
ನವದೆಹಲಿ( ನ. 10) ಬಿಹಾರ ಹೊರತುಪಡಿಸಿ ದೇಶಾದ್ಯಂತ 58 ಸ್ಥಾನಗಳಿಗೆ ನಡೆದ ಉಪಚುನಾವಣೆ 48 ಕಡೆ ಬಿಜೆಪಿ ಗೆದ್ದಿದೆ ಮತದಾರರು ನಿಶ್ಚಳ ಬಹುಮತ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆರ್ ಆರ್ ನಗರ, ಶಿರಾದಲ್ಲಿ ನಮಗೆ ವಿಜಯ ಸಿಕ್ಕಿದೆ. ಎಲ್ಲಿ ಬಿಜೆಪಿ ಅಲೆ? ಎಂದು ಕೇಳುತ್ತಿದ್ದವರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
'ಸಿದ್ದರಾಮಯ್ಯಗೆ ಈಗ ಜ್ಞಾನೋದಯ, ಬಿಜೆಪಿಗೆ ಬೆಂಬಲ'
ಮೋದಿ ಮತ್ತು ಬಿಎಸ್ ವೈ ನೇತೃತ್ವವನ್ನು ಜನ ಒಪ್ಪಿಕೊಂಡಿದ್ದಾರೆ. ಬಿಎಸ್ ವೈ ಆಡಳಿತವನ್ನು ಕರ್ನಾಟಕ ಜನರು ಮೆಚ್ಚುಕೊಂಡಿದ್ದಾರೆ ಅನ್ನೋದು ಈಗ ಸಾಬೀತಾಗಿದೆ. ಬಿಹಾರದಲ್ಲೂ ಎನ್ ಡಿ ಎ ಸರ್ಕಾರ ರಚನೆ ಮಾಡಲಿದೆ. ಪಶ್ಚಿಮ ಬಂಗಾಳದಲ್ಲೂ ಟಿಎಂಸಿ ಗೆ ಸೋಲಾಗಲಿದೆ ಎಂದು ಭವಿಷ್ಯ ನುಡಿದರು.
ಬಿಹಾರ ಚುನಾವಣಾ ಫಲಿತಾಂಶ ರೋಚಕ ಘಟ್ಟಕ್ಕೆ ತೆರಳುತ್ತಿದ್ದು ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ರೋಚಕ ಹಣಾಹಣಿ ಏರ್ಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.