ್ರೆಸ್ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿಶೇಷವಾಗಿ ಈ ಬದಲಾವಣೆಯಲ್ಲಿರುವ ಜಾತಿ ಸಮೀಕರಣದ ಬಗ್ಗೆ ಕೈ ಪ್ರಮುಖ ರಾಜಕೀಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಮತ್ತೆ ಮಣೆ ಹಾಕಿದರೆ, ಕಾಂಗ್ರೆಸ್ ತನ್ನ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಲ್ಲದ ಸಮುದಾಯದವರಿಗೆ ನೀಡುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

ಇದರಿಂದಲೇ ಕಾಂಗ್ರೆಸ್ ಪಕ್ಷ ತನ್ನ ನಾಯಕರ ಪಟ್ಟಿಯಲ್ಲಿ ಜಾತಿ ಮತ್ತು ಭೌಗೋಳಿಕ ಸಮತೋಲನ ಕಲ್ಪಿಸಲು ಯತ್ನಿಸುತ್ತಿದೆ. ಹೈಕಮಾಂಡ್‌ ಪ್ರಮುಖರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಹೆಸರುಗಳು ಓಡಾಡುತ್ತಿದ್ದರೂ, ಈಶ್ವರ್ ಖಂಡ್ರೆ ಮತ್ತು ಸತೀಶ್ ಜಾರಕಿಹೊಳಿಯವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಹೈಕಮಾಂಡ್ ಈ ಇಬ್ಬರನ್ನೂ ದೂರವಾಣಿ ಮೂಲಕ ಹಾಗೂ ನೇರವಾಗಿ ಕರೆದು ಮಾತುಕತೆ ನಡೆಸಿದ ವಿಷಯವೂ ಬಹಿರಂಗವಾಗಿದೆ.

ಉತ್ತರ ಕರ್ನಾಟಕದವರಿಗೆ ಮಣೆ:

ಹೈಕಮಾಂಡ್‌ಗೆ ಉತ್ತರ ಕರ್ನಾಟಕದ ಮತಭ್ಯಾಂಕರ ಮಹತ್ವ ಗೊತ್ತಿರುವುದರಿಂದ, ಅಧ್ಯಕ್ಷ ಸ್ಥಾನವನ್ನು ಆ ಭಾಗದ ಪ್ರಭಾವಿ ನಾಯಕರಿಗೆ ನೀಡಲು ಪ್ರಾಮುಖ್ಯತೆ ನೀಡಿದೆ. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಬಿಜೆಪಿ ತನ್ನ ಬಲ ಗಟ್ಟಿ ಮಾಡಲಿದೆ ಎಂದು ಸೂಚನೆಗಳಿರುವಾಗ, ಕಾಂಗ್ರೆಸ್ ಕೂಡ ಅದಕ್ಕೆ ತಕ್ಕಂತೆ ಎದುರೇಟು ನೀಡುವ ತಂತ್ರ ರೂಪಿಸುತ್ತಿದೆ.

ಬಿಜೆಪಿ ನಡೆಗೆ ಪ್ರತಿಯಾಗಿ ಸಮರ್ಥ ನಾಯಕನ ಆಯ್ಕೆಗೆ ಕಾಂಗ್ರೆಸ್ ಕಸರತ್ತು:

'ತನು, ಮನ, ಧನ'ದಿಂದ ಪಕ್ಷಕ್ಕಾಗಿ ಕೆಲಸಮಾಡುವ, ಕಾರ್ಯಕರ್ತರನ್ನು ಒಗ್ಗೂಡಿಸಬಲ್ಲ ನಾಯಕನಿಗಾಗಿ ಪಕ್ಷದ ಹೈಕಮಾಂಡ್ ಹುಡುಕಾಟ ನಡೆಸುತ್ತಿದೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಈ ಅಧ್ಯಕ್ಷರ ಆಯ್ಕೆ ತೀರ್ಮಾನವಾಗಲಿದ್ದು, ಯಾವುದೇ ತಪ್ಪು ಹೆಜ್ಜೆ ಇಡದಿರಲು ಎಚ್ಚರವಹಿಸುತ್ತಿವೆ. ಬಿಜೆಪಿಯ ಹೊಸ ಅಧ್ಯಕ್ಷರು ಘೋಷಣೆಯಾಗುವ ವರೆಗೆ ಕಾಂಗ್ರೆಸ್ ತನ್ನ ಯೋಜನೆ ಹಿಡಿದಿಟ್ಟುಕೊಂಡಿದ್ದು, ತಕ್ಕ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ತಂತ್ರ ಕೈಗೊಂಡಿದೆ. ಏಕೆಂದರೆ ಬಿಜೆಪಿಯ ಆಯ್ಕೆಯು ಕಾಂಗ್ರೆಸ್‌ಗೆ ತನ್ನ ಜಾತಿ ಸಮೀಕರಣವನ್ನು ಹೊಂದಿಸಿಕೊಳ್ಳಲು ಸೂಕ್ತ ತಂತ್ರವೂ ಆಗಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ