
ಬೆಂಗಳೂರು, (ಜ.06): ಕಾಂಗ್ರೆಸ್, ಹಿರಿಯ ನಾಯಕ, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದು ಸ್ಪಷ್ಟವಾಗಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ದಿನಾಂಕ ಫಿಕ್ಸ್ ಆಗಿಲ್ಲ.
ಈ ಬಗ್ಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಈ ರಾಜ್ಯದ ಜನರಿಗೆ ಒಳ್ಳೇದಾಗಬೇಕು ಎಂದು ಜೆಡಿಎಸ್ಗೆ ಹೋಗ್ತಿದ್ದೇನೆಯೇ ಹೊರತು ಮತ್ಯಾವುದೇ ಕಾರಣದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಖುದ್ದು ಭೇಟಿಯಾಗಿ ಬೇಡವೆಂದ್ರೂ ದೇವೇಗೌಡ್ರ ಮನೆಗೆ ಹೋದ ಕಾಂಗ್ರೆಸ್ ಹಿರಿಯ ನಾಯಕ...!
ಜೆಡಿಎಸ್ಗೆ ಸೇರೋದು, ಕಾಂಗ್ರಸ್ಸಿಗೆ ರಾಜೀನಾಮೆ ನೀಡೋದಕ್ಕೆ ಸಮಯಾವಕಾಶವಿದೆ. ನಾನೀಗ ಕಾಂಗ್ರೆಸ್ಬಿಟ್ಟರೆ ನನ್ನ ಎಮ್ಎಲ್ಸಿ ಸ್ಥಾನ ಹೋಗುತ್ತದೆ. ಅದಕ್ಕೆ ಏನು ಮಾಡೋಕಾಗತ್ತೆ. ದೇವರ ಅನುಗ್ರಹದಿಂದ ನಾನು ಈ ವರೆಗೆ ಮಾಡಿರೋ ಯಾವುದೇ ಕಾರ್ಯ ವಿಫಲವಾಗಿಲ್ಲ, ಅದೇ ರೀತಿ ನಾನು ಹೇಳಿರುವ ಮಾತುಗಳೂ ಸುಳ್ಳಾಗಿಲ್ಲ ಎಂದು ಹೇಳಿದರು.
ಡಿಸೆಂಬರ್ ಬಂದರೆ ರಾಜಕೀಯ ಬದಲಾವಣೆ ಆಗುತ್ತೆ ಅಂತ ಹೇಳಿದ್ದೆ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮತ್ತಷ್ಟು ಬದಲಾಗಲಿದೆ ಎಂದು ವಿಷ್ಯ ನುಡಿದರು.
ಯಡಿಯೂರಪ್ಪ ಹಾಗೂ ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ. ಎಲ್ಲ ಬದುಕಿದ್ರೆ ಸಾಕು ಅಂತ ಓಡಿ ಹೋಗ್ತಾರೆ. ಅಪ್ಪ ಮಕ್ಕಳ ಪಕ್ಷ ಕಾಂಗ್ರಸ್ನಲ್ಲಿ ಇಲ್ವಾ, ಆರ್.ಜೆ.ಡಿಯಲ್ಲಿ ಇಲ್ವಾ...? ದೇವೇಗೌಡರು ಒಳ್ಳೆ ತಳಿಯ ಬೀಜ ಇಟ್ಕೊಂಡಿದಾರೆ. ರೈತರು ಮುಂದಿನ ಬೆಳೆ ಬೆಳೆಯೋಕೆ ಬೀಜ ಇಟ್ಕೊಳ್ತಾರೋ,..? ಅದೇ ರೀತಿ ಉತ್ತಮ ಬೀಜ ಇಟ್ಕೊಂಡಿದಾರೆ ಎಂದು ಜೆಡಿಎಸ್ ಅನ್ನು ಗುಣಗಾನ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.